Friday, March 15, 2019

drksridhammananda ಮಾನವ ಮತ್ತು ಸಮಾಜ

                                         ಅಧ್ಯಾಯ - 4
                                 ಮಾನವ ಮತ್ತು ಸಮಾಜ

4.1 ಮಾನವನ ಅದ್ವಿತೀಯ ಸ್ಥಾನಮಾನ
ಹಿಂದಿನ ಪುಟವನ್ನು ಕೆಲವರು ಅದು ಮಾನವತೆಯ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ ಎಂದು ವಾದಿಸಬಹುದು. ಆತನನ್ನು ಕೆಳಸ್ಥಾನಕ್ಕೆ ತಂದಿದೆ ಎಂದು ವಾದಿಸಬಹುದು ಮತ್ತು ಆತನು ತತ್ವಶಾಸ್ತ್ರದಲ್ಲಿ, ಧರ್ಮದಲ್ಲಿ, ಮನಶಾಸ್ತ್ರದಲ್ಲಿ, ವಿಜ್ಞಾನದಲ್ಲಿ, ಕಲೆಯಲ್ಲಿ, ವಾಸ್ತುಶಿಲ್ಪದಲ್ಲಿ, ಸಾಹಿತ್ಯದಲ್ಲಿ ಮತ್ತು ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಮತ್ತಿತರ ವಿಭಾಗಗಳಲ್ಲಿ ಆತನು ಮಾಡಿರುವ ಸಾಧನೆ ಕಡಿಮೆಯೇನು ಎಂದು ಪ್ರಶ್ನಿಸಬಹುದು. ಅದಕ್ಕೆ ದೂರವೆಂಬಂತೆ ಈ ಬ್ರಹ್ಮಾಂಡ ಪ್ರಕರಣದಲ್ಲಿ ಮಾನವರು ತಮಗೆ ಅದ್ವಿತೀಯ ಸ್ಥಾನವಿದೆ ಎಂದು ಕಲ್ಪಿಸುತ್ತಾರೆ. ಏಕೆಂದರೆ ಅವರಿಗೆ ಅಪೂರ್ವವಾದ ವಿಶೇಷ ಸಾಮಥ್ರ್ಯವಿದೆ. ಅವರು ಬೇರೆ ಜೀವಿಗಳಿಗಿಂತ ಸುಲಭವಾಗಿ ಮುಕ್ತಿ ಪಡೆಯಬಹುದು. ಇದಕ್ಕೆ ಮೂರು ಕಾರಣಗಳಿವೆ.
ಮಾನವ ಜಗತ್ತು ಸುಖ ಮತ್ತು ದುಃಖಗಳ ಸಮತೋಲಿತ ಮಿಶ್ರಿತ ಲೋಕವಾಗಿದೆ. ಯಾವಾಗ ಸುಗತಿಯ ಲೋಕದ ಜೀವಿಗಳಂತೆ ಸುಖವು ತೀಷ್ಣವಾಗಿದ್ದರೆ ಅಥವಾ ದುರ್ಗತಿಯ ಜೀವಿಗಳ ತರಹ ದುಃಖವೇ ಅಪಾರವಾಗಿದ್ದರೆ ಒಬ್ಬನ ಮನಸ್ಸು ಪರಮಾರ್ಥದೆಡೆಗೆ ಬಾಗದು. ಬೌದ್ಧರು ದೇಹದಂಡನೆಯನ್ನು ಮತ್ತು ಅತಿಬೋಗವನ್ನು ಪ್ರಜ್ಞಾವಿಕಾಸಕ್ಕೆ ಸಹಕಾರಿಯಲ್ಲ ಎಂದು ಅವೆರಡನ್ನು ನಿರಾಕರಿಸುತ್ತಾರೆ. ಅತಿಬೋಗ ಮತ್ತು ಅತಿ ದೇಹದಂಡನೆಗೆ ಮೀರಿದ ಮಧ್ಯಮ ಮಾರ್ಗವು ಸಮರ್ಥನೀಯವಾಗಿದೆ ಮತ್ತು ಮಾನವನಿಗೆ ಮಾನವ ಲೋಕವು ಮಧ್ಯಮ ಮಾರ್ಗವನ್ನು ಕ್ರಮಿಸಲು ಅವಕಾಶವನ್ನು ನೀಡಿದೆ. ಎರಡನೆಯ ಕಾರಣವು ಏನೆಂದರೆ ಮಾನವನು ಅಲ್ಪಾಯು ಆಗಿದ್ದಾನೆ ಮತ್ತು ಹೀಗಾಗಿ ಸಾವಿನಕಾಲ ಅನಿಶ್ಚಿತತೆಯಿಂದ ಕೂಡಿದೆ.
