Friday, March 15, 2019

drksridhammananda ಸಮ್ಮಾದೃಷ್ಟಿಕೋನ (ಯೋಗ್ಯ ಮನೋಭಾವ)






ಅಧ್ಯಾಯ - 5

ಸಮ್ಮಾದೃಷ್ಟಿಕೋನ (ಯೋಗ್ಯ ಮನೋಭಾವ)

5.1 ಔಷಧಗಳ ದುರುಪಯೋಗದ ಅಪಾಯ ಮತ್ತು ಮದ್ಯಪಾನತ್ವ
ಮಾನವನ ಭೌತಿಕ ಮತ್ತು ನೈತಿಕ ಅವನತಿಗೆ ಮದ್ಯಪಾನವು ಪ್ರಧಾನ ಕಾರಣಗಳಲ್ಲಿ ಒಂದಾಗಿದೆ. ವರ್ತಮಾನದಲ್ಲಿ ಇನ್ನೊಂದು ಅಪಾಯಕಾರಿ ದುರುಪಯೋಗ ಚಲಾವಣೆಯಲ್ಲಿದೆ. ಅವೇ ಡ್ರಗ್ಸ್ಗಳು. ಉದಾಹರಿಸುವುದಾದರೆ: ಹೆರೊಯಿನ್, ಇದು ಮಾನವನಿಗೆ ಮತ್ತು ಸಮಾಜಕ್ಕೆ ಅತ್ಯಂತ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಸಮಸ್ಯೆ ಇಂದು ವಿಶ್ವಾದ್ಯಂತ ಹರಡಿದೆ. ಔಷಧಗಳ ದುರುಪಯೋಗದ ಪ್ರತಿಘಾತವು ಮದ್ಯಪಾನಕ್ಕಿಂತ ಗಂಭೀರ ಮತ್ತು ಮಾರಣಾಂತಿಕವಾಗಿದೆ. ಕಳ್ಳತನ, ದರೋಡೆ, ಲೈಂಗಿಕ ಅಪರಾಧಗಳು ಮತ್ತು ಅಪಾರ ಮೊತ್ತದ ಹಣವನ್ನು ವಂಚಿಸುವುದು ಇವೆಲ್ಲ ಡ್ರಗ್ಸ್ನ ದುರುಪಯೋಗದಿಂದ ಆಗಿದೆ.
ಡ್ರಗ್ಸ್ ಡಾನ್ಗಳು ಮುಗ್ಧ ಜನಸಂಖ್ಯೆಯ ಮರಣ ವ್ಯಾಪಾರಿಗಳಾಗುವಷ್ಟರಲ್ಲೇ ತೃಪ್ತಿ ತಾಳುತ್ತಿಲ್ಲ. ಜೊತೆಗೆ ದುರ್ಬಲ ಸಕರ್ಾರಗಳನ್ನು ತಮ್ಮ ಮುಷ್ಠಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಲಂಚ ಮತ್ತು ಸಕರ್ಾರಗಳ ಬುಡಮೇಲಿಗೂ ಕೈಹಾಕುತ್ತಾರೆ. ಬಾಂಬ್ ತಯಾರಿಕೆಯಲ್ಲೂ ಮಧ್ಯೆ ಪ್ರವೇಶಿಸಿದ್ದಾರೆ. ನಾಗರಿಕ ನೀತಿಯ ಪ್ರಕಾರ ಸಕರ್ಾರಗಳು ನಾಗರಿಕರನ್ನು ಈ ಡ್ರಗ್ಸ್ನ ದುರುಪಯೋಗದಿಂದ ರಕ್ಷಿಸಬೇಕಾಗಿದೆ. ಆದರೂ ಡ್ರಗ್ಸ್ ಡಾನ್ಗಳು ತಮ್ಮ ಪೈಶಾಚಿಕ ಯೋಜನೆಗಳಿಂದ, ಸಮಾಜ ಹಾಗು ಮಾನವನ ಘನತೆಯ ತಳಹದಿಗೆ ಬೆದರಿಕೆ ತಂದಿವೆ. ಮನಸಾಕ್ಷಿಯ ಪ್ರತಿನಿಧಿಗಳು ಮತ್ತು ಅವರ ಕುಟುಂಬಗಳು ಸದಾ ಗಂಡಾಂತರಗಳಿಗೆ ಬಲಿಯಾಗಬೇಕಿದೆ. ಏಕೆಂದರೆ ಅವರು ಡ್ರಗ್ಸ್ ಡಾನ್ಗಳ ಅನೀತಿಯುತವಾದ ದಾರಿಗಳಿಗೆ ಅಡ್ಡಿಯಾಗಲು ಧೈರ್ಯ ತಾಳಿದ್ದರಿಂದಾಗಿ ಹೀಗಾಗಿದೆ. 
ಅಂತರರಾಷ್ಟ್ರೀಯ ಸಹಕಾರವಿಲ್ಲದಿದ್ದರೆ ಈ ಕೆಟ್ಟ ಪಿಡುಗನ್ನು ಮಟ್ಟಹಾಕಲು ಸಾಧ್ಯವಾಗುವುದಿಲ್ಲ. ಹಲವಾರು ದೇಶಗಳ ಶಕ್ತಿ ಮತ್ತು ಭವಿಷ್ಯವು ನಿಜಕ್ಕೂ ಕರಾಳವಾಗಲಿದೆ. ವಿಶ್ವದಾದ್ಯಂತ ಅಸಂಖ್ಯಾ ಕೋಟಿಗಳು ಹಣ ಕೆಟ್ಟಾಚಾಳಿಗಳಿಂದ ಬಿಡುಗಡೆ ಹೊಂದಲಿಕ್ಕಾಗಿ ವಿನಿಯೋಗಿಸುತ್ತಿದ್ದರೂ, ಈ ಉನ್ಮತ್ತತೆಯ ಉತ್ಸಾಹವು ಜೀವಂತವಾಗಿಯೇ ಇದೆ. 
ಈ ಭಯಾನಕ ಚಟಗಳನ್ನು ಯಾವುದೇ ರೀತಿಯಲ್ಲಾಗಲಿ ಅಳಿಸಿಹಾಕುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಮಕ್ಕಳನ್ನು ಇದಕ್ಕೆ ಬಲಿಯಾಗದಂತೆ ತಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮದ್ಯ ವ್ಯಸನಿಯ ಅಥವಾ ಡ್ರಗ್ ವ್ಯಸನಿಯ ಜೀವನವಂತೂ ಭೂಮಿಯ ಮೇಲಿನ ನರಕದಂತೆ. ಆತನನ್ನು ಬಹುಬೇಗನೆ ಗೋರಿಗೆ ಕರೆದೊಯ್ಯುತ್ತದೆ. ಮಹಾನ್ ಧರ್ಮಗಳಿಗೆ ಸೇರಿದ ಕೆಲವು ದೇಶಗಳು ಅಫೀಮನ್ನು ಅಪಾರವಾಗಿ ಉತ್ಪಾದಿಸಿ ವಿಶ್ವದೆಲ್ಲೆಡೆ ಹಂಚುತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿಯಾಗಿದೆ.



5.2 ಕುಡುಕತನ
ಕುಡಿತವು ವಿಚಾರಶಕ್ತಿಯನ್ನು ಹೊರದಬ್ಬುತ್ತದೆ, 
ನೆನಪನ್ನು ಮುಳುಗಿಸುತ್ತದೆ, 
ಮೆದುಳನ್ನು ವಿಕೃತವನ್ನಾಗಿಸುತ್ತದೆ, 
ಶಕ್ತಿಯನ್ನು ಕುಂದಿಸುತ್ತದೆ, 
ರಕ್ತವನ್ನು ಕೆರಳಿಸುತ್ತದೆ, 
ವಾಸಿಯಾಗದ ಅಂತರ್ ಮತ್ತು ಬಾಹ್ಯ ಗಾಯಗಳಿಗೆ ಕಾರಣವಾಗಿದೆ, 
ದೇಹಕ್ಕೆ ಮಾಟಗಾತಿಯಂತೆ, 
ಮನಕ್ಕೆ ಪಿಶಾಚಿಯಂತೆ
ದುಡ್ಡುಚೀಲಕ್ಕೆ ಕಳ್ಳನಂತೆ
ಭಿಕ್ಷುಕರಿಗೆ ಶಾಪದಂತೆ,
ಪತ್ನಿಗೆ ಪ್ರಲಾಪ,
ಮಕ್ಕಳಿಗೆ ಶೋಕ,
ಮೃಗೀಯತೆಯ ಚಿತ್ರ,
ಮತ್ತು ಸ್ವ-ಕೊಲೆಪಾತಕ,
ಕುಡುಕನು ಪರರ ಆರೋಗ್ಯವನ್ನು ಹೀರಿಕೊಂಡು, ತನ್ನನ್ನೇ ದೋಚಿಕೊಳ್ಳುತ್ತಾನೆ.
ಮಾನವರಾದ ನಮಗೆ ಸರಿ ಮತ್ತು ತಪ್ಪಿನ ವ್ಯತ್ಯಾಸದಲ್ಲಿ ಸ್ವ-ನಿಯಂತ್ರಣವಿರಬೇಕು. ದಯವಿಟ್ಟು ಡ್ರಗ್ಸ್ನ ದುರುಪಯೋಗದಿಂದ ದೂರವಿರಿ ಮತ್ತು ಪರರಿಗೂ ದೂರವಿರಲು ಸಹಾಯ ಮಾಡಿ, ಇದರಿಂದಲೂ ಮಾನವತೆಗೆ ಶ್ರೇಷ್ಠ ಸೇವೆಯಾಗುವುದು.
ಸೋಲುಗಳು ವಿಜಯಗಳ ಸ್ತಂಭಗಳಲ್ಲದೆ ಬೇರೆಯಲ್ಲ. ಸೋಲಿನಿಂದ ಪಾಠ ಕಲಿತೇ ಯಶಸ್ಸಿನತ್ತ ಸಾಗಲು ಸಾಧ್ಯ. ಎಂದಿಗೂ ಸೋಲದವನು, ಎಂದಿಗೂ ಜಯಿಸಲು ಸಾಧ್ಯವಿಲ್ಲ. ಸೋಲಿನ ಕಹಿಯನ್ನು ಅನುಭವಿಸದೆಯೇ ಎಂದಿಗೂ ವಿಜಯದ ಸಿಹಿಯನ್ನು ಪ್ರಶಂಶಿಸಲಾಗುವುದಿಲ್ಲ. ಇದು ಕೇವಲ ಸನ್ನಿವೇಶದ ತಿರುವು ಆಗಿದೆ.
ಸೋಲು ನಮಗೆ ಯಶಸ್ವಿಗಳಾಗಲು ಸಹಾಯ ಮಾಡುವುದಷ್ಟೇ ಅಲ್ಲದೆ, ನಮಗೆ ಸದಾ ಜಾಗರೂಕರಾಗಲು, ಉತ್ಸಾಹಿಗಳಾಗಲು, ಯತ್ನಶೀಲರಾಗಲು ಮತ್ತು ಅನುಭೂತಿಯ ಸಿರಿವಂತರಾಗಲು ಸಹಾಯ ಮಾಡುವುದು.
ಎಲ್ಲ ಜನರು ಒಕ್ಕಣ್ಣರಾಗಿ ಮದ್ಯದಂಗಡಿಗೆ ಹೋಗುವರು, ಆದರೆ ಪೂರ್ಣ ಕುರುಡರಾಗಿ ಹೊರಬರುವರು.



5.3 ಪರರೊಂದಿಗೆ ಹೋಲಿಕೆ ಬೇಡ
ನೀವು ನಿಮ್ಮನ್ನು ಪರರೊಂದಿಗೆ ಹೋಲಿಸಿಕೊಳ್ಳದಿದ್ದರೆ ಅನಗತ್ಯ ಚಿಂತೆ ಮತ್ತು ಸಮಸ್ಯೆಗಳಿಂದ ಪಾರಾಗಬಲ್ಲಿರಿ. ಎಲ್ಲಿಯವರೆಗೆ ನೀವು ನಿಮ್ಮನ್ನು ಸಮನಾಗಿಯೋ, ಹಿರಿದಾಗಿಯೋ ಅಥವಾ ಕೀಳಾಗಿಯೋ ಭಾವಿಸಿಕೊಳ್ಳುವಿರೋ ಅಲ್ಲಿಯವರೆಗೆ ನೀವು ಅಸಹನೆ ಮತ್ತು ಅವಿಶ್ರಾಂತತೆ ಹೊಂದುವಿರಿ. ನೀವು ಅಂತಹ ಮನೋವೃತ್ತಿ ಹೊಂದಿಲ್ಲದಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ನೀವು ಪರರಿಗಿಂತ ಶ್ರೇಷ್ಠವೆಂದು ಭಾವಿಸಿದರೆ ನೀವು ಅಹಂಕಾರಿಗಳಾಗುವಿರಿ. ನೀವು ಯಾರಿಗೂ ಎರಡನೆಯವರಲ್ಲ ಎಂದು ಭಾವಿಸಿದರೆ ಪರರು ನಿಮ್ಮನ್ನು ಆಕ್ರಮಿಸಬಹುದು. ನಿಮ್ಮನ್ನು ನೀವು ಕೀಳಾಗಿ ಭಾವಿಸಿದರೆ, ನೀವು ಸ್ವ-ಶ್ರದ್ಧೆಯನ್ನೇ ಕಳೆದುಕೊಳ್ಳಬಹುದು.
ಬಹಳಷ್ಟು ಜನರಿಗೆ ತಮ್ಮ ಅಹಂಕಾರವನ್ನು ದಮಿಸುವುದು ಅತ್ಯಂತ ಕಷ್ಟಕರವಾಗಿದೆ. ಅಹಂಕಾರವನ್ನು ಕ್ಷೀಣಿಸುವುದು ಹೇಗೆಂದು ಕಲಿತುಕೊಳ್ಳುವುದು ಸಮುಚಿತವಾದುದು ಎಂದು ನಿಮ್ಮ ಅಹಂಕಾರವನ್ನು ತ್ಯಜಿಸುವುದಕ್ಕೆ ನೀವು ಸಮರ್ಥರಾಗಿರುವಿರೋ ಆಗಲೇ ನೀವು ನಿಮ್ಮ ಆಂತರ್ಯದಲ್ಲಿ ಶಾಂತಿ ಗಳಿಸುವಿರಿ. ನೀವು ಪರರೊಂದಿಗೆ ಸೌಹಾರ್ದತೆಯೊಂದಿಗೆ ಇದ್ದಾಗಲೇ ನೀವು ಶಾಂತಿ ಮತ್ತು ಸುಖವನ್ನು ಅನುಭವಿಸುವಿರಿ, ಯಾವುದು ಪ್ರಧಾನ್ಯಕರ ನಿಮ್ಮ ಅಹಂಕಾರವೋ ಅಥವಾ ಮನಶ್ಶಾಂತಿಯೋ? ಅರಿಯಲು ಯತ್ನಿಸಿ. ಈ ಸಮಾನತೆ, ಕೀಳರಿಮೆ ಮತ್ತು ಶ್ರೇಷ್ಠತೆ ಇವೆಲ್ಲಾ ಸದಾ ಬದಲಾಗುವ ಸಾಪೇಕ್ಷ ಸ್ಥಿತಿಗಳಾಗಿವೆ. ನೀವು ಬಡವರಾಗಿರಬಹುದು, ಆದರೆ ಇನ್ನೊಂದು ಸಮಯದಲ್ಲಿ ನೀವೂ ಶ್ರೀಮಂತರಾಗಬಹುದು. ಇಂದು ನೀವು ಅಜ್ಞಾನಿಯಾಗಿರಬಹುದು, ಮುಂದೆ ನೀವೂ ಜ್ಞಾನಿಗಳಾಗಬಹುದು. ಇಂದು ನೀವು ರೋಗಿ ಮತ್ತು ದುಃಖಿಗಳಾಗಿರಬಹುದು, ಆದರೆ ನಾಳೆ ನೀವು ಆರೋಗ್ಯವಂತ ರಾಗಬಹುದು. ಹಾಗಿದ್ದರೂ ಮಾನವರ ಹಲವಾರು ಸ್ಪಶರ್ಾತೀತ ಆಸ್ತಿಗಳಿವೆ ಅವೆಂದರೆ ಮಾನವ ಹಕ್ಕುಗಳು. ಮಾನವ ಘನತೆ, ಮಾನವ ಅಂತಸ್ತು ಇತ್ಯಾದಿ. ಇವುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. 
ನೀವು ನಿಮಗೆ ಒಳ್ಳೆಯವರಾದರೆ, ನೀವು ಪರರಿಗೂ ಒಳ್ಳೆಯವರಾಗುವಿರಿ. ನೀವು ಪರರಿಗೆ ಒಳ್ಳೆಯವರಾದರೆ, ನಿಮಗೂ ನೀವು ಒಳ್ಳೆಯವರಾಗುವಿರಿ.