ಸಾವನ್ನು ಅತಿ ಸನಿಹದಿಂದ, ಬೇಗನೆ ಬರುವುದನ್ನು ಕಂಡವರು ಧಮ್ಮದಕಡೆ ವಾಲುತ್ತಾರೆ ಮತ್ತು ಮೂರನೆಯ ಕಾರಣವೇನೆಂದರೆ ಬೇರೆ ಲೋಕಗಳಲ್ಲಿರುವ ಜೀವಿಗಳು ಕೇವಲ ತಮ್ಮ ಹಿಂದಿನ ಕರ್ಮಗಳ ಫಲವನ್ನು ಪಡೆದು ಅನುಭವಿಸುವುದರಲ್ಲೇ ಇರುತ್ತಾರೆ. ಆದರೆ ಮಾನವ ಮಾತ್ರ ನೂತನ ಕರ್ಮಗಳನ್ನು ಮಾಡುವ ಅವಕಾಶಗಳನ್ನು ಹೊಂದಿರುವ ಸುಸ್ಥಾನದಲ್ಲಿದ್ದಾನೆ. ಆದ್ದರಿಂದ ಹೀಗೆ ಆತನು ತನ್ನ ಅದೃಷ್ಟಕ್ಕೆ ಸುರೂಪ ರಚಿಸಲು ಸಮರ್ಥನಾಗಿದ್ದಾನೆ.
ಇವೆಲ್ಲವೂ ಮಾನವನಿಗೆ ಮಾನವ ಲೋಕದಲ್ಲಿಯೇ, ತನ್ನ ವಿಮುಕ್ತಿಗೆ ಶ್ರಮಿಸಲು ಹೊಣೆಗಾರಿಕೆ ನೀಡಿದ ಆತನು ತನಗೆ ತಾನೆ ಸೃಷ್ಟಿಕರ್ತ ಮತ್ತು ರಕ್ಷಕನಾಗಿದ್ದಾನೆ. ಬಹಳಷ್ಟು ಜನರು ಧರ್ಮವು ಸ್ವರ್ಗದಿಂದ ಬಂದಿದೆ ಎಂದು ಹೇಳುತ್ತಾರೆ. ಆದರೆ ಬೌದ್ಧರು ಅರಿತಿರುವುದು ಏನೆಂದರೆ ಬುದ್ಧಧಮ್ಮವು ಭೂಮಿಯಿಂದ ಆರಂಭವಾಗಿ ಸ್ವರ್ಗವನ್ನು ತಲುಪಿದೆ.
ಇದರಿಂದ ಗೊತ್ತಾಗುವುದು ಏನೆಂದರೆ ಪ್ರತಿಯೊಬ್ಬ ಮಾನವನಲ್ಲೂ ಬುದ್ಧ ಬೀಜವಿರುತ್ತದೆ. ಅಂದರೆ ಬುದ್ಧರ ಪ್ರಚನ್ನತೆ ಅಥವಾ ಪರಿಪೂರ್ಣತೆಯ ಪ್ರಚನ್ನತೆಯಿರುತ್ತದೆ. ಅದನ್ನು ಆತನು ಯಾವುದೇ ಬಾಹ್ಯ ಸಹಾಯವಿಲ್ಲದೆ ಬೆಳವಣಿಗೆಗೊಳಿಸಬೇಕಾಗುತ್ತದೆ. ಆದರೆ ಬುದ್ಧರಾಗಲು ಮಾನವರಾಗಿಯೇ ಹುಟ್ಟಬೇಕಾಗುತ್ತದೆ. ಏಕೆಂದರೆ ಇಲ್ಲಿ ಮಾತ್ರ ಆತನು ಪೂರ್ಣವಾಗಿ ಅಸ್ತಿತ್ವನ್ನು ಅನುಭವಿಸುತ್ತಾನೆ. ಮಾನವನ ಕುರಿತ ವಿಪರ್ಯಾಸದ ದೃಷ್ಟಿಕೋನದ ಬಗ್ಗೆ ಷೇಕ್ಸ್ಪಿಯರ್ನ ಈ ನಿಲುವನ್ನು ಬೌದ್ಧರು ಖಂಡಿತವಾಗಿ ಒಪ್ಪುತ್ತಾರೆ.
ಮಾನವ ಎಂತಹ ಕಲಾಕೃತಿಯ ಮಾದರಿ, ಆತನ ಬುದ್ಧಿಮತ್ತೆಯು ಅದೆಷ್ಟು ಉದಾತ್ತ, ಆಕಾರದಲ್ಲಿ ಹಾಗು ಚಲನೆಯಲ್ಲಿಯೂ ಆತನ ಅಂಗಾಂಗಗಳು ಅದೆಷ್ಟು ಅನಂತ, ಆತನ ವ್ಯಕ್ತತೆಯು ಹಾಗು ಕ್ರಿಯೆಯು ಶ್ಲಾಘನೀಯವಾದುದು. ಗ್ರಹಣಾಶಕ್ತಿಯಲ್ಲಿ ಆತನು ದೇವತೆಯೇ ಸರಿ. ಜಗತ್ತಿನ ಸುಂದರತೆಯಲ್ಲಿ ಆತನು ದೇವರೇ ಆಗಿದ್ದಾನೆ. ಪ್ರಾಣಿಗಳಲ್ಲಿ ಆದರ್ಶ ಶಿರೋಮಣಿಯಾಗಿರುವನು; ಆದರೂ ನನಗೆ ಏನಿದು ಧೂಳಿನ ಶುದ್ಧಸಾರತತ್ವವೇ?
- ಹಾಮ್ಲೆಟ್
ಬಹಳಷ್ಟು ವಿಷಯಗಳಲ್ಲಿ ಮಾನವನು ಅಜ್ಞಾನಿಯೇ, ಆದರೂ ಜೀವಿಗಳಲ್ಲೆಲ್ಲಾ ಉನ್ನತನಾಗುವ ಪ್ರಚನ್ನತೆಯು (ಸಮ್ಮಾಸಂಬುದ್ಧ) ಆತನಲ್ಲಿದೆ. ಕೆಲವರು ಮಾನವ ಜೀವಿತವನ್ನು ಸ್ವರ್ಗ ಮತ್ತು ನರಕಗಳ ನಡುವಿದೆ ಎನ್ನುತ್ತಾರೆ. ಏಕೆಂದರೆ ಮಾನವನ ಮನಸ್ಸನ್ನು ಸುಲಭವಾಗಿ ಸ್ವರ್ಗದ ಆನಂದ ಅನುಭೂತಿ ತಿಳಿಯುವಂತೆ ವೃದ್ಧಿಗೊಳಿಸಬಹುದು. ಹಾಗೆಯೇ ಹಾದಿ ತಪ್ಪಿದರೆ ನಕರದಂತಹ ದುಃಖವನ್ನು ಸಹಾ ಇಲ್ಲೇ ಆತನು ಕಾಣಬಹುದು. ಮಾನವತೆಗೆ ಸಂಬಂಧಪಟ್ಟಂತೆ ಇದ್ದರೆ ಅ ಮಾನವನು ಮಾನವನೇ, ಇಲ್ಲದೆ ಹೋದರೆ ಮಾನವತೆಯ ದ್ವೇಷಿಯಾಗುತ್ತಾನೆ.
ಅಹಂಕಾರಿಗೆ ಸ್ವರ್ಗವಿಲ್ಲ, ಅಸೂಯೆಪರನಿಗೆ ನೆರೆಹೊರೆಯವರು ಇಲ್ಲ, ಕೋಪಿಷ್ಟನು ತನಗೆ ತಾನೇ ಇಲ್ಲ. ಚೀನಾ ತತ್ವಶಾಸ್ತ್ರ.