5.4 ತೊಂದರೆಕಾರರನ್ನು ನಿರ್ವಹಿಸುವುದು ಹೇಗೆ?
ನಿಮ್ಮ ಮೇಲೆ ಬೀಳುವ ತೊಂದರೆ ಮತ್ತು ಸಮಸ್ಯೆಗಳಿಂದಾಗಿ ನೀವು ಕಾಣಿಕೆಗಳನ್ನು ಹೊಂದಬಹುದು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ತೊಂದರೆಗಳಿಂದ ಪಾರಾಗಲು ನೀವು ಹಲವಾರು ಸಂಪನ್ಮೂಲಗಳಿಂದ ಹಾದು ಬಂದಿರುತ್ತೀರಿ. ಈ ತೊಂದರೆಗಳಿಂದ ಪಾರಾಗಲು ನಿಮ್ಮಲ್ಲಿ ಸಾಕಷ್ಟು ಆಳದ ಜ್ಞಾನ ಬೇಕಾಗುತ್ತದೆ. ಆಗ ಮಾತ್ರ ನೀವು ಉತ್ತಮವಾಗಿ ಹೊರಬರಲು ಹೊಣೆಗಾರಿಕೆ ಹೊಂದುವಿರಿ.
ಆಗ ಮಾತ್ರ ನೀವು ತೊಂದರೆಕಾರರನ್ನು ಮತ್ತು ವಿರೋಧಿಗಳನ್ನು ನಿರ್ವಹಿಸಲು ಸಮರ್ಥರಾಗುವಿರಿ. ಯಾರು ನಿಮ್ಮನ್ನು ವಿರೋಧಿಸುವರೋ ಅವರಲ್ಲೂ ಸಹಾ ಮಾನವ ಹೃದಯವಿರುತ್ತದೆ. ಆದ್ದರಿಂದಾಗಿ ಅವರನ್ನು ಹೊಂದಿಕೊಳ್ಳುವುದು ಕಷ್ಟವೇನೂ ಆಗುವುದಿಲ್ಲ. ಅದರಿಂದ ಬೇರ್ಪಡಿಸುವುದರ ಬದಲಾಗಿ ಅವರೊಂದಿಗೆ ಸ್ನೇಹದಿಂದಿರಿ. 
ಅವರ ತಪ್ಪು ಮನೋವೃತ್ತಿಯನ್ನು ವಿರೋಧಿಸುವಷ್ಟು ಬಲಿಷ್ಠರಾಗಿದ್ದರೆ, ಅವರೊಂದಿಗೆ ಬೆರೆಯುವುದನ್ನು ತಡೆಯಲು ಅರ್ಥವೇ ಇಲ್ಲ. ಅವರೊಂದಿಗೆ ನೀವು ಇದ್ದಾಗ, ಅವರ ಉನ್ನತಿಗಾಗಿ ಅವರ ಮೇಲೆ ಪ್ರಭಾವ ಬೀರಬಹುದು, ನೆನಪಿಡಿ. ನಿಮ್ಮ ಅರಿವೇ ನಿಮ್ಮನ್ನು ಶತ್ರುಗಳಿಂದ ಕಾಪಾಡುವುದು ಮತ್ತು ಅವರು ಒಳ್ಳೆಯವರಾಗಲು ಮಾರ್ಗದರ್ಶನ ನೀಡುವುದು.
ಒಬ್ಬನು ತನ್ನ ಅಜ್ಞಾನದಿಂದ ಮತ್ತು ಮಿಥ್ಯ ತಿಳುವಳಿಕೆಯಿಂದ ನಿಮ್ಮ ಮೇಲೆ ತಪ್ಪು ಎಸಗಿದರೆ ಆಗ ನೀವು ನಿಮ್ಮ ಪ್ರಜ್ಞಾ, ವಿದ್ಯಾಭ್ಯಾಸ ಮತ್ತು ಧಮ್ಮ ಜ್ಞಾನದಿಂದಾಗಿ ಆತನನ್ನು ತಿದ್ದಲು ಮಹತ್ವಪೂರ್ಣ ಅವಕಾಶ ಕಾಲವಾಗಿರುತ್ತದೆ. ಇಂತಹ ಪರೀಕ್ಷಾ ಸಮಯದಲ್ಲಿ ನೀವು ನಿಜ ಸಭ್ಯವ್ಯಕ್ತಿಯೆಂದು ವತರ್ಿಸಲು ಕಲಿಯದಿದ್ದರೆ ನಿಮ್ಮ ಧಮ್ಮಜ್ಞಾನ ಮತ್ತು ವಿದ್ಯಾಭ್ಯಾಸದಿಂದ ಉಪಯೋಗವಾದರೂ ಏನು? ಯಾವಾಗ ಪರರು ನಿಮ್ಮ ಮೇಲೆ ತಪ್ಪು ಎಸಗಲು ಬಂದಾಗ ಅದನ್ನು ನೀವು ನಿಮ್ಮ ತಾಳ್ಮೆ, ಸಹನೆ, ಕ್ಷಮೆ ಮತ್ತು ಸಹಾನುಭೂತಿಯ ಬೆಳವಣಿಗೆಗೆ ಸದಾವಕಾಶವೆಂದು ತಿಳಿಯಬೇಕು.
ಸಹನೆ ಅತ್ಯಂತ ಪ್ರಧಾನ ಸದ್ಗುಣವಾಗಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನೀವು ಅಂತಹ ಸದ್ಗುಣವನ್ನು ಸಾಧಿಸಿದಷ್ಟೂ ನಿಮ್ಮ ಘನತೆಯನ್ನು ಹೆಚ್ಚಿಸಿಕೊಂಡು ಹೋಗಲು ಸಮರ್ಥರಾಗುವಿರಿ. ದ್ವೇಷಿಸುವ ಜನರೊಂದಿಗೆ ನಿಮ್ಮ ಜ್ಞಾನ ಮತ್ತು ತತ್ವಗಳನ್ನು ಬಳಸಿ ಹೇಗೆ ಸದ್ಭಳಕೆ ಮಾಡಬೇಕೆಂದು ನೀವು ಅರಿಯಲೇಬೇಕು.
ಬೇಗನೆಯೋ ಅಥವಾ ನಿಧಾನವಾಗಿಯೋ ಅವರು ತಮ್ಮ ಮೂರ್ಖತ್ವವನ್ನು ಅರಿತು ತಮ್ಮ ದ್ವೇಷದ ಮನೋಭಾವವನ್ನು ಬದಲಿಸಿಕೊಳ್ಳುವರು. ಕೆಲವು ವೇಳೆ ಜನರು ನಿಮ್ಮ ತಾಳ್ಮೆ ಮತ್ತು ಸಹನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವರು. ಅಂತಹ ವೇಳೆಯಲ್ಲಿ ನೀವು ಪ್ರಜ್ಞಾರಂತೆ ವತರ್ಿಸಿ ಅಂತಹುದಕ್ಕೆ ಬಲಿಪಶುವಾಗದಂತೆ ವತರ್ಿಸಬೇಕು. ದಯೆ, ಪ್ರಾಮಾಣಿಕತೆ ಮತ್ತು ಸಹನೆಯು ವಂಚಕರಿಗೆ ಮತ್ತು ಸ್ವಾಥರ್ಿಗಳಿಗೆ ತಮ್ಮ ಬೆಳೆ ಬೆಳೆಯಲು ಫಲವತ್ತಾದ ಭೂಮಿಯಾಗಿದೆ.



5.5 ಪ್ರಗತಿ ಮತ್ತು ಮಾಲಿನ್ಯ
ವೈಜ್ಞಾನಿಕವಾಗಿ ಮಾನವನಿಗೆ ಅಪಾರ ಲಾಭವಾಗಿದೆ. ಜೊತೆಗೆ ವೈಜ್ಞಾನಿಕ ಜ್ಞಾನದಿಂದ ಸಂದೇಹವಾದಿಯಾಗಿ ತನ್ನ ಸಾಂಸ್ಕೃತಿಕ ಆಸ್ತಿಯಿಂದಲೇ ಪರಕೀಯನಾಗಿದ್ದಾನೆ. ತಂತ್ರಜ್ಞಾನದಿಂದ ಆತನ ಸೃಜನಶೀಲತೆಯ ಸಾಮಥ್ರ್ಯವು ದೋಚಿಹೋಗಿದೆ. ಯಂತ್ರಗಳು ಮತ್ತು ಅವುಗಳ ಅಪಾರ ಶಕ್ತಿಗಳು ಮಾನವನಿಗೆ ಕೇವಲ ಬಟನ್ನ್ನು ಒತ್ತುವವನನ್ನಾಗಿ ಮಾಡಿದೆ. ಲಕ್ಷಾಂತರ ಜನರಿಗೆ ನಿರುದ್ಯೋಗವುಂಟುಮಾಡಿದೆ. ಅವರ ಶಾರೀರಿಕ ಮತ್ತು ಸೃಜನಶೀಲತೆಯ ಬಲಗಳು ನಷ್ಟಗೊಂಡಿವೆ. ವಿಘ್ನಗಳಿಗೆ ವಶವಾಗಿದೆ ಮತ್ತು ಹತಾಶೆಗಳಾಗಿದ್ದಾರೆ. ಫಲವಾಗಿ ಸ್ವದೇಶಿ ಜಾನಪದ ಕಲೆಗಳು ಮತ್ತು ಎಲ್ಲಾ ದೇಶಗಳ ಕುಸರಿ ಕಲೆಗಳು ನಿಮರ್ೂಲವಾಗಿವೆ. ಅವೆಲ್ಲ ಉದಾತ್ತ ಭಾವವೇಶಗಳ ವಾಸ್ತವಿಕ ವ್ಯಕ್ತತೆಗಳಾಗಿತ್ತು. ಯಾವ ಸೃಜನಶೀಲತೆಗಾಗಿ, ಸ್ವ-ವ್ಯಕ್ತತೆಗಾಗಿ ದುರ್ಬಲ ಹೋರಾಟ ವಾಗುತ್ತಿತ್ತೊ, ಯಾವುದೆಲ್ಲ ಆತನ ಹೆಮ್ಮೆಯ ಸಂಕೇತವಾಗಿತ್ತೋ ಅವೆಲ್ಲ ಈಗ ಪ್ರಾಚೀನ ವಸ್ತುಗಳ ಸಂಗ್ರಹಕಾರವಾಗಿ ಮಾರ್ಪಟ್ಟಿದೆ. 
ಹೀಗೆ ಮುಖ್ಯ ಅಂಶಗಳನ್ನು, ರೂಪರೇಖೆ ಮಾಡಿದವೆಲ್ಲಕ್ಕೂ ಮುಖ್ಯ ಕಾರಣವು ಆಧುನಿಕ ಸಮಾಜಕ್ಕಿರುವ ಬಲವೇ ಆಗಿದೆ. ಅವುಗಳ ಪರಿಣಾಮಗಳನ್ನು ಗಮನಿಸುವುದು ಉಪಯುಕ್ತವಾಗಿದೆ. ಊಗಿ & ಂಆಖ ಗಳು ಅನಿಗ್ರಹಿತವಾಗಿವೆ. ಅಮೆರಿಕಾದಲ್ಲಿ ಒಂದು ದಶಕಕ್ಕೆ 300% ಪಟ್ಟು ಇವು ಹೆಚ್ಚಾಗಿವೆ. ಮನೋರೋಗ ಚಿಕಿತ್ಸಾ ಕೇಂದ್ರಗಳೂ ಅತಿ ಹೆಚ್ಚಾಗುತ್ತಿರುವುದು ಮಾನಸಿಕ ಆರೋಗ್ಯಗಳು, ಕ್ಷಿಪ್ರವಾಗಿ ಕ್ಷೀಣಿಸಿವೆ ಎಂದು ಸೂಚಿಸುತ್ತವೆ. ಮದ್ಯಪಾನ ಮತ್ತು ಡ್ರಗ್ಸ್ನ ಸೇವನೆ ಅತಿದೊಡ್ಡ ಅನಾರೋಗ್ಯ ಸಮಸ್ಯೆಗಳಾಗಿವೆ.
ಅಪರಾಧಗಳ ಸಂಖ್ಯೆಯು ಎಂದಿಗಿಂತಲೂ ಅತಿ ಏರುತ್ತಿದೆ. ವೈವಾಹಿಕ ಬಂಧನವೂ ವಿಷಾಧನೀಯವಾಗಿ ಮುರಿಯುತ್ತಿವೆ ಮತ್ತು ವಿಚ್ಛೇದನಗಳ ಸಂಖ್ಯೆಯು ಎಚ್ಚರಿಕೆ ನೀಡುವಷ್ಟು ಹೆಚ್ಚಿದೆ. ಬದುಕಬೇಕಾದ ಸಂಸ್ಥೆಯಾದ ಕುಟುಂಬವು ಈಗ ಅಪಾಯಕ್ಕೊಳಗಾಗಿದೆ. ಹಲವು ಸಮಾಜಶಾಸ್ತ್ರಜ್ಞರ ಪ್ರಕಾರ ಕುಟುಂಬ ಸಂಸ್ಥೆಯು ಅತಿ ಹತ್ತಿರದಲ್ಲೇ ನಾಶವಾಗುವ ಸ್ಥಿತಿಯಲ್ಲಿದೆ. ಕೌಟುಂಬಿಕ ಒಡಕು ಮಗುವಿನ ಜೀವನವನ್ನು ಅತಿ ಕರುಣಾಜನಕವಾಗಿ ಮಾಡಿಬಿಡುತ್ತದೆ.
ಬ್ರಿಟನ್ನ ಆರೋಗ್ಯ ಅರ್ಥಶಾಸ್ತ್ರದ ಸುದ್ದಿಯ ಪ್ರಕಾರ ಬ್ರಿಟನ್ನಲ್ಲಿ ಶಿಶುಹತ್ಯೆಗಳು ಅಧಿಕವಾಗಿವೆ. ಇದಕ್ಕೆ ಶಿಶುಗಳು ಅಪಾರವಾಗಿ ಬಲಿಯಾಗುತ್ತಿದ್ದಾರೆ. ಕೌಟುಂಬಿಕ ಕಲಹಗಳು ಇದ್ದಾಗ ಮಕ್ಕಳನ್ನು ಸಾಯುವವರೆಗೆ ಹೊಡೆಯುವ ಪೋಷಕರು ಇದ್ದಾರೆ. ಪ್ರಾಯದ ಹುಡುಗರು ಡ್ರಗ್ಸ್ ಸೇವನೆ ಮತ್ತು ಯೌವ್ವನದ ತಪ್ಪುಗಳಲ್ಲಿ ಸಿಲುಕಿರುವುದು ಇಂದಿನ ದಿನಗಳಲ್ಲಿ ಭಯಾನಕ ಸಮಸ್ಯೆಗಳಾಗಿವೆ. ಈ ಸಾಮಾಜಿಕ ಪ್ರಕ್ರಿಯೆಯು ನೇರವಾಗಿ ಮಾನವನ ಇಂದ್ರೀಯ ಭೋಗದ ಮನೋವೃತ್ತಿಗೆ ಸಂಬಂಧಿಸಿದೆ. ಆದ್ದರಿಂದಾಗಿ ಗಂಭೀರವಾದ ಪುನರ್ಚಿಂತನೆ ಮತ್ತು ಪುನರ್ ವಿದ್ಯಾಭ್ಯಾಸ ಇಂದಿಗೆ ಅಗತ್ಯವಾಗಿ ಬೇಕಾಗಿದೆ. ಇಂದ್ರೀಯ ಭೋಗದಿಂದಾಗಿ ಮಾನವನು ಸ್ವ-ನಾಶವಾಗುವಿಕೆಯನ್ನು ಈಗ ತಡೆಗಟ್ಟಬೇಕಾಗಿದೆ. 
ಆಧುನಿಕ ಮಾನವನ ದಾಂಪತ್ಯ ಬಾಂಧವ್ಯವು ಸುಲಭವಾಗಿ ಒಡೆದು ಹೋಗು ವಂತಹುದು ಮತ್ತು ನಾಜೂಕಾಗಿರುವಂತಹದ್ದಾಗಿದೆ. ಏಕೆಂದರೆ ಈ ಸ್ನೇಹದ ಬಾಂಧವ್ಯವು ಕಾಮದಲ್ಲೇ ಕಳೆದುಹೋಗುತ್ತವೆ. ದೈಹಿಕ ಪ್ರೀತಿಯಲ್ಲೇ ಬಹಳ ಒತ್ತು ನೀಡಲ್ಪಟ್ಟಿರುತ್ತದೆ. ಆದರೆ ವ್ಯಕ್ತಿಗತ ಹೊಂದಾಣಿಕೆ ಮತ್ತು ಭಾವವೇಶಗಳು ಯಾವುದನ್ನು ನಾವು ತ್ಯಾಗ ಮತ್ತು ನಿಸ್ವಾರ್ಥ ಎನ್ನುವೆವು ಅವುಗಳನ್ನೆಲ್ಲಾ ನಿರ್ಲಕ್ಷಗೊಳಿಸಿರುತ್ತಾರೆ. ಮದುವೆಯಲ್ಲಿ ಕಾಮವು ಮೂಲಭೂತ ಅವಶ್ಯಕತೆಯಾಗಿದ್ದರೂ ಕಾಮವೇ ವೈವಾಹಿಕ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಲ್ಲ. ಕಾಮ ಸುಖವು ಎಂದಿಗೂ ಸಂತೃಪ್ತಿ ನೀಡುವುದಿಲ್ಲ. ಹಾಗಿರುವಾಗ ಸಫಲತೆ ಇನ್ನೆಲ್ಲಿ? ಅತೃಪ್ತಿಕರ ಕಾಮವನ್ನು ಬೌದ್ಧ ಸಾಹಿತ್ಯಗಳಲ್ಲಿ ಅಲಕ್ಷಿಸಿದ್ದಾರೆ. ಹಸಿದ ನಾಯಿಗೆ ಮಾಂಸರಹಿತ ಮೂಳೆಯು ಹೊಟ್ಟೆ ತುಂಬಿಸುವುದೇ? ಆದರೂ ಕಾಮವು ದಾಂಪತ್ಯ ಜೀವನದಲ್ಲಿ ಭಾವಾವೇಶದ ಅನುಭವವನ್ನು ನೀಡುವುದರಿಂದ ಅದು ದಂಪತಿಗಳ ಪ್ರೀತಿಯ ವ್ಯಕ್ತತೆಯಾಗಿದೆ. 
ವಿವಾಹದ ಗುರಿಯು ಕಾಮವೇ ಆಗಿದ್ದರೆ ಕೌಟುಂಬಿಕ ವ್ಯವಸ್ಥೆಯು ಉಂಟಾಗುತ್ತಿರಲಿಲ್ಲ. ಪ್ರಾಣಿಗಳಲ್ಲೂ ಸಹಾ ಕಾಮ ಪ್ರವೃತ್ತಿಯಿರುತ್ತದೆ. ಆದರೆ ಇಡೀ ಪ್ರಾಣಿ ಲೋಕದಲ್ಲಿ ಮಾನವ ಕುಟುಂಬಕ್ಕೆ ಸರಿಸಾಟಿಯೇ ಇಲ್ಲ. ಕುಟುಂಬದ ಜೀವನದ ಪ್ರಮುಖ ಕ್ರಿಯೆ ಏನೆಂದರೆ ಮಾನವನಿಗೆ ಅಹಂ ಕೇಂದ್ರೀಕೃತ ಸ್ವಭಾವದಿಂದ ಹೊರಬರುವ ನೈತಿಕತೆ ಕಲಿಕೆಯೇ ಆಗಿದೆ.
ಮಾನವನ ಜೀವನವು ತಾಯಿಯ ಗರ್ಭದಲ್ಲಿ ಆರಂಭವಾಗುತ್ತದೆ. ಅಲ್ಲಿ ಆ ಮಗುವು ಅತ್ಯಂತ ಸ್ವಾರ್ಥಪೂರ್ಣ ಪರಾವಲಂಬಿ ಜೀವಿಯಾಗಿರುತ್ತದೆ. ನಂತರ ದೇಹದ ವಿಕಾಸದಂತೆಯೇ ಭಾವಾವೇಶದ ಹಂತಗಳಲ್ಲಿ ಇರುತ್ತವೆ. ಅವೆಂದರೆ ಸ್ವ-ಪ್ರೀತಿ, (ವಾತ್ಸಲ್ಯಧಾರೆ) ಪಕ್ವ ಪೋಷಕರಾಗಿ ಅವರು ಪೂರ್ಣವಾಗಿ ತಮ್ಮ ಮಕ್ಕಳ ಸೇವೆಗಾಗಿ ತಮ್ಮನ್ನು ಪೂರ್ಣವಾಗಿ ಸಮಪರ್ಿಸಿಕೊಳ್ಳುತ್ತಾರೆ. ಅವರ ತ್ಯಾಗವು ಈ ರೀತಿ ಇರುತ್ತದೆ ಎಂದರೆ ಇಡೀ ಜೀವನವೆಲ್ಲಾ ಕಷ್ಟಪಟ್ಟು ಸಂಪಾದಿಸಿದ ಎಲ್ಲವನ್ನೂ ಅಪರ್ಿಸುತ್ತಾರೆ. ವಯಸ್ಸಿಗೆ ಬಂದ ಮಕ್ಕಳಿಗೆ ಯೋಗ್ಯ ವಧು/ವರರನ್ನು ಹುಡುಕಿ ಮದುವೆಯನ್ನು ಮಾಡುತ್ತಾರೆ. ಮಕ್ಕಳಿಗೆ ಉದ್ಯೋಗ ಸಿಗುವಂತೆಯೂ ಮಾಡುತ್ತಾರೆ. ಮಕ್ಕಳ ಉನ್ನತಿಯನ್ನು ಪ್ರತಿ ಹಂತದಲ್ಲೂ ಅವರು ಆನಂದಿಸುತ್ತಾರೆ. ವೃದ್ಧಾಪ್ಯದಲ್ಲಿ ಸಂತೃಪ್ತಿ ಹೊಂದಿ ಸಮಚಿತ್ತತೆಯಿಂದ ನೆಲೆಸುತ್ತಾರೆ. ಈ ಬಗೆಯ ಸುಭಾವವೇಶದ ಪಕ್ವ ಪೂರ್ಣತೆಯು, ಕಾಮವೇ ವಿವಾಹದ ಗುರಿ ಎಂಬ ಸಿದ್ಧಾಂತಗಳಿಗೆ ಸಿಗದು. ಅದು ಅವರಿಗೆ ಅಸಾಧ್ಯವಾಗಿದೆ.




5.6 ಆತ್ಮಹತ್ಯೆ ಮಾಡಿಕೊಳ್ಳುವಿಕೆ
ಆತ್ಮಹತ್ಯೆ ಅಥವಾ ಸ್ವ-ಹತ್ಯೆಯೆಂದರೆ ಸ್ವ-ಇಚ್ಛೆಯಿಂದ ಮತ್ತು ಸ್ವಯಂಪ್ರೇರಿತರಾಗಿ ತನ್ನ ಜೀವನ ಅಥವಾ ಪ್ರಾಣವನ್ನು ತೆಗೆದುಕೊಳ್ಳುವಿಕೆಯಾಗಿದೆ. ಆತ್ಮಹತ್ಯೆಗಳು ಎರಡು ವಿಧವಾಗಿವೆ. ಸಾಂಪ್ರದಾಯಿಕ ಮತ್ತು ವ್ಯಕ್ತಿಗತ. ಮೊದಲನೆಯದ್ದು ಸಂಪ್ರದಾಯದ ಫಲಿತಾಂಶದಿಂದಾಗಿ ಮತ್ತು ಸಾರ್ವಜನಿಕ ಅಭಿಪ್ರಾಯದ ಬಲಪ್ರಯೋಗದಿಂದಾಗುತ್ತದೆ. ಉದಾಹರಿಸುವುದಾದರೆ ಹರ-ಕಿರಿ ಇದು ಜಪಾನಿನ ಮೇಲಂಸ್ತಿನವರು ಅಪಮಾನಿತರಾದರೆ ಕತ್ತಿಯಿಂದ ಕಿಬ್ಬೊಟ್ಟೆಗೆ ಚುಚ್ಚಿಕೊಂಡು ಸ್ವ-ಹತ್ಯೆ ಮಾಡಿಕೊಳ್ಳುತ್ತಾರೆ.
ವ್ಯಕ್ತಿಗತ ಆತ್ಮಹತ್ಯೆಗಳು ಆಧುನಿಕ ಜಗತ್ತಿನಲ್ಲಿ ನಡೆಯುವಂತಹುವೇ ಆಗಿವೆ. ಸಿದ್ಧಾಂತದ ಪ್ರಕಾರ ಒಬ್ಬನು ಜೀವನದ ಒತ್ತಡಗಳ ಹೊಂದಾಣಿಕೆಯಲ್ಲಿ ಸೋತಾಗ ಆಗುವ ಪರಿಣಾಮವಾಗಿದೆ. ಅವರು ಸ್ವ-ಹತ್ಯೆಯನ್ನು ಹಲವಾರು ವಿಧದ ವೈಯಕ್ತಿಕ ಸಮಸ್ಯೆಗಳಾದ ಒಂಟಿತನ, ತಿರಸ್ಕಾರ, ದ್ವೇಷ, ಸೇಡು, ಭಯ, ಶಾರೀರಿಕ ನೋವು, ಅಪರಾಧಿ ಪ್ರಜ್ಞೆ ಇತ್ಯಾದಿಗಳಿಗೆ ಇದೇ ಪರಿಹಾರವೆಂದು ಭಾವಿಸುತ್ತಾರೆ. ಸ್ತ್ರೀಯರಿಗಿಂತ ಪುರುಷರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಇದು ಎಲ್ಲಾ ವಯಸ್ಸಿನವರ ಗುಂಪಿಗೂ ಅನ್ವಯಿಸುತ್ತದೆ. ಹಾಗೆಯೇ ಸ್ತ್ರೀಯರು ಪುರುಷರಿಗಿಂತ ಹೆಚ್ಚಾಗಿ ಆತ್ಮಹತ್ಯೆಯ ವಿಫಲಯತ್ನ ನಡೆಸುತ್ತಾರೆ. ಏಕೆಂದರೆ ಭಾವವೇಶದ ವಿಭಿನ್ನತೆಯೇ ಆಗಿರುತ್ತದೆ.
ಆತ್ಮಹತ್ಯೆ ಮಾಡಿಕೊಳ್ಳುವ ಬಹಳಷ್ಟು ಜನರು ಹತಾಶರಾಗಿರುತ್ತಾರೆ. ಅವರಲ್ಲಿ ಚಿಂತೆ ಹಾಗೂ ಆಶಾರಹಿತತೆ (ಭರವಸೆ ಇಲ್ಲದಿರುವಿಕೆ), ನಿರಾಸಕ್ತಿ, ಸುಖಹೀನತೆ ಎದ್ದುಕಾಣುತ್ತದೆ. ಜೊತೆಗೆ ಯಾರು ವೃದ್ಧರೋ, ಒಂಟಿತನವುಳ್ಳವರೋ ವಿಚ್ಛೇದಿತರೋ ಅಥವಾ ವಿಧುರರೋ, ಮದ್ಯವ್ಯಸನಿಗಳೋ, ಡ್ರಗ್ಸ್ ವ್ಯಸನಿಗಳೋ ಅವರಲ್ಲಿ ಆತ್ಮಹತ್ಯೆಯ ಗಂಡಾತರ ಹೆಚ್ಚಿರುತ್ತದೆ. ಯಾರು ಮನೆಯಿಲ್ಲದವರೋ ಅವರು ಬೇರೆಯವರಿಗಿಂತ ಬೇಗ ಇದಕ್ಕೆ ಸಿದ್ಧರಾಗಿಬಿಡುತ್ತಾರೆ. 
ಪ್ರಾಯದವರ ಆತ್ಮಹತ್ಯೆಯು ನಿಜಕ್ಕೂ ಭಯಾನಕ ಸಮಸ್ಯೆಯಾಗಿದೆ. ಇದು ಹಿರಿಯರಿಗೆ ಹೋಲಿಸಿದರೆ ಈ ದರವು ದುಪ್ಪಟ್ಟಾಗಿದೆ. ಇದು ಹಲವಾರು ಕಾರಣಗಳಿಂದ ಆಗಿದ್ದರೂ ಇಲ್ಲಿ ಯುವತಿಯರ ಸಂಖ್ಯೆ ದರವು ಕಡಿಮೆ ಇದೆ.
ಹಲವು ನಿಪುಣರ ಪ್ರಕಾರ ಪ್ರಾಯದ ಆತ್ಮಹತ್ಯೆಯು ಸಂಕೀರ್ಣತ್ವ ಮತ್ತು ಆಧುನಿಕ ಜೀವನದ ಒತ್ತಡದಿಂದ ಆಗಿದೆ. ಟಿ.ವಿ.ಯಲ್ಲಿ ಕಾಣಿಸುವ ಧಾರಾವಾಹಿಗಳು ಮತ್ತು ಸುದ್ದಿಗಳೇ ಇದನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ. ಹಾಗೆಯೇ ಭಗ್ನ ಹೃದಯ ಮತ್ತು ನಿರುದ್ಯೋಗ ಸಮಸ್ಯೆ ಮತ್ತು ಸಾಧನೆಗಾಗಿ ಇರುವ ಒತ್ತಡವೂ ಕಾರಣಗಳಾಗಿವೆ.
ಆತ್ಮಹತ್ಯೆಗಳನ್ನು ತಡೆಯಲು ನಾವೇನು ಮಾಡಬೇಕು?
ಹಲವಾರು ಎಚ್ಚರಿಕೆಯ ಮುನ್ಸೂಚನೆಗಳನ್ನು ಗಮನಿಸಿದರೆ ಕಾಣಿಸುವುದೇವೆಂದರೆ ಸ್ನೇಹಿತರ ಜೊತೆಯಿಂದ ದೂರವಿರುವುದು, ದಿನನಿತ್ಯದ ಚಟುವಟಿಕೆಗಳು ಹಾದಿ ತಪ್ಪುವುದು, ವ್ಯಕ್ತಿಗತ ಬಾಹ್ಯಚಹರೆಯ ಅಲಕ್ಷಿಸುವಿಕೆ, ತಿನ್ನುವುದರ ಮತ್ತು ನಿದ್ರಿಸುವುದರಲ್ಲಿ ಬಾರಿ ಬದಲಾವಣೆ, ಡ್ರಗ್ಸ್ ಮತ್ತು ಮದ್ಯಪಾನದ ಮೊರೆ ಹೋಗುವಿಕೆ, ಪ್ರಾಯದವರು ತಮ್ಮ ಇಚ್ಛೆಗಳನ್ನು ಇನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಪ್ರಿಯವಾದ ವಸ್ತುಗಳೆಲ್ಲವನ್ನೂ ಕೊಟ್ಟುಬಿಡುತ್ತಾರೆ ಮತ್ತು ಹೀಗೂ ಹೇಳುವುದುಂಟು. ನಾನು ನಿಮಗೆ ಸಮಸ್ಯೆಯಾಗಿ ಹೆಚ್ಚುಕಾಲ ಇರುವುದಿಲ್ಲ ಎಂದು. ಹಲವುಬಾರಿ ಈ ಆತ್ಮಹತ್ಯೆಯು ಭಾವನಾತ್ಮಕ ನಷ್ಟ ಅಂದರೆ ಭಗ್ನಪ್ರೇಮದಿಂದಾಗಿ ಅಥವಾ ವಿಚ್ಛೇದನದಿಂದಾಗಿಯೇ ಆಗುತ್ತದೆ.
ಆದ್ದರಿಂದಾಗಿ, ಈ ರೀತಿಯ ವ್ಯತ್ಯಾಸಗಳು ವರ್ತನೆಗಳು ಕಂಡುಬಂದರೆ ಅವನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ, ನಿಮ್ಮ ಮಕ್ಕಳೊಂದಿಗೆ ಅವರ ದುಃಖದ ಬಗ್ಗೆ ಚಚರ್ಿಸಿ. ಉದಾಹರಿಸುವುದಾದರೆ: ಈಗ ಆತನು ಏನನ್ನು ಮಾಡಲು ನಿರ್ಧರಿಸಿದ್ದಾನೆ, ಇತ್ಯಾದಿ. ಹೀಗೆ ಆತನ ವಿಷಯಗಳೆಲ್ಲವೂ ಹೊರಹಾಕಲು ತೊಡಗಿದರೆ ಆತನ ಚಿಂತೆಯು ಸ್ವಲ್ಪ ಕಡಿಮೆಯಾಗುತ್ತದೆ ಮತ್ತು ಆತನು ನಿಮ್ಮ ಸಹಾಯ ಬಯಸುತ್ತಾನೆ. ಆಗ ನೀವು ಆತನ ಸಮಸ್ಯೆಗಳನ್ನು ಪರಿಹರಿಸಿ. ಅಗತ್ಯವಾದರೆ ವೃತ್ತಿಪರರ ಸಹಾಯವನ್ನು ಪಡೆಯಬಹುದು. 
ಆಧುನಿಕ ಸಮಾಜದ ಅವಕಾಶ ನೀಡುವ ಪ್ರವೃತ್ತಿ ಅಡ್ಡದಾರಿಗಳಿಗೆ ಅತಿಯಾಗಿ ಸಹಿಸಿಕೊಂಡು ಹೋಗುವ ಈ ನಿಜಾಭಿಪ್ರಾಯಗಳು ಸಹಾ ಆತ್ಮಹತ್ಯೆಗಳ ಹೆಚ್ಚಳಕ್ಕೆ ಕಾರಣವಾಗಿವೆ. ಆತ್ಮಹತ್ಯೆಗಳ ವರ್ತನೆಗೆ ಸಮಾಜದ ಅಭಿಪ್ರಾಯವೂ ಅಲ್ಪ ನೈತಿಕತೆ ಹೊಂದಿದ್ದು, ದ್ವಂದ್ವಾತ್ಮಕ ಮನೋಭಾವ ಹೊಂದಿದೆ. ಇಲ್ಲಿ ನಿಂದನೆಗಿಂತ ಹೆಚ್ಚಾಗಿ ಅವರನ್ನೂ ಹಾಗು ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಿದ್ಧರಾಗಬೇಕಾಗಿದೆ. ಆದರೆ ಆತ್ಮಹತ್ಯೆ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರವೃತ್ತಿಯು ಈಗಲೂ ಜೀವಂತವಾಗಿದೆ. ಅಪಾಯಕರ ಆತ್ಮಹತ್ಯೆಯು ಅಪಾರ ಶೋಕಗಳ ಸರಣಿಗಳನ್ನು ಸೃಷ್ಟಿಸುತ್ತದೆ. ತಾವು ಇನ್ನೂ ಪ್ರೀತಿಸಬೇಕಿತ್ತು, ಇನ್ನಷ್ಟು ಸಲಹಬೇಕಿತ್ತು. ತಾವೇ ಕಾರಣರೇ ಎಂಬ ಅಪರಾಧಿ ಮನೋವೃತ್ತಿಯು ಸೃಷ್ಟಿಯಾಗುತ್ತದೆ. ಅತೃಪ್ತ ಬಯಕೆ ಅಥವಾ ಬಯಸಿದುದು ಪಡೆಯದೆ ವಿಫಲರಾಗಿದ್ದೆ ಆತ್ಮಹತ್ಯೆಗೆ ಪ್ರಧಾನ ಕಾರಣವಾಗಿರುತ್ತದೆ. ಈ ಕ್ರೂರವಾದ ಕ್ರಿಯೆಯನ್ನು ಯಾವ ಧರ್ಮವು ಕ್ಷಮಿಸುವುದಿಲ್ಲ.
ಆತ್ಮಹತ್ಯೆಗೆ ಚಿಂತಿಸುತ್ತಿರುವ ಒಂಟಿ ಹಾಗು ದುಃಖಪರಿತಪ್ತರಿಗೆ ಟೆಲಿಫೋನ್ ಸಂಪರ್ಕವಾಗಿ ಸಾಮಾನ್ಯವಾಗಿ ಬಳಸಲಾಗುತ್ತಿದೆ. ಈ ರೀತಿಯಾಗಿ ಅವರಿಗೆ ಬುದ್ಧಿವಾದ ಮತ್ತು ಸಹಾಯ ನೀಡುತ್ತಾರೆ. ಮದ್ಯಪಾನಿಗರ ಅನಾಮಿಕ ಎಂಬಂತಹ ಇನ್ನಿತರ ಸಂಸ್ಥೆಗಳು ಸ್ವ-ಇಚ್ಛೆಯಿಂದ ಬುದ್ಧಿ ಬೋಧಕರಾಗಿ ಯಾವ ಕಾಲದಲ್ಲೂ ಸಹಾಯ ಮಾಡಲು ಸಿದ್ಧರಾಗುತ್ತಾರೆ. ಈ ಬಗೆಯ ಸಹಾಯ ಮಾಡುವ ನಿದರ್ಶನಗಳು ಆತ್ಮಹತ್ಯೆಯನ್ನು ಬಹಳಷ್ಟು ತಡೆಯುವವು.





5.7 ಪರಸ್ಪರ ಅರ್ಥಮಾಡಿಕೊಳ್ಳುವಿಕೆ
ಏನೆಲ್ಲಾ ಜರುಗಿವೆಯೋ ಅದೆಲ್ಲವನ್ನು ನೆನಪಿಸಿಕೊಳ್ಳಿ. ನೀವು ಸಮಚಿತ್ತತೆಯ ಶಾಂತ ಮನಸ್ಸನ್ನು ಸ್ಥಾಪಿಸುವುದನ್ನು ತಿಳಿದಿದ್ದರೆ, ಕಲಿತಿದ್ದರೆ, ನೀವು ಒಂದು ಚೂರು ನೋವಿಗೂ ಒಳಗಾಗುವುದಿಲ್ಲ. ನೀವು ನೋವಿಗೆ ಒಳಗಾಗುವುದು ಕೇವಲ ಮನೋಭಾವದಿಂದಲೇ. ನೀವು ನಿಮ್ಮೊಂದಿಗೆ ಮತ್ತು ಪರರೊಂದಿಗೆ ಹೊಂದಿಕೊಳ್ಳುವುದನ್ನು ಕಲಿಯಿರಿ, ನೀವು ಪರರಿಗೆ ಪ್ರೀತಿ ತೋರಿಸಿದರೆ, ಪರರು ಸಹಾ ಪ್ರೀತಿ ತೋರಿಸುವರು. ನೀವು ಪರರೊಂದಿಗೆ ದ್ವೇಷಕಾರಿದರೆ ಸಂಶಯವಿಲ್ಲದೆ ಪರರು ಸಹಾ ಅದನ್ನೇ ಹಿಂತಿರುಗಿಸುವರು. 
ಕೋಪಿಯು ವಿಷವನ್ನೇ ನಿಶ್ವಾಸಮಾಡುತ್ತಾನೆ. ಆತನು ಪರರಿಗೆ ಮಾಡುವ ಹಾನಿಗಿಂತ ಹೆಚ್ಚಾಗಿ ತನ್ನನ್ನೇ ಹೆಚ್ಚಾಗಿ ನೋಯಿಸಿಕೊಳ್ಳುತ್ತಾನೆ. ಹೇಗೆ ಹೊಗೆ ಇರುವೆಡೆ ದೃಶ್ಯ ಕಾಣಿಸುವುದಿಲ್ಲವೋ ಹಾಗೆಯೇ ಕೋಪಿಯು ವಾಸ್ತವವನ್ನು ಯಥಾಭೂತವಾಗಿ ಅರಿಯಲಾರನು. ಜ್ಞಾನಿಯು ಮಾತ್ರ ಕೋಪಗೊಳ್ಳನು, ಹಾಗೆಯೇ ನೋವುಗೊಳ್ಳನು. ನೆನಪಿಡಿ, ನೀವು ದಾರಿಬಿಡದ ಹೊರತು ಪರರು ನಿಮ್ಮನ್ನು ನೋವುಗೊಳಿಸರು. ಧಮ್ಮವನ್ನು (ಅಂದರೆ ಯೋಗ್ಯವಾದ ಜೀವನ ಪಥವನ್ನು) ನೀವು ಪಾಲಿಸಿದರೆ ಧಮ್ಮವು ನಿಮ್ಮನ್ನು ಕಾಪಾಡುವುದು. ಬುದ್ಧ ಭಗವಾನರು ಹೀಗೆ ಹೇಳಿರುವರು:
ಪರಿಶುದ್ಧನು ಮತ್ತು ನಿರಪರಾಧಿಯು ಆದ ಮುಗ್ಧ ಮಾನವನಿಗೆ ಯಾರು ಹಾನಿವುಂಟುಮಾಡುವರೋ, ಅಂತಹ ಮೂರ್ಖನಿಗೆ, ಬೀಸುವ ಗಾಳಿಗೆ ಎಸೆದ ದೂಳಿನಂತೆ, ಪಾಪವು ಹಿಂದಕ್ಕೆ ಹಾರುವುದು, ಆತನಿಗೇ ಹಾನಿಯಾಗುವುದು-ಧಮ್ಮಪದ.
ನೀವು ಪರರ ಮೇಲೆ ಕೋಪಗೊಂಡರೆ ಅದರಿಂದ ಉಂಟಾಗುವ ಪ್ರತಿಕ್ರಿಯೆಗೆ ನೀವು ಹೊಣೆಗಾರರಾಗುತ್ತೀರಿ. ಅಂತಹ ಆಕ್ರಮಣಕಾರಿ ಮನೋಭಾವವನ್ನು ತೋರಿಸಿ, ನಿಮ್ಮ ಶತ್ರುವಿನ ಬಯಕೆಯನ್ನು ನೀವೇ ಪೂರೈಸುತ್ತಿದ್ದೀರಿ. ಐಕ್ಯತೆ ಮತ್ತು ಸೌಹಾರ್ದತೆಯು ನಮ್ಮ ಜೀವನದ ಅತಿ ಮುಖ್ಯವಾದ ಅಂಶಗಳಾಗಿವೆ. ಜೇಡಗಳು ಒಗ್ಗಟ್ಟಾಗಿ ಜಾಲವನ್ನು ಹೆಣೆದರೆ ಅವು ಸಿಂಹವನ್ನು ಸಹಾ ಕಟ್ಟಿಹಾಕಬಲ್ಲವು.