ತಾನೇ ಒಂಟಿಯಾಗಿರುವುದು ಅಸಹಾಯತನ, ಆದ್ದರಿಂದ ಸಾಮಾಜಿಕ ಜೀವನವು ಮಾನವನಿಗೆ ಸಹಕಾರದ ಶಕ್ತಿಯನ್ನು ನೀಡಿದೆ, ಸಮಾಜವಿಲ್ಲದೆ ಮಾನವ, ಮಾನವನೆ ಅಲ್ಲ. ಮಾನವ ಪ್ರಕೃತಿಯೊಡನೆ ಒಂದು (ಗ್ರೀಕ್ ತತ್ವಜ್ಞಾನಿ).
ಬುದ್ಧರ ಬೋಧನೆಯಲ್ಲಿ ಕಾಣಿಸುವುದು ಏನೆಂದರೆ ಐದು ಇಂದ್ರೀಯಗಳ ವಿಷಯಗಳು ಪ್ರಭಾವಶಾಲಿಯಾಗಿದ್ದರೆ, ಇಷ್ಟಕರವಾಗಿದ್ದಕ್ಕೆ ಸಂತೈಸುವಂತಿದ್ದರೆ ಆತನು ಸ್ವಗರ್ಿಯ ಸುಖ ಅನುಭವಿಸಿದಂತೆ, ಹಾಗಲ್ಲದೆ ವಿಷಯಗಳು ಕಿರುಕುಳಕಾರಿಯಾಗಿದ್ದರೆ, ತೊಂದರೆಯನ್ನು ಕ್ಷೊಭೆಯನ್ನುಂಟು ಮಾಡುವವಾಗಿದ್ದರೆ ಆ ದುಃಖವು ನರಕದಂತೆಯೇ ಸರಿ.






4.2 ಪರರೊಂದಿಗೆ ಸೌಹಾರ್ದತೆಯಿಂದ ಜೀವಿಸುವಿಕೆ
ಸುಖಯುತ ಜೀವನಕ್ಕಾಗಿ ಪ್ರಧಾನವಾದ ಸೂತ್ರವೇನೆಂದರೆ ಪರರೊಂದಿಗೆ ಸೌಹಾರ್ದತೆಯಿಂದ ಜೀವಿಸುವ ಸಾಮಥ್ರ್ಯವೇ ಆಗಿದೆ. ಇದನ್ನು ಸಾಧಿಸಲು ನಾವು ಅರ್ಥಮಾಡಿಕೊಳ್ಳುವುದೇನೆಂದರೆ ಇದೇ ಗುರಿ ಸಾಧಿಸಲು ಜನರು ಹಲವಾರು ದಾರಿಗಳನ್ನು ಬಳಸುತ್ತಾರೆ. ಆದ್ದರಿಂದ ಬೇರೆ ಜನರಲ್ಲಿ ವಿವಿಧ ಅಭಿಪ್ರಾಯಗಳಿದ್ದರೂ ವಿಭಿನ್ನ ಸಂಪ್ರದಾಯಗಳಿದ್ದರೂ ಸಹ ನಾವು ಅನುಚಿತವಾಗಿ ತಲೆಕೆಡಿಸಿಕೊಳ್ಳಬಾರದು.