5.8 ನಿಮ್ಮ ಹೊಣೆಗಾರಿಕೆ
ನಿಮ್ಮ ಮನಸ್ಸಿನಲ್ಲಿ ಸೃಷ್ಟಿಯಾದ ಆಂತರಿಕ ಶಾಂತತೆಯನ್ನು ರಕ್ಷಿಸುವುದನ್ನು ನೀವು ಕಲಿಯಬೇಕು. ಅದಕ್ಕಾಗಿ ಯಾವಾಗ ನಿಮ್ಮ ಶ್ರೇಷ್ಠತೆಯ ಭಾವವನ್ನು ಕಡಿಮೆಗೊಳಿಸಬೇಕು ಎಂಬುದನ್ನು ಕಲಿಯಬೇಕಾಗಿದೆ. ಹಾಗೆಯೇ ಯಾವಾಗ ನಿಮ್ಮ ಅಹಂಕಾರವನ್ನು ಅಲಕ್ಷಿಸಬೇಕು ಮತ್ತು ಯಾವಾಗ ನಿಮ್ಮ ಮಿಥ್ಯಾ ಅಹಂವನ್ನು ಧಮಿಸಬೇಕು, ಯಾವಾಗ ನಿಮ್ಮ ಮೊಂಡುತನವನ್ನು ತೊರೆಯಬೇಕು ಹಾಗು ಯಾವಾಗ ಸಹನೆಯನ್ನು ಅಭ್ಯಸಿಸಬೇಕು ಎಂಬುದೆಲ್ಲವನ್ನು ನೀವು ಅರಿಯಬೇಕಾಗಿದೆ. ನೀವು ಪರರಿಗೆ ನಿಮ್ಮ ಆಂತರಿಕ ಶಾಂತಿಯನ್ನು ಕದಡಲು ಸ್ವಾಗತಿಸಬೇಡಿ, ಬಿಡಬೇಡಿ, ನೀವು ಪ್ರಜ್ಞಾರಂತೆ ವತರ್ಿಸಿದಾಗ ಮಾತ್ರ ನಿಮ್ಮ ಆಂತರ್ಯದ ಶಾಂತಿಯನ್ನು ರಕ್ಷಿಸಬಲ್ಲಿರಿ.
ಪ್ರಾಜ್ಞಾವು ಅರಿಯುವುದರ ಮೂಲಕವೇ ಲಭಿಸುತ್ತದೆ. ಮಾನವನು ವಿಕಾಸ ಗೊಳ್ಳುತ್ತಿರುವ ಪ್ರಾಣಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ನಾವು ಮಾನವರಾಗಿ ನಿಲ್ಲಲ್ಲು ಮಿಲಿಯನ್ಗಳಷ್ಟು ವರ್ಷಗಳು ಬೇಕಾದವು. ನಿಮ್ಮ ತತ್ವಗಳ ಅನುಸಾರವಾಗಿ ದೃಢವಾಗಿ ನಿಲ್ಲಲು ಸಭ್ಯರಾಗಲು ನಿಮ್ಮ ಎಲ್ಲಾ ಪ್ರಯತ್ನವನ್ನು ಶ್ರದ್ಧೆಯ ಸಹಿತ ಬಳಸಿ. ಅದೇ ಕಾಲದಲ್ಲಿ ವಿನಮ್ರರಾಗಿ. ಏಕೆಂದರೆ ಶಾಂತಿಗಾಗಿ ಮತ್ತು ಸಹನೆವುಳ್ಳವರಾಗಿ ಏಕೆಂದರೆ ಕಲಹ ಮತ್ತು ಹಿಂಸೆಯನ್ನು ತಡೆಯುವುದಕ್ಕಾಗಿ. ಹೀಗೆ ಮಾಡಿದಾಗ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಅಂತ್ಯದಲ್ಲಿ ನೀವೇ ಲಾಭ ಪಡೆಯುವಿರಿ.
ನೀವು ಈ ಜಗತ್ತಿಗೆ ಶಾಂತಿಯನ್ನು ತರಲು ಇಚ್ಛಿಸುವಿರಾ, ಹಾಗಾದರೆ ಮೊದಲು ನಿಮ್ಮ ದೃಷ್ಟಿಕೋನಗಳನ್ನು ಬದಲಿಸಿ ಸಮ್ಮಾದೃಷ್ಟಿಯುಳ್ಳವರಾಗಿ ಮತ್ತು ಸ್ವಾರ್ಥವನ್ನು ತೆಗೆದುಹಾಕಿ. ವಿಶ್ವಶಾಂತಿಯ ಕಾಂಡವು ಆಂತರಿಕ ಶಾಂತಿಯಿಂದಲೇ ಬರಬೇಕಾಗುತ್ತದೆ. ನಾವು ನಮ್ಮನ್ನು ನ್ಯಾಯವಲ್ಲದ ಟೀಕೆಗಳಿಂದ ರಕ್ಷಿಸಿಕೊಳ್ಳಲು ಕಲಿಯಬೇಕು ಮತ್ತು ಸಕಾರಾತ್ಮಕ ಟೀಕೆಯ ಸದ್ಭಳಕೆಯನ್ನು ಕಲಿಯಬೇಕಾಗಿದೆ. ನಾವು ಟೀಕೆಗೆ ಸದಾ ವಿಷಯಾತ್ಮಕವಾಗಿ ದಿಟ್ಟಿಸಬೇಕು. ಟೀಕೆಯು ಸುಳ್ಳಾಗಿದ್ದರೆ, ಅನ್ಯಾಯದಿಂದ ಕೂಡಿದ್ದರೆ, ಪಾಪದಿಂದ ಸ್ಥಾಪಿತವಾಗಿದ್ದರೆ, ದುಷ್ಟ ಇಚ್ಛೆಗಳಿಂದ ನೀಡಲ್ಪಟ್ಟಿದ್ದರೆ ನಾವು ಹೇಡಿತನದಿಂದ ನಮ್ಮ ಘನತೆಯನ್ನು ಎಂದಿಗೂ ಒಪ್ಪಿಸಬಾರದು, ಶರಣಾಗಬಾರದು.
ನಾವು ಜ್ಞಾನಪೂರ್ವಕವಾಗಿ, ಇಚ್ಛಾಪೂರ್ವಕವಾಗಿ ಯಾವುದೇ ತಪ್ಪನ್ನು ಮಾಡದಿದ್ದರೆ, ನಮ್ಮ ದೃಷ್ಟಿಕೋನವು ಸರಿಯಿದ್ದರೆ ಮತ್ತು ಜ್ಞಾನಿಗಳಿಂದ ಪ್ರಶಂಸಿತವಾಗಿದ್ದರೆ ಆಗ ನಾವು ಕೆಟ್ಟದ್ದರಿಂದ ಸ್ಥಾಪಿತವಾದ ಟೀಕೆಗೆ ಚಿಂತೆಪಡುವ ಅಗತ್ಯವಿಲ್ಲ. ಸಕಾರಾತ್ಮಕ ಟೀಕೆಯೇ ಆಗಲಿ, ನಕಾರಾತ್ಮಕ ಟೀಕೆಯೇ ಆಗಲಿ, ಅವನ್ನು ಅರಿತು ನಮ್ಮ ಜೀವನದಲ್ಲಿ ಹೊಂದಿಕೊಂಡು ನಡೆದರೆ ನಾವು ಯಾವುದೇ ಸಮಾಜದಲ್ಲೂ ಜೀವಿಸಬಹುದು. ನಮ್ಮ ನ್ಯೂನತೆ ಮತ್ತು ದೌಭರ್ಾಗ್ಯಗಳಿಂದಾಗಿ ನಾವು ಸದಾ ಪರರನ್ನು ದೂಷಿಸುವುದರಲ್ಲೇ ಭಾಗಿಗಳಾಗಿರುತ್ತೇವೆ. ನೀವು ಎಂದಾದರೂ ನಿಮ್ಮ ಸಮಸ್ಯೆಗಳಿಗೆ ನೀವು ಸಹಾ ಭಾರಿ ಹೊಣೆಗಾರರು ಎಂದು ಅರಿತಿರುವಿರಾ?
ನಿಮ್ಮ ದುಃಖಕ್ಕೆ ನಿಮ್ಮ ಕುಟುಂಬದ ಶಾಪವಾಗಲಿ ಅಥವಾ ನಿಮ್ಮ ಪೂರ್ವಜರ ಪಾಪವಾಗಲಿ ಕಾರಣವಲ್ಲ, ಹಾಗೆಯೇ ಇದು ದೇವರ ಕಾರ್ಯವಾಗಲಿ ಅಥವಾ ಸೈತಾನ ಕೃತ್ಯವೂ ಅಲ್ಲ. ನಿಮ್ಮ ದುಃಖ ನಿಮ್ಮಿಂದಲೇ ಸೃಷ್ಟಿಯಾಗಿರುವಂತಹದು. ಆದ್ದರಿಂದಾಗಿ ನಿಮಗೆ ನೀವೆ ಬಂಧಿಯು ಹಾಗೆಯೇ ನಿಮಗೆ ನೀವೇ ವಿಮೋಚಕರು ಸಹಾ ಆಗಿದ್ದೀರಿ. ನೀವೇ ನಿಮ್ಮ ನರಕವನ್ನು ಮತ್ತು ನಿಮ್ಮ ಸ್ವರ್ಗವನ್ನು ನಿಮರ್ಿಸುವವರೂ ಆಗಿದ್ದೀರಿ. ನಿಮ್ಮಲ್ಲೇ ಪಾಪಿಯಾಗುವ ಅಥವಾ ಸಂತನಾಗುವ ಎಲ್ಲಾ ಪ್ರಚನ್ನತೆಯು ಇದೆ. ಯಾರು ಸಹಾ ನಿಮ್ಮನ್ನು ಪಾಪಿಯನ್ನಾಗಲಿ ಅಥವಾ ಸಂತನನ್ನಾಗಲಿ ಮಾಡಲಾರರು.
ನಿಮ್ಮ ಜೀವನದ ಆಗು-ಹೋಗುಗಳಿಗೆ ನೀವೇ ಹೊಣೆಗಾರರು ಎಂದು ಒಪ್ಪಲು ನೀವು ಕಲಿಯಬೇಕು. ನಿಮ್ಮ ದೌರ್ಬಲ್ಯಗಳನ್ನು ಇತರರನ್ನು ದೂಷಿಸದೇ ಅಥವಾ ತೊಂದರೆ ನೀಡದೇ ನೀವೇ ಒಪ್ಪಿಕೊಳ್ಳಬೇಕು. ಹಳೆಯ ಹೇಳಿಕೆಯನ್ನು ನೆನಪಿಸಿಕೊಳ್ಳಿ: 
ಅನಾಗರಿಕ ಮನುಷ್ಯನು ದುಃಖಗಳಿಗೆ ಕಾರಣವಾಗಿ ಪರರನ್ನು ದೂಷಿಸುತ್ತಾನೆ; ಅರೆನಾಗರಿಕ ಮನುಷ್ಯನು ದುಃಖಗಳಿಗೆ ಕಾರಣವಾಗಿ ಕೇವಲ ತನ್ನನ್ನೇ ನಿಂದಿಸಿಕೊಳ್ಳುತ್ತಾನೆ ಮತ್ತು ಪೂರ್ಣ ಸುಸಂಸ್ಕೃತ ಮಾನವ ಯಾರಿಗೂ ನಿಂದಿಸನು.
ಯಾವಾಗಲೇ ಆಗಲಿ, ಸಮಸ್ಯೆಗಳು ಉಂಟಾದಾಗ, ನಾವು ಪರರನ್ನು ನಿಂದಿಸುವ ಮೊದಲು, ತಪ್ಪು ಎಲ್ಲಿ ಅಡಗಿದೆ ಎಂದು ಹುಡುಕಬೇಕು. ಪ್ರತಿಯೊಬ್ಬನೂ ತನಗೆ ತಾನೇ ತಿದ್ದಿಕೊಳ್ಳಲು ಪ್ರಯತ್ನಿಸಿದಾಗ ಈ ಜಗತ್ತಿನಲ್ಲಿ ಸಮಸ್ಯೆಯಾಗಲಿ ಅಥವಾ ಸಂಘರ್ಷವಾಗಲಿ ಇರಲಾರದು. ಆದರೆ ಜನರು ಪಕ್ಷಪಾತಕ್ಕೆ ಅತೀತರಾಗಿ ತಮ್ಮ ಅರಿವನ್ನು ವೃದ್ಧಿಸಲು ಪ್ರಯತ್ನವನ್ನೇ ಮಾಡುತ್ತಿಲ್ಲ. ಅವರು ಬಲಿಪಶುಗಳನ್ನು ಹುಡುಕಲು ಆಯ್ಕೆಮಾಡುತ್ತಾರೆ. ಅವರು ತೊಂದರೆಗಳ ಮೂಲವನ್ನು ಹುಡುಕುವ ಬದಲು ತಮ್ಮಿಂದ ಹೊರಗೆ ಕಾರಣ ಹುಡುಕುತ್ತಿದ್ದಾರೆ. ಏಕೆಂದರೆ ಅವರು ತಮ್ಮ ದೌರ್ಬಲ್ಯಗಳನ್ನು ಒಪ್ಪಲು ಮನಸ್ಸಿಲ್ಲದವ ರಾಗಿದ್ದಾರೆ. 
ಮಾನವನ ಮನಸ್ಸು ಎಷ್ಟೊಂದು ಸ್ವ-ಮೋಸ ಮಾಡಿಕೊಳ್ಳುವುದೆಂದರೆ ಆತನು ತನ್ನ ಕಾರ್ಯಗಳನ್ನು ಸಮಥರ್ಿಸಿಕೊಳ್ಳಲು ಅಪಾರ ನೆಪಗಳನ್ನು ಹುಡುಕುತ್ತಾನೆ. ಹೀಗೆ ಮಾಡುತ್ತಾ ತಾನು ನಿಂದಾತೀತ ಎಂಬ ಭ್ರಮೆಯನ್ನು ಸೃಷ್ಟಿಸುತ್ತಾನೆ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳುತ್ತಾರೆ: ಪರರ ತಪ್ಪುಗಳು ಸುಲಭವಾಗಿ ಕಾಣುವುದು; ಆದರೆ ತನ್ನ ತಪ್ಪುಗಳನ್ನು ಕಾಣುವುದು ನಿಜಕ್ಕೂ ಕಷ್ಟಕರವಾಗಿದೆ - ಧಮ್ಮಪದ.
ಕೆಲವರು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಅಡಗಿಸಲು ತಾವು ತಪ್ಪೇ ಮಾಡಿಲ್ಲ ಎಂದು ನಿರಾಕರಿಸುತ್ತಲೇ ಹೋಗುತ್ತಾರೆ. ಅದೇರೀತಿಯ ಆಕ್ರಮಣಕಾರಿ ಮನೋಭಾವವನ್ನು ಹೊಂದಿಸಿಕೊಂಡಿರುತ್ತಾರೆ. ಅವರು ಈ ರೀತಿ ಮಾಡುವುದರಿಂದ ದೋಷಿಯಾಗುವ ಲಜ್ಜೆಗೇಡಿ ಸನ್ನಿವೇಶವನ್ನು ತಡೆಯಲು, ತಾವು ಆರೋಪದಿಂದ ಪಾರಾಗಲು ಹಾಗೆ ಮಾಡುತ್ತಾರೆ. ಆದರೆ ಅಂತಹ ಮನೋವೃತ್ತಿಯಿಂದಾಗಿ ಅವರು ಇನ್ನಷ್ಟು ಸಮಸ್ಯೆಗಳನ್ನು ತಮಗಾಗಿ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅನಾರೋಗ್ಯಕರ ಪರಿಸರವನ್ನು ಉಂಟುಮಾಡುತ್ತಿದ್ದಾರೆ.
ನೀವು ತಪ್ಪು ಮಾಡಿರುವಾಗ, ನೀವು ಒಪ್ಪಿಕೊಳ್ಳಿ. ಅದಕ್ಕೆ ಬದಲು ಪರರನ್ನು ನಿಂದಿಸುವ ಅವರನ್ನೇ ಕಾರಣಕರ್ತರನ್ನಾಗಿಸುವ ಅನಾಗರಿಕ ಹಾದಿಗಳನ್ನು ತುಳಿಯಬೇಡಿ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ.
ತನ್ನನ್ನು ಮೂರ್ಖನೆಂದು ಒಪ್ಪದವನೇ ಮೂರ್ಖನು. ಆತನೇ ನಿಜ ಮೂರ್ಖನು ಮತ್ತು ತನ್ನ ಮೂರ್ಖತ್ವವನ್ನು ಒಪ್ಪಿದವನು ಅಷ್ಟರಮಟ್ಟಿಗೆ ಜ್ಞಾನಿಯೇ ಸರಿ -ಧಮ್ಮಪದ.
ನಿಮಗೆ ಬರುವ ದುಃಖಗಳಿಗೆ ನೀವೇ ಕಾರಣಕರ್ತರು. ಯಾವಾಗ ನೀವು ಸಣ್ಣಪುಟ್ಟ ಪ್ರಸಂಗಗಳೆಲ್ಲವನ್ನೂ ನಿಮ್ಮ ಮನಸ್ಸಿಗೆ ಘಾಸಿಯಾಗಲು ಸ್ವಾಗತಿಸುವಿರೋ ಅದೇ ನಿಮಗೆ ದುಃಖವನ್ನು ತರುತ್ತದೆ. ಜಗತ್ತಿನಿಂದ ಏನೂ ತಪ್ಪಾಗಿಲ್ಲ, ಬದಲಾಗಿ ನಮ್ಮ ಜೀವನದ ರೀತಿಗಳಲ್ಲಿ ತಪ್ಪಾಗಿವೆ ಎಂದು ನಾವು ದುಃಖಿಸುವಾಗ ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ.






5.9 ಏನನ್ನೂ ನಿರೀಕ್ಷಿಸಬೇಡಿ ಮತ್ತು ಯಾವುದೂ ನಿಮಗೆ ನಿರಾಶೆಯ ದುಃಖ ತರಲಾರದು
ನಿಮ್ಮ ಘನತೆಯ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಆಗ ಮಾತ್ರ ನಿರಾಶೆಗಳನ್ನು ನೀವು ತಡೆಯಬಹುದು. ಯಾವುದೇ ನಿರೀಕ್ಷೆಗಳಿಲ್ಲದಿದ್ದರೆ ಆಗ ಯಾವುದೂ ಸಹಾ ನಿಮ್ಮನ್ನು ನಿರಾಶೆಗೊಳಿಸಲಾರದು ಮತ್ತು ನಿಮ್ಮಿಂದ ಯಾವುದೂ ಕಿತ್ತುಕೊಳ್ಳಲಾಗದು. ಪರರು ದುಃಖದಿಂದ ಪಾರಾಗಲು ನೀವು ಏನಾದರೂ ಮಾಡುತ್ತೀರಿ. ಆ ಮಹತ್ಕಾರ್ಯಕ್ಕಾಗಿ ನೀವು ಕೀತರ್ಿ ಅಥವಾ ಕೊಡುಗೆಯನ್ನು ನಿರೀಕ್ಷಿಸದಿದ್ದರೆ ನಿಮಗೆ ಯಾವುದೇ ಆಶಾಭಂಗವಾಗುವುದಿಲ್ಲ. ಆಗ ನೀವು ಸಂತೃಪ್ತ ವ್ಯಕ್ತಿಯಾಗುತ್ತೀರಿ! ಪರರಿಗೆ ನೀವು ಒಳಿತನ್ನು ಮಾಡುವಾಗ, ನಿಮ್ಮ ಮನಸ್ಸಿನಲ್ಲಿ ಉಂಟಾಗುವ ಆನಂದವೇ ನಿಮಗೆ ಸಿಕ್ಕ ದೊಡ್ಡ ಬಹುಮಾನವಲ್ಲವೇ?
ಆ ಆನಂದವು ನಿಮ್ಮ ಜೀವನದಲ್ಲಿ ಅಪಾರವಾದ ಸಂತೃಪ್ತಿಯನ್ನು ನೀಡುತ್ತದೆ. ನೀವು ಬಹುಮಾನವನ್ನು ನಿರೀಕ್ಷಿಸಿದರೆ ನೀವು ಆ ಶ್ರೇಷ್ಠ ಆನಂದವನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ ಆಶಾಭಂಗದ ಕಹಿಯನ್ನು ಅನುಭವಿಸುವಿರಿ. ನಿಮ್ಮನ್ನು ಹಾನಿ ಮಾಡುವ ಉದ್ದೇಶವಿರುವವನಿಂದ ನೀವು ರಕ್ಷಣೆ ಪಡೆಯಬೇಕಿದ್ದರೆ ಏನನ್ನೂ ಬಯಸದಿರುವಿಕೆಯೇ ನೀವು ಹೊಂದಬೇಕಾದ ಅಸ್ತ್ರವಾಗಿದೆ. ಒಂದು ಹೇಳಿಕೆಯಿದೆ, ಅದೆಂದರೆ ಯಾವ ವ್ಯಕ್ತಿ ಏನನ್ನೂ ಬಯಸುವುದಿಲ್ಲವೋ ಅಂತಹವನಿಂದ ಎಚ್ಚರದಿಂದಿರಿ.
ನೀವು ಉತ್ತಮ ವ್ಯಕ್ತಿಯೇ ಆಗಿರಬಹುದು. ಆದ್ದರಿಂದ ನೀವು ಪರಿರಿಗೆ ಯಾವುದೇ ಹಾನಿಯನ್ನು ಮಾಡದೆ ಇರಬಹುದು. ಆದರು ಸಹಾ ನೀವು ನಿಂದೆಯನ್ನು ಪಡೆಯುವಿರಿ. ಆಗ ನೀವು ಹೀಗೂ ಪ್ರಶ್ನಿಸಬಹುದು, ಒಳ್ಳೆಯದನ್ನು ಮಾಡಿದರೆ ಒಳಿತೇ ಆಗುವುದು ಮತ್ತು ಕೆಟ್ಟದ್ದನ್ನು ಮಾಡಿದರೆ ಕೆಟ್ಟದೇ ಆಗುವುದಿದ್ದರೆ, ಪೂರ್ಣ ಮುಗ್ಧ ನಿರಾಪರಾಧಿಯಾದ ನಾನು ಏತಕ್ಕಾಗಿ ದುಃಖಿಸಬೇಕು? ನನಗೆ ಏಕೆ ಇಷ್ಟೆಲ್ಲಾ ಕಷ್ಟಗಳಿವೆ? ಇಷ್ಟೆಲ್ಲಾ ಸಂಕಷ್ಟಗಳಿಂದ ತೊಂದರೆಗಳಿಂದ ನಾನೇಕೆ ಸಿಕ್ಕಿಕೊಂಡಿದ್ದೇನೆ? ನಾನು ಒಳ್ಳೆಯದನ್ನು ಮಾಡಿಯೂ ಸಹಾ ನಿಂದನೆಗೆ ಏಕೆ ಗುರಿಯಾಗುತ್ತಿದ್ದೇನೆ? ಇದಕ್ಕಿರುವ ಸರಳ ಉತ್ತರವೆಂದರೆ ಯಾವಾಗ ನೀವು ಕೆಲವು ಒಳ್ಳೆಯದನ್ನು ಮಾಡಲು ಹೋಗುತ್ತಿರುವಿರೋ ಆಗ ನಿಮಗೆ ತಿಳಿಯದೆ ನೀವು ಕೆಟ್ಟ ಬಲಗಳೊಂದಿಗೆ (ವ್ಯಕ್ತಿ) ವಿರುದ್ಧವಾಗಿ ಹೋಗುತ್ತಿರುವಿರಿ.
ಆ ಕೆಟ್ಟ ಬಲಗಳು ಸ್ವಾಭಾವಿಕವಾಗಿ ಒಳ್ಳೆಯ ಕಾರ್ಯಗಳಿಗೆ ತಡೆಯೊಡ್ಡುತ್ತವೆ. ಅದಿಲ್ಲದಿದ್ದರೆ ನಿಮ್ಮ ಹಿಂದಿನ ಜನ್ಮದ ಪಾಪಕೃತ್ಯದ ಫಲವು ಈ ಜನ್ಮದಲ್ಲಿ ಫಲ ನೀಡುತ್ತಿದೆ. ಅತ್ಯಂತ ಪ್ರಜ್ಞಾಯುತವಾಗಿ ನೀವು ಸುಕರ್ಮಗಳನ್ನು ಮುಂದುವರೆಸಿದಾಗ ನೀವು ಅಂತಹ ತೊಂದರೆಗಳಿಂದ ಪಾರಾಗಬಹುದು. ಏಕೆಂದರೆ ನೀವೇ ಪ್ರಾರಂಭಿಕವಾಗಿ ನಿರಾಶೆಯನ್ನು ಸೃಷ್ಟಿಸಿದ್ದರಿಂದಾಗಿ ನೀವೇ ಈಗ ನಿಜ ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಇದರಿಂದ ಪಾರಾಗಬೇಕಾಗಿದೆ. 
ಬಹಳಷ್ಟು ಪ್ರಾಪಂಚಿಕ ಸ್ಥಿತಿಗತಿಗಳು ನಮ್ಮ ನಿಯಂತ್ರಣದ ಎಲ್ಲೆಯನ್ನು ಮೀರಿವೆ. ಅನಿರೀಕ್ಷಿತ ಬದಲಾವಣೆಗಳು, ವಿವಿಧ ಪ್ರಭಾವಗಳು ಮತ್ತು ಅನಿಶ್ಚಿತತೆಗಳು ನಮಗೆ ನಿರಾಶೆಯನ್ನುಂಟು ಮಾಡುತ್ತವೆ. ಆದ್ದರಿಂದಲೇ ಅಂತಹ ಬದಲಾವಣೆಗಳ ಸನ್ನಿವೇಶಗಳಲ್ಲಿ ಒಳ್ಳೆಯದನ್ನು ಮಾಡುವುದು ಕಷ್ಟಕರವಾಗುತ್ತದೆ. ಬುದ್ಧರ ಈ ಬುದ್ಧಿವಾದವನ್ನು ಜನರು ಉತ್ತಮವಾಗಿ ಯೋಚಿಸಿದರೆ, ಪ್ರತಿಯೊಬ್ಬರೂ ತಮ್ಮ ಪರಸ್ಪರ ರಕ್ಷಣೆಗಾಗಿ ಏನಾದರೂ ಕಾಣಿಕೆಯನ್ನು ನೀಡುತ್ತಿದ್ದರು. ಬಡವನಾಗಿಯು, ಸಂತೃಪ್ತನಾಗಿದ್ದರೆ, ಸುಖಿಯಾಗಿದ್ದರೆ ಅಂತಹವನು ಶ್ರೀಮಂತನಾಗಿದ್ದರೂ ಚಿಂತಿತ ಲೋಭಗ್ರಸ್ತನಾಗಿದ್ದವನಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತಾನೆ, ಶ್ರೇಷ್ಠನಾಗಿರುತ್ತಾನೆ.
ಹಲವು ಜನರು ಈ ರೀತಿ ಗೊಣಗುತ್ತಾರೆ, ಅದು ಏನೆಂದರೆ ನಾವು ಬಹಳಷ್ಟು ಒಳ್ಳೆಯದನ್ನು ಅವರಿಗಾಗಿ ಮಾಡಿದೆವು. ಆದರೆ ಅವರು ಧನ್ಯವಾದ ಎಂದು ಸಹಾ ಹೇಳಲಿಲ್ಲ. ನಾವು ಪರರಿಗೆ ಸಹಾಯ ಮಾಡುವಾಗ ಸಿಗುವ ಆನಂದವೇ ಶ್ರೇಷ್ಠವಾಗಿರುವಾಗ ಈ ಕೃತಜ್ಞತೆಗೆ ಏತಕ್ಕಾಗಿ ಪ್ರಾಧಾನ್ಯತೆ?
ಬುದ್ಧ ಭಗವಾನರು ಕೃತಜ್ಞತೆಯನ್ನು ಶ್ರೇಷ್ಠ ಸದ್ಗುಣಗಳಲ್ಲಿ ಒಂದೆಂದು ಭಾವಿಸಿದ್ದರು. ಆದರೂ ಸಹಾ ಈ ಸದ್ಗುಣವು ಈ ಜಗತ್ತಿನಲ್ಲಿ ಅತಿವಿರಳ. ನೀವು ಪರರಿಗೆ ಮಾಡಿದ ಒಳ್ಳೆಯತನಕ್ಕಾಗಿ ಜನರನ್ನು ಸದಾ ನಿಮಗೆ ಕೃತಜ್ಞರಾಗಿರಬೇಕೆಂದು ನೀವು ನಿರೀಕ್ಷಿಸಲಾರಿರಿ. ಹಿಂದಿನ ಉಪಕಾರಗಳನ್ನು ನೆನೆಯುವಾಗ ಜನರು ಮರೆತು ಹೋಗುವುದರಲ್ಲಿ ಭಾಗಿಯಾಗಿರುತ್ತಾರೆ. ಜನರು ಕೃತಜ್ಞತೆಯನ್ನು ತೋರಿಸುವುದರಲ್ಲಿ ಸೋತಾಗ, ಆಗ ನೀವು ಅದನ್ನು ಶಾಂತವಾಗಿ ಸ್ವೀಕರಿಸಬೇಕು. ಆಗ ಮಾತ್ರ ನೀವು ನಿರಾಶೆಯನ್ನು ತಡೆಗಟ್ಟಬಹುದು. ನೀವು ಮಾಡಿದ ಉಪಕಾರ ಮತ್ತು ದಯೆಗೆ ಜನರು ಕೃತಜ್ಞತೆ ತೋರಿದರೂ ಅಥವಾ ಇಲ್ಲದಿದ್ದರೂ ನೀವು ಮಾತ್ರ ಸುಖಿಯಾಗಿ ಇರಬಹುದು. ನೀವು ನಿಮ್ಮ ಉದಾತ್ತವಾದ ಕರ್ತವ್ಯವನ್ನು ಮಾನವನಾಗಿ ಮಾಡಿದ್ದೀರಿ, ಪರರಿಗೆ ಹಿತವನ್ನೇ ಮಾಡಿರುವಿರಿ ಎಂದು ಯೋಚಿಸಿ, ನೀವು ಸಂತೃಪ್ತಿ ತಾಳಬಹುದು. 