ನಾವು ಸದಾ ಪರಿವರ್ತನಾಶೀಲ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆದ್ದರಿಂದಾಗಿ ನಾವು ಕುರುಡುತನದಿಂದಾಗಿ ಸಂಪ್ರದಾಯಗಳಿಗೆ, ರೂಢಿಗಳಿಗೆ, ವರ್ತನೆಗಳಿಗೆ, ವಿಧಿ ಸಂಸ್ಕಾರ ಇತ್ಯಾದಿಗಳಿಗೆ ನಾವು ಅಂಟಬಾರದು. ಅವೆಲ್ಲ ಆ ಕಾಲದಲ್ಲಿ ನಮ್ಮ ಪೂರ್ವಜರು ಅವರ ಅರಿವಿನ ಸಾಮಥ್ರ್ಯದಂತೆ ಪಾಲಿಸಿಕೊಂಡು ಬಂದಿದ್ದಾರೆ. ಕೆಲವು ರೂಢಿ ಮತ್ತು ಸಂಪ್ರದಾಯಗಳು ಒಳ್ಳೆಯದಾಗಿವೆ. ಅಥವಾ ಅವುಗಳಿಂದ ಯಾವುದೇ ಹಾನಿಯಿಲ್ಲ. ಹಾಗೆಯೇ ಇನ್ನೂ ಕೆಲವು ಕಡಿಮೆ ಉಪಯುಕ್ತವಾಗಿದೆ. ನಾವು ತೆರೆದ ಮನಸ್ಸಿನಿಂದಾಗಿ ಆ ವಿಧಿ ಸಂಸ್ಕಾರಗಳಲ್ಲಿ ಹಿತಸುಖವಿದ್ದರೆ ಮತ್ತು ಆಧುನಿಕ ಜಗತ್ತಿಗೂ ಹೊಂದುವಂತಿದ್ದರೆ, ಯಾರಿಗೂ ಯಾವುದೇ ಹಾನಿಯಿಲ್ಲದಿದ್ದರೆ ಮುಂದುವರೆಸಬಹುದಾಗಿದೆ.
ಕೆಲವು ಹಿರಿಯರಿದ್ದಾರೆ ಅವರು ಆಧುನಿಕ ಭಾವನೆಗಳಿಗಾಗಲಿ ಅಥವಾ ಜೀವನ ಹಾದಿಗಳಿಗಾಗಲಿ ಸಹಿಸಲಾರರು. ಅವರು ಇಷ್ಟಪಡುವುದು ಏನೆಂದರೆ ಅದೇ ಪುರಾತನ ವಿಭಿನ್ನ ಸಂಪ್ರದಾಯಗಳನ್ನು ತಮ್ಮ ಮಕ್ಕಳು ಸಹಾ ಪಾಲಿಸಲೆಂದು ಆಶಿಸುತ್ತಾರೆ. ಅದಕ್ಕೆ ಬದಲಾಗಿ ಅಂತಹ ಕ್ರಿಯೆಗಳಲ್ಲಿ ಯಾವುದೇ ಹಾನಿಗಳಿಲ್ಲದಿದ್ದರೆ ತಮ್ಮ ಯುವ ಜನಾಂಗವನ್ನು ಹಾಗೆ ಮಾಡಲು ಅನುಮತಿಸಬೇಕು. ಹೇಗಾದರೂ ಯಾರು ತಮಗೆ ತಾವೇ ಸಹಾಯ ಮಾಡಿಕೊಳ್ಳಲಾರರೊ, ಅಂತಹವರಿಗೆ ಯಾವರೀತಿಯ ಪ್ರಯತ್ನದಿಂದಲೂ ಉಪಯೋಗವಿಲ್ಲ. ಒಬ್ಬನು ಹತ್ತಲು ತಾನೇ ಇಷ್ಟಪಡದಿದ್ದರೆ, ನೀವು ಮೇಲಕ್ಕೆ ತಳ್ಳಿ ಆತನನ್ನು ಹತ್ತಿಸಲಾರಿರಿ (ಆಂಡ್ರೇ ಕಾನರ್ೆಗೀ).
ಹೃದಯದಲ್ಲಿ ಸತ್ಯತೆಯಿದ್ದರೆ, ಚಾರಿತ್ರ್ಯದಲ್ಲಿ ಸುಂದರತೆ ಇರುತ್ತದೆ. ಚಾರಿತ್ರ್ಯದಲ್ಲಿ ಸುಂದರತೆಯಿದ್ದರೆ, ಮನೆಯಲ್ಲಿ ಸೌಹಾರ್ದತೆಯಿರುತ್ತದೆ. ಮನೆಯಲ್ಲಿ ಸೌಹಾರ್ದತೆಯಿದ್ದರೆ ದೇಶದಲ್ಲಿ ವ್ಯವಸ್ಥತೆ ಇರುತ್ತದೆ. ದೇಶದಲ್ಲಿ ವ್ಯವಸ್ಥತೆ ಇದ್ದಾಗ ಜಗತ್ತಿನಲ್ಲಿ ಶಾಂತಿಯು ಇರುತ್ತದೆ.



4.3 ಭಿನ್ನತೆಯ ಹಕ್ಕಿಗಾಗಿ ಪರರಿಗೆ ಅನುಮತಿಸುವಿಕೆ
ನಾವಿಂದು ಜೀವಿಸುತ್ತಿರುವ ಜಗತ್ತಿನಲ್ಲಿ ಬಲಿಷ್ಟತೆಯೇ ಸತ್ಯಕ್ಕಿಂತ ಬಲಯುತವಾದುದು ಎಂಬುದು ಚಲಾವಣೆಯಲ್ಲಿದೆ. ಇಲ್ಲಿ ಬಲಿಷ್ಠನು ದುರ್ಬಲರಿಂದ ಲಾಭ ಪಡೆದುಕೊಳ್ಳುತ್ತಿದ್ದಾನೆ. ಶ್ರೀಮಂತನು ಬಡವನನ್ನು ಶೋಷಣೆ ಮಾಡುತ್ತಿದ್ದಾನೆ. ಈ ರೀತಿಯಾಗಿ ವತರ್ಿಸುವುದನ್ನು ನಾವು ತಡೆಯಬೇಕಾಗಿದೆ. ಯಾವುದೇ ದೃಷ್ಟಿಕೋನಗಳಿಗೆ ಒಪ್ಪದಿದ್ದರೆ ಕಡೆಪಕ್ಷ ಒಪ್ಪದಿರುವುದಕ್ಕೆ ಒಪ್ಪಬೇಕು. ನಾವು ನಮ್ಮ ದೃಷ್ಟಿಕೋನಗಳನ್ನು ಸಭ್ಯವಾಗಿ ಮತ್ತು ವಿನಮ್ರವಾಗಿ ವ್ಯಕ್ತಪಡಿಸಬೇಕು ಹೊರತು ಪರರ ಮೇಲೆ ಬಲಪ್ರಯೋಗದಿಂದ ನಮ್ಮ ದೃಷ್ಟಿಕೋನವನ್ನು ಹೊರಿಸಬಾರದು.
ಯಾರು ತಮ್ಮ ವಿರೋಧಿಗಳನ್ನು ಭೌತಿಕ ಬಲಪ್ರಯೋಗದಿಂದ ಗೆಲ್ಲುವುದರಿಂದಾಗಿ ಸ್ಪಷ್ಟವಾಗಿ ಸೂಚಿಸುವುದು ಏನೆಂದರೆ ಅವರು ವಿರೋಧಿಗಳು ಸಹ ಉದಾತ್ತ ಮಾನವರೇ ಎಂದು ಮರೆತುಹೋಗಿರುವುದು ಹಾಗು ಮನದಟ್ಟು ಮಾಡುವ ಸಾಮಥ್ರ್ಯ ಅವರಲ್ಲಿ ಇಲ್ಲದಿರುವುದು ಕಾಣಿಸುತ್ತದೆ. ಯಾರು ನಮ್ಮನ್ನು ಒಪ್ಪುವರೋ ಅವರಲ್ಲಿ ಹಿತವನ್ನು ಕಾಣುತ್ತೇವೆ. ಆದರೂ ಎಲ್ಲಿ ವಿಭಿನ್ನ ದೃಷ್ಟಿಕೋನಗಳ ಸನ್ನಿವೇಶಗಳಿರುವವೊ ಅಲ್ಲಿ ವೈಯುಕ್ತಿಕ ಬೆಳವಣಿಗೆ ವೃದ್ಧಿಯಾಗುತ್ತದೆ.