5.10 ಕ್ಷಮಿಸಿ ಮತ್ತು ಮರೆತುಬಿಡಿ
ತೊಂದರೆಕಾರರೊಂದಿಗೆ ಸೇಡು ತೀರಿಸುವಿಕೆಯು ಇನ್ನಷ್ಟು ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಸೃಷ್ಟಿಸುತ್ತದೆ. ನಕಾರಾತ್ಮಕ ವೇದನೆಗಳು ಮತ್ತು ದ್ವೇಷಯುಕ್ತ ಕ್ರಿಯೆಗಳು ನಿಮಗೂ ಮತ್ತು ತೊಂದರೆಕಾರರಿಗೂ ಹಾನಿ ಮತ್ತು ದುಃಖವನ್ನು ತರುವುದು ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿರಿ. ಸೇಡಿನ ಕ್ರಿಯೆಯಿಂದ ನಿಮ್ಮ ಮನಸ್ಸಿನಲ್ಲಿ ಅಪಾರವಾದ ದ್ವೇಷವು ನೆಲೆಸುವುದು. ಈ ದ್ವೇಷವು ವಿಷದಂತೆ, ವಿಷವು ಪ್ರಾರಂಭದಲ್ಲಿ ನಿಮ್ಮಲ್ಲಿದ್ದಾಗ ಪರರಿಗೆ ಏನಾದರೂ ಮಾಡುವ ಮುನ್ನ ನಿಮಗೆಯೇ ಮೊದಲು ಹಾನಿ ಎಸಗುತ್ತದೆ. ಪರರತ್ತ ಉರಿಯುವ ಕಬ್ಬಿಣ ಎಸೆಯುವ ಮುನ್ನ ನಿಮ್ಮ ಕೈಯನ್ನು ಸುಡುವುದು, ನಿಮ್ಮ ಈ ಕ್ರಿಯೆಯಿಂದ ನಿಮಗೂ ಮತ್ತು ನಿಮ್ಮ ವಿರೋಧಿಗೂ ಅಂತಹ ಮೂಲಭೂತ ವ್ಯತ್ಯಾಸವೇನು ಕಾಣಿಸುವುದಿಲ್ಲ. 
ಪರರಿಗೆ ದ್ವೇಷಿಸುತ್ತಾ, ನೀವು ಅವರಿಗೆ ನಿಮ್ಮನ್ನು ಆಳುವ ಅವಕಾಶ ಮಾಡುತ್ತಿರುವಿರಿ, ಇದರಿಂದ ನಿಮ್ಮ ಸಮಸ್ಯೆಯನ್ನು ನೀವು ಬಗೆಹರಿಸಲಾರಿರಿ. ನೀವು ಒಬ್ಬನ ಮೇಲೆ ಕೋಪಗೊಂಡಾಗ ಆತನು ಪ್ರತಿಯಾಗಿ ಮುಗುಳ್ನಗೆ ಬೀರಿದಾಗ, ಆಗ ನೀವು ಸೋತಂತೆ ದುಃಖ ಅನುಭವಿಸುವಿರಿ. ಏಕೆಂದರೆ ನಿಮ್ಮ ಇಚ್ಛೆಯಂತೆ ಆತನು ಸಹಕರಿಸಲಿಲ್ಲ. ಇಲ್ಲಿ ಆತನೇ ವಿಜಯಶಾಲಿಯಾದನು. ಬುದ್ಧ ಭಗವಾನರು ನಮಗೆ ತೊಂದರೆಗಳನ್ನು ಎದುರಿಸುವಾಗ ಹೇಗೆ ಸುಖವಾಗಿರಬೇಕು ಎಂದು ಹೀಗೆ ಬೋಧಿಸಿದ್ದಾರೆ. ಓಹ್ ದ್ವೇಷಗಳ ನಡುವೆ ದ್ವೇಷವಿಲ್ಲದೆ ಸುಖವಾಗಿರೋಣ, ದ್ವೇಷಿಗಳ ಮಧ್ಯೆ ದ್ವೇಷವಿಲ್ಲದೆ ಜೀವಿಸೋಣ - ಧಮ್ಮಪದ.
ನಾವು ದ್ವೇಷಾಗ್ನಿಗೆ ಇನ್ನಷ್ಟು ಗಾಳಿಯನ್ನು ಬೀಸದೇ ಅದನ್ನು ಆರಿಸಿ ಸುಖವಾಗಿ ಜೀವಿಸಬಹುದು ಬಹುಶಃ ನೀವು ನಿಮ್ಮ ಶತ್ರುಗಳ ಮೇಲೆ ದಯೆರಹಿತ ಪ್ರೀತಿಯನ್ನು ವಿಸ್ತರಿಸಲು ಸಮರ್ಥರಿಲ್ಲದಿರಬಹುದು. ಆದರೆ ನಿಮ್ಮ ಸುಖ ಮತ್ತು ಆರೋಗ್ಯಕ್ಕಾಗಿ ಮತ್ತು ಎಲ್ಲರ ಕಲ್ಯಾಣಕ್ಕಾಗಿಯು ನೀವು ಹೇಗೆ ಕ್ಷಮಿಸಬೇಕು ಮತ್ತು ಮರೆಯಬೇಕು ಎಂಬುದನ್ನು ಕಲಿಯಲೇಬೇಕಾಗಿದೆ. 
ನೀವು ತೊಂದರೆಕಾರರನ್ನು ದ್ವೇಷಿಸದೇ ಅಥವಾ ಹಿಂಸಿಸದೇ ಸಭ್ಯ ಮಾನವರಾಗ ಬೇಕಾಗಿದೆ. ಈ ರೀತಿಯಲ್ಲಿ ವತರ್ಿಸಬೇಕಾದರೆ ಆ ಬೇರೆ ವ್ಯಕ್ತಿಯು ಸಹಾ ಕೋಪದಿಂದ, ಅಸೂಯೆಯಿಂದ ಮತ್ತು ಅಜ್ಞಾನದಿಂದ ಹಾದಿ ತಪ್ಪಿರುವನು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಆತನು ಸಹಾ ಬೇರೆ ಮಾನವರಂತೆ ಭಿನ್ನವಾಗಿಲ್ಲ. ನಾವು ಅಂತಹುದೇ ಭಾವಾವೇಶಕ್ಕೆ ಹಿಂದೊಮ್ಮೆ ಬಲಿಯಾಗಿ ದಾರಿ ತಪ್ಪಿದ್ದೆವು ಎಂದೂ ಅರಿಯಬೇಕು.
ಬುದ್ಧ ಭಗವಾನರು ಹೀಗೆ ಹೇಳುವರು: ಪಾಪಿಗಳು ತಮ್ಮ ಸ್ವಭಾವದಿಂದ ಹಾಗಾಗಿಲ್ಲ. ಅವರು ತಮ್ಮ ಅಜ್ಞಾನದಿಂದಾಗಿ ಹಾಗೆ ಆಗಿದ್ದಾರೆ. ಆದ್ದರಿಂದಾಗಿ ಅವರಿಗೆ ಮಾರ್ಗದರ್ಶನದ ಅಗತ್ಯವಿದೆ.
ಅವರಿಗೆ ನಾವು ಶಪಿಸಬಾರದು. ಅವರನ್ನು ನಿತ್ಯ ನರಕದಂತಹ ದುಃಖಕ್ಕೆ ಬೀಳಲಿ ಎನ್ನುವುದು ನ್ಯಾಯಬದ್ಧವಲ್ಲ, ಅವರನ್ನು ತಿದ್ದುವುದು ತೀರಾ ನಿಧಾನವಾಗದಿರಲಿ, ನಾವು ಅವರಿಗೆ ಅವರು ತಪ್ಪಾದ ಹಾದಿಯಲ್ಲಿರುವರು ಎಂದು ಹೇಳಿ ಅವರಿಗೆ ಮನದಟ್ಟಾಗುವಂತೆ ಸತ್ಯದ ವಿಶ್ಲೇಷಣೆ ಮಾಡಿಸೋಣ. ಈ ರೀತಿಯ ತಿಳುವಳಿಕೆಯಿಂದ ನೀವು ಪಾಪಿಯನ್ನು ರೋಗಿಯಂತೆ ಆರೈಕೆ ಮಾಡಬೇಕು, ಇಲ್ಲಿ ರೋಗಿಗೆ ಮಾನಸಿಕ ಕಶ್ಮಲಗಳ ಮತ್ತು ದುಃಖದ ರೋಗವಿದೆ. ಆತನಿಗೆ ಆರೈಕೆಯ ಅಗತ್ಯವಿದೆ. ಆತನ ರೋಗವು ಗುಣಮುಖವಾದ ಮೇಲೆ ಆತನು ಮುಂದೆ ರೋಗಿಯಾಗಿಯೇ ಇರುವುದಿಲ್ಲ. ಪ್ರತಿಯೊಬ್ಬರು ಸುಖವಾಗಿ ಮತ್ತು ಕ್ಷೇಮವಾಗಿ ಇರುವರು. ಅಜ್ಞಾನಿಗೆ ಜ್ಞಾನಿಗಳ ಮಾರ್ಗದರ್ಶನ ಅಗತ್ಯವಿದೆ. ಯಾವಾಗಲೇ ಆಗಲಿ, ಉತ್ತಮ ಜೀವನವು ಪ್ರೀತಿಯಿಂದ ಸ್ಪೂತರ್ಿಗೊಂಡಿರುತ್ತದೆ ಮತ್ತು ಜ್ಞಾನದಿಂದ ಮಾರ್ಗದಶರ್ಿತವಾಗಿರುತ್ತದೆ.
ಯಾವುದೇ ಮಾನವನು ನಿಮ್ಮೊಡನೆ ಸ್ವಲ್ಪ ತಪ್ಪು ಎಸಗಿದ್ದರೆ ಅದು ಅಜ್ಞಾನದಿಂದಾಗಿ ಮತ್ತು ಮಿಥ್ಯಾದೃಷ್ಟಿಯಿಂದಾಗಿ ಆಗಿರುತ್ತದೆ. ಆದ್ದರಿಂದ ಪಾಪಿಗೆ ನಿಮ್ಮ ದಯೆಭರಿತ ಪ್ರೀತಿಯ ಅಗತ್ಯತೆಯಿರುತ್ತದೆ. ಒಂದಲ್ಲ ಒಂದುದಿನ ಆತನಿಗೆ ತನ್ನ ಮೂರ್ಖತ್ವದ ಅರಿವು ಉಂಟಾಗುತ್ತದೆ ಮತ್ತು ಆತನು ತನ್ನ ಕೆಟ್ಟ ಚಟಗಳೆಲ್ಲವನ್ನು ಬಿಟ್ಟುಬಿಡಬಹುದು. ಆದ್ದರಿಂದ ಆತನಿಗೆ ಒಳ್ಳೆಯವನಾಗಿ ಬದುಕಲು ಒಂದು ಅವಕಾಶ ನೀಡಲೇಬೇಕಾಗಿದೆ. ತನ್ನ ಹಿಂದಿನ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪವೇ ಮಾನವನನ್ನು ಬದಲಾಯಿಸುತ್ತದೆ ಮತ್ತು ಕೊನೆಗೆ ಆತನು ನಿಮ್ಮ ದಯಾಭರಿತ ಯೋಚನೆಗಳಿಗೆ ಮೆಚ್ಚುತ್ತಾನೆ. ಇದರ ಬಗ್ಗೆ ಲೋಕಾನುಕಂಪೆ ಯುಳ್ಳ ಬುದ್ಧ ಭಗವಾನರು ಹೀಗೆ ಬುದ್ಧಿವಾದ ನೀಡಿದ್ದಾರೆ:
ದ್ವೇಷದಿಂದ ದ್ವೇಷವು ನಿಲ್ಲುವುದಿಲ್ಲ, ಅದ್ವೇಷದಿಂದಲೇ (ಪ್ರೀತಿ) ದ್ವೇಷವು ನಿಲ್ಲುವುದು ಇದೇ ಸನಾತನ ನಿಯಮವಾಗಿದೆ - ಧಮ್ಮಪದ.
ನೀವು ಮೈತ್ರಿಯನ್ನು ಪ್ರಶಂಸಿಸಿದರೆ ಯಾವ ಹಾನಿಯೂ ನಿಮಗೆ ತಟ್ಟದು. ಇದರಿಂದಾಗಿ ನಿಮ್ಮ ಭೌತಿಕ ಮತ್ತು ಮಾನಸಿಕ ಸ್ವಸ್ತಗಳೆರಡನ್ನೂ ನೀವು ಪ್ರಾಪ್ತಿಮಾಡಲು ಸಾಧ್ಯವಾಗುವುದು. ಜೀವನಕ್ಕೆ ತನ್ನದೇ ಆದ ಲಯಬದ್ಧ ಚಲನೆಯಿದೆ, ಯಾವಾಗ ನೀವು ಓಲಾಡುವುದನ್ನು ಕಳೆದುಕೊಳ್ಳುವಿರೋ, ನೀವು ಆಗ ಸುತ್ತಿನಲ್ಲಿ ಗಳಿಕೆ ಮಾಡುವಿರಿ, (ತಿಜಟಿ ಥಿಠಣ ಟಠಜ ಠಟಿ ಣಜ ತಿಟಿರ, ಥಿಠಣ ರಚಿಟಿ ಠಟಿ ಣಜ ಡಿಠಣಟಿಜ ಚಿಛಠಣಣ) ಯಾರು ಈ ತತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅವರು ಆಗಾಗ್ಗೆ ಸಮಸ್ಯೆಯಲ್ಲಿ ಬೀಳುತ್ತಾರೆ ಮತ್ತು ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾರೆ. 
ಯಾರಾದರೂ ನಿಮ್ಮ ಮೇಲೆ, ಮೇಲಿಂದ ಮೇಲೆ ತಪ್ಪನ್ನೇ ಮಾಡುತ್ತಿದ್ದರೆ, ನೀವು ಸಹಾ ಪ್ರತಿಬಾರಿಯು ಆತನ ತಪ್ಪನ್ನು ತಿದ್ದಿರಿ, ಇದು ಮಾಡಲು ಸುಲಭವಾದ ಕಾರ್ಯವಲ್ಲ, ಆದರೂ ಬುದ್ಧರ ಆಧರ್ಶದಂತೆ ನಿಮ್ಮ ಅತ್ಯುನ್ನತ ಪರಿಶ್ರಮವನ್ನು ನೀವು ಮಾಡಲೇ ಬೇಕಾಗಿದೆ. ಆಗ ನಿಮಗೆ ಇದು ಅಸಾಧ್ಯ ಎನಿಸುವುದಿಲ್ಲ. ಇದರ ಬಗ್ಗೆ ಬುದ್ಧರ ಮನೋಭಾವ ಹೀಗೆ ಸಂಕ್ಷೇಪಿಸಲಾಗಿದೆ ಹೆಚ್ಚು ಕೆಟ್ಟದ್ದನ್ನು ನನ್ನ ಮೇಲೆ ಮಾಡಿದಷ್ಟೂ ಹೆಚ್ಚು ಹೆಚ್ಚು ಒಳ್ಳೆಯತನವು ನನ್ನಿಂದ ಪ್ರಸರಿಸುತ್ತದೆ.
ಹಲವು ಜನರ ಪ್ರಕಾರ ಕೆಟ್ಟದ್ದರ ಬದಲು ಒಳ್ಳೆಯದನ್ನು ಹಿಂತಿರುಗಿಸುವುದು ಅಷ್ಟೊಂದು ಪ್ರಯೋಗಾತ್ಮಕವಲ್ಲ. ಆದರೆ ಪ್ರಯತ್ನಿಸಿ, ನಂತರ ನೋಡಿ. ನಿಮಗೆ ಕೆಟ್ಟದ್ದರ ಬದಲು ಒಳ್ಳೆಯದನ್ನು ಮಾಡಲು ಅತಿಕಷ್ಟಕರವೆನಿಸಿದರೆ, ನೀವು ನಿಮ್ಮ ಒಳತಿಗಾಗಿ ಮತ್ತು ಪರರ ಒಳಿತಿಗಾಗಿ ಇನ್ನೂ ಬಹಳ ಶ್ರಮಪಡಲೇಬೇಕಾಗಿದೆ. ಆದರೆ ಕೊನೇಪಕ್ಷ ಕೆಟ್ಟವರ ಬದಲಿಗೆ ಕೆಟ್ಟದ್ದು ಮಾಡದಿದ್ದರೆ ಅಷ್ಟೇ ಸಾಕಾಗಿದೆ. 
ತಪ್ಪು ಮಾಡುವ ಅಲ್ಪ ಅರಿವುಳ್ಳವರ ಬಗ್ಗೆ ಸಹಾನುಭೂತಿಯ ಪರಿಶೀಲನೆ ಅಗತ್ಯವಾಗಿ ಬೇಕಾಗಿದೆ.






5.11 ನಿಮ್ಮ ಮಾನಸಿಕ ವ್ಯಥೆಯನ್ನು ಕಡಿಮೆ ಮಾಡುವುದು ಹೇಗೆ?
ಈ ಜಗತ್ತಿನಲ್ಲಿ ಯಾವುದೂ ಪೂರ್ಣವಾಗಿ ಕೆಟ್ಟದ್ದಲ್ಲ. ಹಾಗೆಯೇ ಪೂರ್ಣವಾಗಿ ಒಳ್ಳೆಯದಲ್ಲ. ಏಕೆಂದರೆ ಯಾವ ವಿಷಯಗಳು ಒಂದು ಗುಂಪಿಗೆ ಸ್ವಾಗತವೋ ಇಷ್ಟಪಡುತ್ತಾರೋ, ಅದೇ ವಿಷಯಗಳನ್ನು ಮತ್ತೊಂದು ಗುಂಪು ದ್ವೇಷಿಸುತ್ತದೆ. ಆದ್ದರಿಂದ ನಮ್ಮ ಅಗತ್ಯಗಳಿಗೆ ತಕ್ಕಂತೆ ನಾವು ಒಳ್ಳೆಯದನ್ನು ಅಥಾ ಕೆಟ್ಟದ್ದನ್ನು ನಿರೂಪಿಸುತ್ತೇವೆ. ವಿಷಯಗಳು ಸ್ವಾಭಾವಿಕವಾಗಿ ಒಳ್ಳೆಯದು ಆಗಿರುವುದಿಲ್ಲ ಅಥವಾ ಕೆಟ್ಟದ್ದೂ ಆಗಿರುವುದಿಲ್ಲ. ಬುದ್ಧ ಧಮ್ಮದ ಪ್ರಕಾರ ಜಗತ್ತು ಸಂಘರ್ಷದೊಂದಿಗೆ ಇರುತ್ತದೆ, ಅದರಲ್ಲಿ ನಾವೊಂದು ಭಾಗವಷ್ಟೇ ಆಗಿದ್ದೇವೆ. ನನ್ನನ್ನು ಒಪ್ಪಿಕೊಂಡ ಯಾವ ವ್ಯಕ್ತಿಯಿಂದಲೂ ಎಂದಿಗೂ ನಾನು ಜೀವನದಲ್ಲಿ ಏನೂ ಕಲಿತಿಲ್ಲ (ಡುಡ್ಲೇ ಪೀಲ್ಡ್ ಮಲೊನೆ).
ನಾವು ಇರುವಿಕೆಯ ತೀವ್ರ ಸ್ವಾರ್ಥಲಾಲಸೆ ಮತ್ತು ಇಂದ್ರೀಯ ಬಯಕೆಗಳನ್ನು ಹೊಂದಿದ್ದರೆ ನಾವು ಜಗತ್ತಿನ ಬಗ್ಗೆ ಇಟ್ಟಿರುವ ಮಿಥ್ಯಾದೃಷ್ಟಿಗಳಿಗಾಗಿ ಬೆಲೆಯನ್ನು ತೆರಲೇಬೇಕಾಗಿದೆ. ಹಾರೈಕೆಯ ಯೋಚನೆ ಅಮರತ್ವದ ಬಯಕೆ, ನಾನು ಮತ್ತು ನನ್ನದು ಎಂಬ ಭಾವವೇಶಗಳಿಗೆ ಅಂಟಿರುವುದು. ಇವೆಲ್ಲಾ ಮನಸ್ಸನ್ನು ಮತ್ತು ಸಮಯ ಪ್ರಜ್ಞೆಯನ್ನು ನೇಯುತ್ತದೆ. ಪೂರೈಕೆಯಾಗದ ಆಸೆಗಳು ಈ ಬಗೆಯ ಬೆಳೆಯನ್ನು ನೀಡುತ್ತವೆ. ಅವೆಂದರೆ ಜಗಳಗಳು, ಸಂಘರ್ಷ, ಸಂಪರ್ಕತೆಯ ಸೋಲುಗಳು ಭಯ, ಚಿಂತೆ, ಏಕಾಂತತೆ ಮತ್ತು ಖಿನ್ನತೆ. ಇಲ್ಲಿ ಮುಕ್ತ ಸವಾರಿ ಎಂಬುದೇ ಇಲ್ಲ. 
ನಿಮ್ಮಲ್ಲಿನ ಮಾನಸಿಕ ವ್ಯಥೆಗಳನ್ನು ನಿಮರ್ೂಲ ಮಾಡಬೇಕೆಂದು ನೀವು ಇಚ್ಛಿಸಿದರೆ, ನಿಮ್ಮ ಸ್ವಾರ್ಥಯುತ ಲಾಲಸೆಗಳನ್ನು ಧಮಿಸಲೇಬೇಕು. ಜೀವನದ ಪಥವು ಯಾವುದಕ್ಕೆ ಅವಲಂಬಿತವಾಗಿದೆ ಎಂದರೆ ನೀವು ಯೋಗ್ಯಪಥವನ್ನು ತೆಗೆದುಕೊಂಡಿರುವಿರಾ ಮತ್ತು ನೀವು ಪರಮಾಥರ್ಿಕವಾಗಿ ವಿಕಸಿಸಬೇಕಾದರೆ, ಪ್ರಾಪಂಚಿಕ ಜೀವನದ ಒತ್ತಡಗಳನ್ನೆಲ್ಲಾ ನೀವು ಸುತ್ತಿಸದಿರಿ. ಹಾಗೇ ಮಾಡಲು ಸಾಧ್ಯವಾಗದಿದ್ದರೆ ನೀವು ಮಾಡುವುದೇನೆಂದರೆ ಇಂದ್ರೀಯ ಸುಖಗಳಲ್ಲಿ ಆನಂದಿಸುವುದು ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುವುದು.
ನಿಮ್ಮ ಮಾನಸಿಕ ವ್ಯಥೆಯು ಕ್ಷೀಣಿಸುವಿಕೆಗೆ ಇನ್ನೊಂದು ದಾರಿಯಿದೆ. ಅದೆಂದರೆ ನಿಮ್ಮ ದುಃಖಗಳ ಮತ್ತು ಕಷ್ಟಗಳ ಅಳತೆ ಮಾಡುವುದು ಮತ್ತು ಅದನ್ನು ಪರರ ದುಃಖಗಳ ಮತ್ತು ಕಷ್ಟಗಳ ಜೊತೆಗೆ ಹೋಲಿಕೆ ಮಾಡುವುದು. ಯಾವಾಗ ನೀವು ದುಃಖಿತರಾಗುವಿರೋ ಆಗ ನೀವು ಯೋಚಿಸುವುದು ಏನೆಂದರೆ ಇಡೀ ವಿಶ್ವವೇ ನಿಮಗೆ ಎದುರಾಳಿಯಂತೆ ವತರ್ಿಸುತ್ತಿದೆ ಮತ್ತು ನಿಮ್ಮ ಹೊರತು ಪ್ರತಿಯೊಂದು ತಪ್ಪಾಗಿದೆ ಎಂದು ಭಾವಿಸುವಿರಿ. ಹೇಗೆ ಇರಲಿ ನೀವು ನಿಮ್ಮ ಸುತ್ತಲಿನ ವಸ್ತುಗಳನ್ನು ಗಮನಿಸುತ್ತಾ ನಿಮಗಿರುವ ಧನ್ಯತೆಗಳನ್ನು (ಧನಾತ್ಮಕತೆಗಳನ್ನು) ಲೆಕ್ಕಹಾಕಿ ಆಶ್ಚರ್ಯಕರವಾಗಿ ನೀವು ಇತರರಿಗಿಂತ ಅದೆಷ್ಟು ಪಟ್ಟು ಉತ್ತಮವಾಗಿರುವಿರಿ ಎಂದು ನಿಮಗೆ ಅರಿವಾಗುತ್ತದೆ.
ನೀವು ನಿಮ್ಮ ಕಷ್ಟಗಳನ್ನು ಮತ್ತು ತೊಂದರೆಗಳನ್ನು ಅತಿಯಾಗಿ, ದೊಡ್ಡದಾಗಿ ಮಾಡಿಕೊಂಡು ವೀಕ್ಷಿಸುತ್ತಿದ್ದೀರಿ. ನಿಜ ಹೇಳಬೇಕೆಂದರೆ ಪರರ ಸ್ಥಿತಿಯು ನಿಜಕ್ಕೂ ಭಯಾನಕವಾಗಿದೆ. ಆದರೂ ಅದರ ಬಗ್ಗೆ ನೀವು ಅಷ್ಟಾಗಿ ಚಿಂತೆಪಡುತ್ತಿಲ್ಲ. ನೀವು ಸಮಸ್ಯೆಗಳಲ್ಲಿ ಸಿಕ್ಕಿರುವಾಗ, ಅವನ್ನು ಎದುರಿಸಿ ಪರಿಹರಿಸಲು ಯತ್ನಿಸಬೇಕೇ ಹೊರತು ಚಿಂತೆಪಡುತ್ತಾ ಮಾನಸಿಕ ಖಿನ್ನತೆಯನ್ನು ಹೆಚ್ಚಿಸಬೇಡಿ. ಸಮಸ್ಯೆಗಳ ಪರಿಹಾರದ ಬಗ್ಗೆ ಚೀನಾದ ಈ ಹೇಳಿಕೆ ಹೀಗಿದೆ:
ನಿಮಗೆ ದೊಡ್ಡ ಸಮಸ್ಯೆಯಿದ್ದರೆ, ಅದನ್ನು ಸಣ್ಣದಾಗಿಸಿ. ಸಣ್ಣ ಸಮಸ್ಯೆಯಿದ್ದರೆ, ಅದನ್ನು ಇಲ್ಲವಾಗಿಸಿ.
ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಇನ್ನೊಂದು ಹಾದಿಯಿದೆ. ಅದೇನೆಂದರೆ ನೀವು ಹಿಂದೆ ಸಹಾ ಇಂತಹುದೇ ಸಮಸ್ಯೆಯ ಮೂಲಕ ಹಾದುಹೋಗಿರುವಿರಿ ಮತ್ತು ಇದಕ್ಕಿಂತ ಕೆಟ್ಟ ಸನ್ನಿವೇಶದ ಮೂಲಕ ಹಾದು ಹೋಗಿರುವಿರಿ ಮತ್ತು ನಿಮ್ಮ ಸಹನೆಯಿಂದ ಪ್ರಥಮ ಪ್ರಯತ್ನದಿಂದ ದೃಢ ಪ್ರಯತ್ನದಿಂದ ತಡೆಯಲಾರದಂಥ ಕಷ್ಟಗಳೆಲ್ಲವನ್ನೂ ನೀವು ದಾಟಿದ್ದೀರಿ. ಹಾಗೆ ಮಾಡುವಾಗ ನಿಮಗೆ ಇದ್ದ ಸಮಸ್ಯೆಗಳಿಂದ ನೀವೂ ಮುಳುಗಿ ಹೋಗಲಿಲ್ಲ. ಬದಲಾಗಿ ನೀವು ಜೀವನವನ್ನು ಹೊಸ ದೃಷ್ಟಿಕೋನದೊಂದಿಗೆ ನೋಡಿದಿರಿ ಮತ್ತು ಹಾಗೆಯೇ ಈಗಲೂ ವತರ್ಿಸಿದರೆ ನಿಮಗೆ ಎದುರಾಗುವ ಎಂಥಹುದೇ ಸಮಸ್ಯೆಯಾಗಿರಲಿ ನೀವು ಅದನ್ನೆಲ್ಲಾ ಎದುರಿಸುವಿರಿ.
ನೀವು ಇದಕ್ಕಿಂತ ನಿಕೃಷ್ಟ ಸನ್ನಿವೇಶಗಳನ್ನೂ ದಾಟಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಂಡು ನೀವು ಅವನ್ನೆಲ್ಲಾ ನೇರವಾಗಿ ಎದುರಿಸಲು ಸಿದ್ಧರಾಗಿ. ಏನೇಬರಲಿ, ಎದುರಿಸಲು ಸಿದ್ಧರಾಗಿ, ಈ ರೀತಿಯ ಮನಸ್ಸಿನಿಂದ ಸಿದ್ಧರಾಗಿ. ಆಗ ನೀವು ಮರಳಿ ಶ್ರದ್ಧೆಯನ್ನು ತಾಳುತ್ತಿರಿ ಎಂತಹುದೇ ಸಮಸ್ಯೆಯಿರಲಿ ಅದನ್ನೆಲ್ಲಾ ಪರಿಹರಿಸುತ್ತೀರಿ. 
ನೀವು ಸಮಸ್ಯೆಗಳನ್ನು ಎದುರಿಸುವಾಗ ಹೀಗೆ ಚಿಂತಿಸಿ, ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ಹಾಗಿರುವಾಗ ಚಿಂತೆ ಏಕೆ? ಒಂದುವೇಳೆ ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಆಗಲೂ ಚಿಂತೆಯೇಕೆ? ಏಕೆಂದರೆ ಚಿಂತೆ ಪಡುವುದರಿಂದಾಗಿ ನಿಮ್ಮ ಸಮಸ್ಯೆಯೇನು ಪರಿಹಾರವಾಗುವುದೇ? ನಿಮ್ಮ ಚಿಂತೆಯಿಂದ ಸಮಸ್ಯೆಯು ಪರಿಹಾರವಾದಂತೆ ಆಗುವುದಿಲ್ಲ!
ಆಧುನಿಕ ಯುಗದಲ್ಲಿ ನಾವು ಎಲ್ಲಾ ಬಗೆಯ ಅಪಾಯದ ಎಚ್ಚರಿಕೆ ನೀಡುವ ಮಾನಸಿಕ ಕಾಯಿಲೆಗಳನ್ನು ಮತ್ತು ತೊಂದರೆಗಳನ್ನು ಕಾಣುತ್ತಿದ್ದೇವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಹೆಚ್ಚಾಗಿ ಮಾನಸಿಕ ಕಾಯಿಲೆಯ ರೋಗಿಗಳನ್ನೇ ಕಾಣುತ್ತಿದ್ದೇವೆ. 
ಹಾಗೆಯೇ ಮಾನಸಿಕ ಕಾಯಿಲೆಯಂತೆಯೇ ಸಮಾಜದಲ್ಲಿ ಅಪರಾಧದ ಧಾತುವು ಕಾಣಸಿಗುತ್ತದೆ. ಸಿಗ್ಮಂಡ್ ಪ್ರಾಡ್ಸ್ನ ಸಂಶೋಧನೆಯ ಪ್ರಕಾರ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಮಾಡಿಸಬೇಕೆ ಹೊರತು ಶಿಕ್ಷೆಯನ್ನು ನೀಡುವುದಲ್ಲ. ಇದು ನಿಜಕ್ಕೂ ಸಕಾರಾತ್ಮಕ ಮತ್ತು ಪರಿಣಾಮಕಾರಿ ಚಿಂತನೆಯಾಗಿದೆ. ಇದು ಸಮಸ್ಯೆಯ ಪರಿಹಾರದ ಬಗ್ಗೆ ವಿಮೋಚನೆಯ ದೃಷ್ಟಿಕೋನವಾಗಿದೆ. ಈ ದೃಷ್ಟಿಕೋನವು ಪ್ರಗತಿಗಾಮಿ ಸಾಮಾಜಿಕ ಸುಧಾರಣೆಗೆ ತಳಹದಿಯಾಗಿದೆ. ಅಂದರೆ ಶಿಕ್ಷೆಯ ಬದಲಾಗಿ ಯೋಗ್ಯಸ್ಥಿತಿಗೆ ಮರಳಿಸುವುದು.
ಯಾವಾಗ ನಾವು ಬೇರೆ ಜನರು ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ಅರಿಯದೆ ಹೋದರೆ ನಾವು ಜೀವನದ ವಿವಿಧ ಹಾದಿಗಳನ್ನು ಕಲಿಯಲಾಗುವುದಿಲ್ಲ. ಜನರೊಂದಿಗೆ ವೈಯುಕ್ತಿಕ ಪ್ರತಿಭಟನೆಯು ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿರುತ್ತದೆ. ಇದನ್ನೆಲ್ಲ ಅರಿತಾಗ ನಾವು ಇನ್ನಷ್ಟು ಸಹಾನುಭೂತಿಯನ್ನು ಅನುಭವಿಸುತ್ತೇವೆ. ಸಹಮಾನವನ ಅಗತ್ಯತೆ ಮತ್ತು ಚಿಂತನೆ ಮಾಡುವ ವಿಧಾನದ ಬಗ್ಗೆ ಅಸಹನೆಯು ಅಜ್ಞಾನದಿಂದಲೇ ಉಂಟಾಗುತ್ತದೆ. 






5.12 ನಿಮ್ಮನ್ನೇ ಬದಲಾಯಿಸಿ
ಜಗತ್ತನ್ನು ಬದಲಾಯಿಸುವುದರಿಂದ ನೀವೇನು ಸಾಧಿಸುವಿರಿ? ನೀವು ಪರಿಪೂರ್ಣತೆ ಯನ್ನು ಸಾಧಿಸುವಿರಾ? ನೀವು ಕೇವಲ ಒಣಹೆಮ್ಮೆಯನ್ನು ಪೋಷಿಸುತ್ತಿರುವಿರಿ. ನಿಮ್ಮ ಅಹಂಕಾರಕ್ಕೆ ಬೇಕಾದ ಆಹಾರವನ್ನು ಪೂರೈಸುತ್ತಿರುವಿರಿ. ನೀವು ಜೀವನದ ಚಕ್ರಕ್ಕೆ ಬಂಧಿಯಾಗಿರುವಿರಿ. ಆದರೆ ನಿಮ್ಮನ್ನೇ ಬದಲಾಯಿಸಿದಾಗ, ನಿಮ್ಮ ಸ್ವಯಂವನ್ನೇ ಅರ್ಥಮಾಡಿಕೊಂಡಾಗ ಅದಕ್ಕಾಗಿ ಸ್ವ-ಶಿಸ್ತಿನ, ಸ್ವ-ಪ್ರಯತ್ನದಿಂದಾಗಿ ನೀವು ಪೂರ್ಣತೆಯನ್ನು ಹೊಂದುವಿರಿ.
ಅಂತಹ ಪರಿಪೂರ್ಣತೆಯನ್ನು ನೀವು ಸಾಧಿಸಿದಾಗ ಜೀವನವು ಅರ್ಥಪೂರ್ಣ ವಾಗುತ್ತದೆ. ಆಗ ಮಾತ್ರ ನೀವು ಪರರಿಗೆ ಮಹಾನ್ ಸೇವೆ ಮಾಡುವಂತಾಗುತ್ತದೆ. ಆಗ ಜನರು ಸಹಾ ನಿಮ್ಮ ಆದರ್ಶದೊಂದಿಗೆ ಸ್ಫೂತರ್ಿ ತಾಳುತ್ತಾರೆ. ಆಗ ಜೀವನದಲ್ಲಿ ಪರರು ನಿಮ್ಮನ್ನು ಹಿಂಬಾಲಿಸಿ ಅಂಥಹುದೇ ಗುರಿಯನ್ನು ಪ್ರಾಪ್ತಿಮಾಡುತ್ತಾರೆ. ಇದಕ್ಕಾಗಿಯೇ ಒಬ್ಬರೇ ಮಹಾನ್ ಪುರುಷರಾದ ಸಿದ್ಧಾರ್ಥರು ಬುದ್ಧರಾಗಲು ತಮ್ಮ ಸಾಮ್ರಾಜ್ಯವನ್ನೇ ತೊರೆದು ಭಿಕ್ಷುವಾದರು. ರಾಜನಾಗುವುದರಿಂದಾಗಿ ಕೇವಲ ಸ್ವ-ಹಿತಾಸಕ್ತಿಯನ್ನು ಹೆಚ್ಚಾಗಿ ಅನುಭವಿಸಬಹುದು. ಆದರೆ ಸ್ವ-ಪ್ರಯತ್ನದಿಂದಾಗಿ ಪರಿವರ್ತನೆಯಾದರೆ ಆತನು ಜಗತ್ತನ್ನು ರಕ್ಷಿಸಲು ಸಮರ್ಥನಾಗುತ್ತಾನೆ. ಮಾನವ ಇಂದು ಏನಾಗಿರುವನೋ ಅವೆಲ್ಲಾ ಮಿಲಿಯನ್ ಗಟ್ಟಲೆ ಹಿಂದಿನ ಯೋಜನೆಗಳ ಮತ್ತು ಕೃತಿಗಳ ಪರಿಣಾಮವಾಗಿದ್ದಾನೆ. ಆತನು ತಕ್ಷಣ ಬದಲಾಗಲು ಸಿದ್ಧ ವಸ್ತುವೇನಲ್ಲ. ಆತನ ಚಾರಿತ್ರವು ದೃಢವಾಗುವುದು ಆತನ ಸ್ವಯಂ ಚಿಂತನೆಯಿಂದಲೇ ಎಂಬುದನ್ನು ನೆನಪಿಡಿ. ಮಾನವ ಸ್ವಭಾವದಿಂದಲೇ ಪರಿಪೂರ್ಣನಲ್ಲ; ಅಭ್ಯಸಿಸಿ ಸಾಧಿಸಬೇಕಾಗುತ್ತದೆ. 
ಜೀವನವು ಮಾನವರಿಗೆ ಮಾತ್ರವೇ ಇಲ್ಲ. ಜೊತೆಗೆ ಈ ಬ್ರಹ್ಮಾಂಡದಲ್ಲಿ ವಿವಿಧ ಜೀವನದ ನಮೂನೆಗಳು ಸಹಾ ಇರುತ್ತವೆ. (ಬೇರೆ ಬೇರೆ ಜೀವಿಗಳಿರುತ್ತವೆ). ಹಾಗಿರುವಾಗಲು ಮಾನವರು ಮಾತ್ರ ಶ್ರೇಷ್ಠ ಚಿಂತನಾಶಕ್ತಿ ಮತ್ತು ತರ್ಕಶಕ್ತಿ ಹೊಂದಿರುತ್ತಾರೆ. ಈ ವಿಧದಿಂದಾಗಿಯೇ ಅವರು ಪರ ಜೀವಿಗಳಿಗಿಂತ ಶ್ರೇಷ್ಠವಾಗಿರುತ್ತಾರೆ. ಈ ಒಂದು ಶ್ರೇಷ್ಠ ಗುಣದಿಂದಲೇ ಅವರು ತಮ್ಮ ಜೀವನವನ್ನು ಯೋಗ್ಯವಾಗಿ ಮಾಪರ್ಾಟಿಸಿ ದುಃಖಗಳಿಂದ ಮುಕ್ತರಾಗುತ್ತಾರೆ. ಅದರಿಂದಾಗಿ ಜೀವನದ ಉದ್ದೇಶವು ಕೇವಲ ದುಃಖದಿಂದ ವಿಮುಕ್ತರಾಗುವುದೇ ಆಗಿದೆ. ಮಾನವರು ಅದನ್ನು ತಮ್ಮ ಪ್ರಯತ್ನದಿಂದಲೇ ಸಾಧಿಸುತ್ತಾರೆ. ಆದರೆ ಜೀವನವನ್ನು ಯೋಗ್ಯವಾಗಿ ಬಳಸದಿದ್ದರೆ ಜೀವನವೇ ಸೋಲಾಗುವುದು. ಬುದ್ಧ ಭಗವಾನರು ಮಾನವರ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ, ಒತ್ತಿ ಹೇಳಿದ್ದಾರೆ. ಅವರು ಮಾನವನ ಬಗ್ಗೆ ತಮ್ಮ ಸ್ವ-ಸಂಪೂರ್ಣತೆಗಾಗಿ ಅಂತಹ ಅನ್ವೇಷಣೆಗಾಗಿ ಜೀವನದಿಂದ ಜೀವನಕ್ಕೆ ಪ್ರಯತ್ನಪಡುವ, ಸಂಘಷರ್ಿಸುವ ಅತ್ಯಂತ ಪರಿಪೂರ್ಣ ಚಿತ್ರಣವನ್ನು ನೀಡಿದ್ದಾರೆ.
ನಿಜಕ್ಕೂ ಜೀವನವು ಒಂದು ಅದ್ವಿತೀಯ ಅನುಭವವಾಗಿದೆ. ಅದನ್ನು ನಾವು ಯಾವುದಕ್ಕೂ ಹೋಲಿಸಲಾಗುವುದಿಲ್ಲ. ಅದರ ಮೌಲ್ಯವನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ ಮತ್ತು ಹಣದಿಂದಾಗಿ ಜೀವನವನ್ನು ಕೊಳ್ಳಲಾಗುವುದಿಲ್ಲ. ಆದರೂ ಹಲವರು ಈ ಅಮೂಲ್ಯ ಮುತ್ತಿನಿಂದೇನಾದರೂ ಮಾಡಲು ಸಾಧ್ಯವೆಂದು ಅರಿತಿದ್ದಾರೆ. ಜೀವನವೆಂದರೆ ಕೇವಲ ಭೌತಿಕ ಶರೀರವಲ್ಲ ಅಥವಾ ಇಂದ್ರೀಯಗಳೂ ಅಲ್ಲ. ಬದಲಾಗಿ ಚಿಂತನೆ ಮಾಡುವ ಮಾನವ ಮನಸ್ಸಾಗಿದೆ.