ಕೆಲವೊಮ್ಮೆ ಪರರಲ್ಲಿ ನಮ್ಮ ಅಭಿಪ್ರಾಯಗಳು ಅಥವಾ ಕ್ರಿಯೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ನಾವು ಕೇಳಲು ಇಚ್ಛಿಸಲಾರೆವು. ಆದರೂ ನಾವು ಅವುಗಳನ್ನು ಎಚ್ಚರದಿಂದ ಆಲಿಸಿದರೆ, ಅವರ ಅಭಿಪ್ರಾಯದಲ್ಲಿ ಸತ್ಯವಿರುವುದು ಕಂಡುಬರುತ್ತದೆ. ನಮ್ಮ ಜೀವನದ ಹಾದಿಯನ್ನು ಬದಲಿಸಲು ಸಿದ್ಧವಿದ್ದರೆ ಇದರಿಂದಾಗಿ ನಮ್ಮ ಸ್ವ-ಅಭಿವೃದ್ಧಿಗೆ ಅವಕಾಶವು ಸಿಗುತ್ತದೆ.
ಈ ಜಗತ್ತು ವಿವಿಧ ಪುಷ್ಪಗಳ ಉದ್ಯಾನವನದಂತೆ, ಹೇಗೆ ದುಂಬಿಯು ಜೇನನ್ನು ಹೂವಿನಿಂದ ಹೂವಿಗೆ ಹೋಗಿ ಸಂಗ್ರಹಿಸುತ್ತದೆಯೋ ಹಾಗೆಯೇ ನಾವು ಸಹಾ ಯಾವುದು ಒಳಿತೊ ಅದನ್ನು ಸಂಗ್ರಹಿಸಿ, ಯಾವುದು ಅನುಪಯುಕ್ತವೊ ಅದನ್ನು ಹಿಂದೆಯೇ ಬಿಟ್ಟಿಬಿಡಬೇಕು. ನಾವೇನಾದರೂ ಮಾಡಲು ಮುಂದಾದಾಗ ಪ್ರತಿಯೊಬ್ಬರನ್ನೂ ಸಂಸತಪಡಿಸುವುದು ಅಸಾಧ್ಯವಾಗಿದೆ. ಏಕೆಂದರೆ ಯಾವುದೇ ವಿಷಯದಲ್ಲಿಯಾಗಲಿ ವಿಭಿನ್ನ ವ್ಯಕ್ತಿಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ನೀವೇನಾದರೂ ಮುರ್ಖರೊಂದಿಗೆ ವಾದಿಸಲು ತೊಡಗಿದರೆ ನಿಮ್ಮನ್ನೇ ಮೂರ್ಖರನ್ನಾಗಿಸಿಕೊಳ್ಳುವಿರಿ.
ಜಗತ್ತಿನ ಪ್ರತಿಯೊಬ್ಬ ಮತ್ತು ಎಲ್ಲರನ್ನು ನೀವು ತಿದ್ದಲಾರಿರಿ. ಅಂತಹ ಭರವಸೆಯಿಂದ ಶಾಂತಿಯನ್ನು ನೀವು ಪಡೆಯಲಾರಿರಿ. ಅದೇರೀತಿಯಾಗಿ ಜಗತ್ತಿನ ಎಲ್ಲಾ ಕಲ್ಲು ಮುಳ್ಳುಗಳನ್ನು ತೆಗೆದು ಮೃದುವಾದ ನಡೆಯುವ ಹಾದಿಯನ್ನು ಮಾಡಲಾರಿರಿ.
ಅದೇರೀತಿಯಾಗಿ ನಾವು ಇಂದ್ರೀಯಗಳನ್ನು ರಕ್ಷಿಸಬೇಕು. ಇಂದ್ರೀಯ ದ್ವಾರಗಳಲ್ಲಿ ಜಾಗರೂಕತೆಯಿಂದ ಇರಬೇಕು. ಏಕೆಂದರೆ ಜಗತ್ತಿನಲ್ಲಿ ತೊಂದರೆಯುಂಟುಮಾಡುವ ಕ್ಷೊಭೆಯನ್ನುಂಟು ಮಾಡುವ ವಿಷಯಗಳೆಲ್ಲವನ್ನು ನೀವು ತೆಗೆಯಲಾರಿರಿ. ಆದರೆ ಇಂದ್ರೀಯಗಳಲ್ಲಿ ಜಾಗರೂಕರಾಗಿ ಮನಶ್ಶಾಂತಿಯನ್ನು ಸ್ಥಾಪಿಸಬಹುದಾಗಿದೆ. ಜನರು ತಪ್ಪಾಗಿದ್ದರೆ ಅವರನ್ನು ಸರಿಹಾದಿಗೆ ತರಲು ಹಲವು ಹಾದಿಗಳಿವೆ. ಆದರೆ ಟೀಕಿಸುವುದರಿಂದ, ದೋಷಿಸುವುದರಿಂದಾಗಿ ಮತ್ತು ಸಾರ್ವಜನಿಕವಾಗಿ ಕೂಗುವುದರಿಂದಾಗಿ ನೀವು ಅವರನ್ನು ತಿದ್ದಲಾರಿರಿ. ಆದರೆ ಹಾಗೆ ಮಾಡುವುದರಿಂದ ಅವರನ್ನು ಅವರ ದೃಷ್ಟಿಗಳಲ್ಲಿ ಇನ್ನೂ ಮೊಂಡರನ್ನಾಗಿ ಮಾಡುವಿರಿ.