5.13 ಜೀವನದ ಅತ್ಯುತ್ತಮ ಬಳಕೆ ಮಾಡಿ
ಜೀವನದ ಬಗ್ಗೆ ಮಹತ್ವದ ಸಂಗತಿ ಏನೆಂದರೆ ನಾವು ಅದನ್ನು ಹೊಂದಿದ್ದೇವೆ ಮತ್ತು ಅದರಿಂದ ನಾವು ಅದರ ಅತ್ಯುತ್ತಮ ಬಳಕೆ ಮಾಡೋಣ. ಇದು ನಿಜಕ್ಕೂ ಜೀವನದ ಅತ್ಯುತ್ತಮ ಮೌಲ್ಯವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅವಕಾಶದ ಬಳಕೆ ಮಾಡಿಕೊಳ್ಳಬೇಕಾಗಿದೆ. ಬಹಳಷ್ಟು ಜನರು ತಮ್ಮ ಜೀವನದ ಹೆಚ್ಚಿನ ಕಾಲವನ್ನು ಚಿಂತೆಪಡುತ್ತ ಮತ್ತು ಇರುವುದಕ್ಕಾಗಿ ಹೋರಾಡುತ್ತಲೇ ಕಾಲಕಳೆಯುತ್ತಾರೆ. ಅವರು ಗುಲಾಮರಂತೆ ಕಾರ್ಯಮಾಡುತ್ತಾರೆ. ಅಪಾರ ಸಮಸ್ಯೆಗಳನ್ನು ಮತ್ತು ತಡೆಗಳನ್ನು ಎದುರಿಸುತ್ತಿದ್ದಾರೆ. 
ನಾವು ನಮ್ಮ ಹೆಚ್ಚಿನ ಶಕ್ತಿಯನ್ನು ಭಾವಾವೇಶದ ಯುದ್ಧರಂಗದಲ್ಲಿ ವಿನಿಯೋಗಿಸುತ್ತೇವೆ. ಇರುವುದಕ್ಕಾಗಿ ಹೋರಾಟ, ಕೀತರ್ಿಗಾಗಿ ಹೋರಾಟ, ಸುಖಕ್ಕಾಗಿ ಹೋರಾಟ, ಅಪಾಯದಿಂದ ಪಾರಾಗಲು ಹೋರಾಟ, ಸಾಂದಭರ್ಿಕವಾಗಿ ಕ್ಷಣಿಕ ತೃಪ್ತಿಯನ್ನು ಇದರಿಂದ ನಾವು ಪಡೆಯುತ್ತೇವೆ. ಆದರೆ ಪ್ರತಿಸುಖವು ದುಃಖದಿಂದಲೇ ಅಂತ್ಯವಾಗುತ್ತದೆ.
ಈ ಜಗತ್ತಿನೆಡೆಗೆ ನೋಡಿ ಮತ್ತು ಹೇಗೆ ಜನರು ಪರಸ್ಪರ ಕಾದಾಡುತ್ತಿದ್ದಾರೆ ನೋಡಿರಿ. ಬಾಂಬ್ಗಳನ್ನು ಹಾಕುವಿಕೆ, ಅಪಹರಣ ಮತ್ತು ಪರರಿಗೆ ಹಿಂಸೆ ಮಾಡುವಿಕೆ, ಇಡೀ ಜಗತ್ತೇ ಹುಚ್ಚರ ಮನೆಯಂತಾಗಿದೆ. ಜನರು ತಮ್ಮ ಉತ್ತಮ ಮಾನವ ಗುಣಗಳನ್ನು ಮರೆತುಹೋಗಿದ್ದಾರೆ ಮತ್ತು ವಂಚನೆಗೆ, ಕ್ರೂರತ್ವಕ್ಕೆ, ಮೋಸಕ್ಕೆ, ಡಕಾಯಿತಿಗೆ, ಕ್ರೋಧಕ್ಕೆ, ಅಸೂಯೆಗೆ, ಲೋಭಕ್ಕೆ ಮತ್ತು ಅಜ್ಞಾನಕ್ಕೆ ತಮ್ಮನ್ನು ಆಳ್ವಿಕೆ ಆಗುವಂತೆ ಬಿಟ್ಟಿದ್ದಾರೆ. ಇದರಿಂದಾಗಿ ಮಾನವನಿಗೆ ಉತ್ತಮ ಯೋಚನೆಗಳು ಬೆಳೆಸಲು ಸ್ಥಳವೇ ಇಲ್ಲದಂತೆ ಆಗಿದೆ. ಈ ರೀತಿಯಾಗಿ ಮಾನವ ನಿರಂತರವಾಗಿ ಗಳಿಕೆಗೆ ಹೋರಾಡುತ್ತಾ ಮತ್ತು ಅಪಾಯದಿಂದ ಪಾರಾಗಲೂ ಹೋರಾಡುತ್ತಿದ್ದರೆ ಇಂತಹ ರಣರಂಗದಲ್ಲಿ ಆತನಿಗೆ ಶಾಂತಿ, ಸುಖ ಮತ್ತು ಸಂತೃಪ್ತಿ ಹೇಗೆ ಸಿಗುತ್ತದೆ? ಮಾನವನ ಮೇಲೆ ಮಾನವನ ಅಮಾನವೀಯತೆಯು ಅಸಂಖ್ಯ ಜನರು ಶೋಕಿಸುವಂತೆ ಆಗಿದೆ.
ನೀವು ಸ್ಪಷ್ವವಾಗಿ ಜೀವನದ ಸ್ವರೂಪ ಮತ್ತು ಜಗತ್ತಿನ ಸ್ವರೂಪವನ್ನು ಅರ್ಥಮಾಡಿ ಕೊಂಡಿದ್ದೇ ಆಗಿದ್ದಲ್ಲಿ ವಿಮುಕ್ತಿಯ ಪೂರ್ಣ ಅಗತ್ಯವು ನಿಮಗೆ ತಿಳಿಯುತ್ತಿತ್ತು. ಆಗ ನೀವು ಈ ಪರಮಸುಖವನ್ನು ಪ್ರಾಪ್ತಿಮಾಡಲು ನಿಧಾನ ಮಾಡುತ್ತಿರಲಿಲ್ಲ. ಇಂದು ನೀವು ದುಃಖದಿಂದ ಪಾರಾಗಲು ಪ್ರಾಪಂಚಿಕ ವಿಧಾನವನ್ನು ಅನುಸರಿಸುತ್ತಿರುವಿರಿ. ಆದರೆ ಅದು ಕ್ಷಣಿಕವಾಗಿದೆ. ಆದರೆ ದುಃಖ ಮುಕ್ತರಾಗಲು ನೀವು ಜೀವನದಲ್ಲಿ ಪರಮಾರ್ಥದ ಪಥವನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಆಗ ನೀವು ನಿಜ ಶಾಂತಿಯನ್ನು ಪಡೆಯುತ್ತಿದ್ದಿರಿ.







5.14 ಯಾವಾಗ ನೀವು ನಿಮ್ಮನ್ನೇ ರಕ್ಷಿಸಿಕೊಳ್ಳುವಿರೋ ಆಗ ಪರರನ್ನು ಕಾಪಾಡುವಿರಿ
ಜನರು ವೈಯಕ್ತಿಕ ಹಂತದಲ್ಲಿ ತಮ್ಮನ್ನು ಗುಣಪಡಿಸಿಕೊಳ್ಳುವಲ್ಲಿ, ಮಿಥ್ಯಾದೃಷ್ಟಿಯಿಂದ ರಕ್ಷಿಸಿಕೊಳ್ಳುವಲ್ಲಿ ಮತ್ತು ಸಾರ್ವತ್ರಿಕ ಹುಟ್ಟಿನಿಂದ ಪಾರಾಗುವುದನ್ನು ಕಲಿಯಲೇಬೇಕಾಗಿದೆ. ನಂತರವೇ ಅವರು ಕುಟುಂಬದ, ಸಮಾಜದ, ವಿಶ್ವಮಟ್ಟದ ಶಾಂತಿ ಮತ್ತು ಸೌಹಾರ್ದತೆಗೆ ಪ್ರಯತ್ನಿಸಲಿ. ವೈಯಕ್ತಿಕ ಹಂತದಲ್ಲೇ ನಾವು ನಮ್ಮ ಮನಸ್ಸನ್ನು ಜಾಗರೂಕತೆಯಿಂದ ಗಮನಿಸಬೇಕಾಗಿದೆ. ಹೀಗೆ ನಮ್ಮನ್ನು ರಕ್ಷಿಸಿಕೊಂಡು ಪರರನ್ನು ಅದೇವೇಳೆ ಕಾಪಾಡಬೇಕಾಗಿದೆ. ಇದರ ಬಗ್ಗೆ ಬುದ್ಧ ಭಗವಾನರು ಧಮ್ಮಪದದಲ್ಲಿ ಹೀಗೆ ಹೇಳಿದ್ದಾರೆ.
ನಿಮ್ಮನ್ನು ನೀವು ಪ್ರಿಯರೆಂದು ಭಾವಿಸಿದಲ್ಲಿ ನಿಮ್ಮನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಳ್ಳಿ.
ಸ್ಮೃತಿಯನ್ನು ಅಭ್ಯಸಿಸುತ್ತ, ನಮ್ಮನ್ನು ಚೆನ್ನಾಗಿ ಕಾಯ್ದುಕೊಳ್ಳಲು ಭಗವಾನರು ಈ ಉಪಮೆಯನ್ನು ಹೀಗೆ ನೀಡಿದ್ದಾರೆ. ಒಮ್ಮೆ ಒಬ್ಬ ದೊಂಬರಾಟದವ ತನ್ನ ಶಿಷ್ಯನ ಸಹಿತ ಅಪಾಯದಿಂದ ಕೂಡಿದ ಪ್ರದರ್ಶನ ನೀಡುತ್ತಿದ್ದನು. ಸ್ವಲ್ಪ ಜಾಗರೂಕತೆ ತಪ್ಪಿದರೂ ಅವನಿಗೆ ಅಥವಾ ಅವನ ಶಿಷ್ಯನಿಗೆ ಅಪಾಯವಾಗುತ್ತಿತ್ತು. ಒಂದು ಪ್ರದರ್ಶನದಲ್ಲಿ ಆತನು ಶಿಷ್ಯನಿಗೆ ಹೀಗೆ ಹೇಳಿದನು. ಓಹ್ ಹುಡುಗನೇ, ಈಗ ನೀನು ಕಂಬವನ್ನು ಏರಿ ನನ್ನ ಹೆಗಲ ಮೇಲೆ ನಿಂತುಕೋ ಎಂದು. ಆಗ ಆ ಹುಡುಗ ಹಾಗೆ ಮಾಡಿದನು. ನಂತರ ಶಿಷ್ಯನಿಗೆ ಹೀಗೆ ಹೇಳಿದನು: ಈಗ ಹುಡುಗನೇ ನೀನು ನನ್ನನ್ನು ಕಾಪಾಡು ಮತ್ತು ನಾನು ನಿನ್ನನ್ನು ರಕ್ಷಿಸುವೆನು, ಹೀಗೆ ಇಬ್ಬರೂ ಪರಸ್ಪರ ನೋಡಿಕೊಂಡು ನಮ್ಮ ಪ್ರದರ್ಶನಗಳನ್ನು ಮಾಡೋಣ. ಹಣವನ್ನು ಸಂಪಾದಿಸಿ ನಂತರ ಕೆಳಗಿಳಿಯೋಣ. ಆದರೆ ಪ್ರಜ್ಞಾವಂತನಾಗಿದ್ದ ಆ ಯುವಶಿಷ್ಯನು ಸ್ವಲ್ಪ ಯೋಚಿಸಿ ಹೀಗೆ ಹೇಳಿದನು. ಬೇಡ ಗುರುಗಳೇ, ಹಾಗೆ ಮಾಡಬೇಡಿ. ನೀವು ಸ್ವಯಂ ನಿಮ್ಮನ್ನೇ ರಕ್ಷಿಸಿಕೊಳ್ಳಿ, ನಾನು ನನ್ನನ್ನು ಕಾಪಾಡಿಕೊಳ್ಳುವೆನು. ಹೀಗೆ ಸ್ವಯಂ ರಕ್ಷಿಸುತ್ತಾ, ಸ್ವಯಂ ಕಾಪಾಡಿಕೊಳ್ಳುತ್ತಾ, ಸ್ವಯಂ ಕಾವಲು ಕಾಯುತ್ತಾ, ನಮ್ಮ ನೈಪುಣ್ಯತೆ, ಕಲೆ ಪ್ರದಶರ್ಿಸೋಣ, ಹಣವನ್ನು ಸಂಪಾದಿಸೋಣ. ಸುರಕ್ಷಿತವಾಗಿ ಕೆಳಗೆ ಇಳಿಯೋಣ. ಇದೇ ಯೋಗ್ಯ ವಿಧಾನವಾಗಿದೆ.
ಬುದ್ಧರ ಪ್ರಕಾರವು ಮೇಲಿನ ಶಿಷ್ಯನ ಅಭಿಪ್ರಾಯದಂತೆ ನನ್ನನ್ನು ನಾನೇ ರಕ್ಷಿಸಿಕೊಳ್ಳುವೆ ಎಂಬುದು ಸೂಕ್ತವಾಗಿದೆ. ನಾವು ಹೀಗೆಯೇ ಸ್ಮೃತಿಯಿಂದ ಇದನ್ನು ಅಭ್ಯಸಿಸಬೇಕಾಗಿದೆ, ಹಾಗೆಯೇ ನಮ್ಮನ್ನು ಕಾಪಾಡಬೇಕಾಗಿದೆ. ಹೀಗೆ ಒಬ್ಬನು ತನ್ನನ್ನು ರಕ್ಷಿಸುತ್ತಾ, ಪರರನ್ನು ಕಾಪಾಡುತ್ತಾನೆ. ಹಾಗೆಯೇ ಪರರನ್ನು ಕಾಪಾಡುತ್ತಾ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಹೀಗೆ ನಿರಂತರ ಅಭ್ಯಾಸದಿಂದ ಸಾಧಿಸುತ್ತಾನೆ. ಆತನು ಸಹನೆಯನ್ನು, ಅಹಿಂಸೆಯನ್ನು, ಮೈತ್ರಿಯನ್ನು ಮತ್ತು ಅನುಕಂಪವನ್ನು ಅಭ್ಯಸಿಸುತ್ತಾನೆ. ಆದ್ದರಿಂದಾಗಿ ಈ ಸದ್ಗುಣಗಳನ್ನು ಅಭ್ಯಸಿಸುತ್ತ ಒಬ್ಬನು ಸ್ವರಕ್ಷಣೆಯನ್ನು ಪಡೆದು ಪರರನ್ನೂ ಕಾಪಾಡುತ್ತಾನೆ. ಆದರೆ ಇದನ್ನು ಯೋಗ್ಯ ಸ್ಮೃತಿಯಿಂದ ಬೆಳೆಸಬೇಕಾಗುತ್ತದೆ.
ಆದರೆ ತನ್ನ ಹಿತವನ್ನು ಕಾಪಾಡಿಕೊಳ್ಳುವುದನ್ನು ಅಹಂವಾದವೆಂದು ಅಥವಾ ಸ್ವಾರ್ಥವೆಂದು ತಪ್ಪಾಗಿ ಭಾವಿಸಬಾರದು. ತನ್ನ ಹಿತವನ್ನು ಕಾಪಾಡಿಕೊಳ್ಳುವುದು ಎಂದರೆ ಸ್ವಾರ್ಥವಲ್ಲ. ಅದು ಸ್ವ-ಹಿತ ಅಂದರೆ ಅದು ಲೋಭದಿಂದ ಪ್ರೇರೇಪಿತವಾದುದಲ್ಲ. (ಸ್ವ-ಹಿತದಿಂದ ಪರರಿಗೆ ಎಳ್ಳಷ್ಟೂ ಹಾನಿಯಿಲ್ಲ, ಆದರೆ ಸ್ವಾರ್ಥದಿಂದ ಪರರಿಗೆ ಅಪಾರ ನಷ್ಟವಾಗುತ್ತದೆ). ಲೋಭ ಪ್ರೇರಿತ ಕಾರ್ಯದಿಂದ, ಸ್ವಾರ್ಥದಿಂದ ಸ್ವಹಿತವಾಗುವುದಿಲ್ಲ. ಸೇವೆಗೆ ತನ್ನ ಸಮಪರ್ಿಸುವುದು ಎಂದರೆ ಶಿಸ್ತನ್ನು ಪಾಲಿಸುವುದು. ನೈತಿಕ ಮತ್ತು ಮಾನಸಿಕ ಸುಶಿಕ್ಷಣವಾಗಿದೆ. ಈ ಸದ್ಗುಣಗಳನ್ನು ಪಾಲಿಸುವಾಗ ಒಬ್ಬನು ಪರರಿಗೂ ಪರೋಕ್ಷವಾಗಿ ಉನ್ನತವಾದ ಸೇವೆ ಸಲ್ಲಿಸುತ್ತಿರುತ್ತಾನೆ. ಒಬ್ಬನು ನೈತಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗಿರುವಾಗ ಹೇಗೆ ತಾನೆ ಪರರಿಗೆ ನೈಜ್ಯ ಸೇವೆ ಮಾಡುವನು?
ಯಾವುದೇ ಪಾಪಮಾಡದೆ, ಕುಶಲ ಕಾರ್ಯಗಳನ್ನು ಮಾಡುತ್ತಾ, ದಾನ ಮಾಡುತ್ತಾ, ಚಿತ್ತವನ್ನು ಪರಿಶುದ್ಧಿಗೊಳಿಸುತ್ತ ನಾವು ನಮಗೂ ಮತ್ತು ಪರರಿಗೂ ಸೇವೆ ಸಲ್ಲಿಸುವೆವು. ಇದೇ ಬುದ್ಧರ ಬೋಧನೆಯ ಸಾರವಾಗಿದೆ. ಯಾವ ಪಾಪವನ್ನು ಮಾಡದೆ ಇರುವುದೆಂದರೆ, ಅಕುಶಲ ಮೂಲಗಳಾದ ಲೋಭ, ದ್ವೇಷ ಮತ್ತು ಮೋಹಗಳಿಂದ ಪ್ರೇರೇಪಿತರಾಗಿ ಕಾಯಾ ವಾಚಾ ಮತ್ತು ಮಾನಸಿಕವಾಗಿ ಯಾವುದೇ ಪಾಪವನ್ನು ಮಾಡಿದಿರುವುದೇ ಆಗಿದೆ. ಇನ್ನೊಂದೆಡೆ ನಾವು ಕರುಣೆ ಮತ್ತು ಪ್ರಜ್ಞಾದ ವಿಕಾಸಕ್ಕಾಗಿ ನಿರಂತರ ಯೋಗ್ಯ ಶ್ರಮಪಡುತ್ತಿರಬೇಕಾಗುತ್ತದೆ. ಇದೇ ಕುಶಲವನ್ನು ಆಚರಿಸುವುದರ ಅರ್ಥವಾಗಿದೆ. ನಮ್ಮ ಮನಸ್ಸಿನಲ್ಲಿರುವ ಅಕುಶಲ ಪಾಪದ ಯೋಚನೆಗಳನ್ನು, ಸ್ಥಿತಿಗಳನ್ನು ಕ್ಷೀಣಿಸಿ ಕೊನೆಗೆ ಪೂರ್ಣ ನಿಮರ್ೂಲ ಮಾಡುವುದೇ ಚಿತ್ತ ಪರಿಶುದ್ಧತೆ ಆಗಿದೆ. ಜೊತೆಗೆ ನಾವು ಮೈತ್ರಿಯ ಮತ್ತು ಕರುಣೆಯ ಉದಾತ್ತ ಮನೋಸ್ಥಿತಿಗಳನ್ನು ಯಾವುದೇ ಪಕ್ಷಪಾತಗಳಿಲ್ಲದೆ ಸರ್ವರಲ್ಲೂ ಪ್ರಸರಿಸಬೇಕಾಗುತ್ತದೆ. ನಾವು ಈ ರೀತಿ ಮೆತ್ತಾವನ್ನು ಸರ್ವಜೀವಿಗಳಲ್ಲಿ ಪ್ರಸರಿಸುತ್ತ ಅವರೆಲ್ಲರ ಸುಖ ಮತ್ತು ಕ್ಷೇಮ ಹೃತ್ಪೂರ್ವಕವಾಗಿ ಆಶಿಸಬೇಕಾಗಿದೆ. ಆ ಎಲ್ಲಾ ಜೀವಿಗಳೂ ಎಲ್ಲಾಬಗೆಯ ಹಿಂಸೆಯಿಂದ, ಅಪಾಯಗಳಿಂದ, ನೋವುಗಳಿಂದ ಮತ್ತು ದುಃಖಗಳೆಲ್ಲದರಿಂದ ಪಾರಾಗಲಿ, ಮುಕ್ತಿ ಹೊಂದಲಿ.

ನೀವು ಸಹಾ ಸುಖಿಯಾಗಿರಿ ಮತ್ತು ಕ್ಷೇಮವಾಗಿರಿ. 
ನಿಮ್ಮ ಮತ್ತು ಎಲ್ಲರ ಸಮಸ್ಯೆಗಳು ಅಂತ್ಯವಾಗಲಿ.

- ಂ - ಂ - ಂ  

No comments:

Post a Comment

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...