ಹಾಗಲ್ಲದೆ ನೀವು ಚಾತುರ್ಯದಿಂದ ಅವರ ತಪ್ಪುಗಳನ್ನು ತೋರಿಸಿದಾಗ, ಅವರು ನಿಮ್ಮ ಮಾತುಗಳನ್ನು ಕೇಳಲು ಇನ್ನೂ ಇಷ್ಟಪಡುತ್ತಾರೆ. ಹಾಗು ನಿಮ್ಮ ಅನುಕಂಪ ಮತ್ತು ಮಾರ್ಗದರ್ಶತೆಗೆ ಒಂದಲ್ಲ ಒಂದುದಿನ ಧನ್ಯವಾದವನ್ನು ಅಪರ್ಿಸುವರು.
ದೀರ್ಘವಾದ ವಾದ-ವಿವಾದದ ಅರ್ಥವೇನೆಂದರೆ ಎರಡು ಪಕ್ಷದವರು (ಕಡೆಯವರು) ತಪ್ಪಿನಲ್ಲಿದ್ದಾರೆ ಎಂದೆ (ವಾಲ್ಟೆಯರ್).




4.4 ನಿಮ್ಮ ವ್ಯವಹಾರಗಳ ಕಡೆ ಮಾತ್ರ ಗಮನಹರಿಸಿ
ಪರರಲ್ಲಿ ಅಸೂಯೆ ವ್ಯಕ್ತಪಡಿಸದೆ ಕೇವಲ ನಮ್ಮ ಕಾರ್ಯಗಳತ್ತಲೇ ಗಮನಹರಿಸುವುದು ಆನಂದದಾಯಕ ವಿಷಯವಾಗಿದೆ.
ಒಬ್ಬನು ಪರರ ತಪ್ಪುಗಳ ಬಗ್ಗೆ ದೋಷಿಸದಿರಲಿ, ಅವರು ಮಾಡಿರುವ ಹಾಗು ಮಾಡದಿರುವ ಬಗ್ಗೆ ಗಮನಬೇಡ. ಬದಲಾಗಿ ತನ್ನ ಕುಶಲ ಕಾರ್ಯಗಳ ಬಗ್ಗೆ ಮತ್ತು ಕರ್ತವ್ಯ ಲೋಪದ ಬಗ್ಗೆ ಒಪ್ಪಿಕೊಳ್ಳಲಿ.
ಯಾರು ಸದಾ ಪರರ ತಪ್ಪುಗಳನ್ನು ಗಮನಿಸುತ್ತಾನೋ ಅದರ ಪರಿಣಾಮವಾಗಿ ಆತನು ಕೋಪಗೊಳ್ಳುತ್ತಾನೆ. ಹೀಗಾಗಿ ಆತನ ಕಶ್ಮಲಗಳೇ ಹೆಚ್ಚಾಗುತ್ತವೆ. ಆತನು ತನ್ನ ಕಲ್ಮಶಗಳ ನಾಶದಿಂದ ದೂರವೇ ಉಳಿಯುತ್ತಾನೆ.
ಪರರ ತಪ್ಪುಗಳನ್ನು ಕಾಣುವುದು ಸುಲಭ. ಆದರೆ ತನ್ನ ತಪ್ಪುಗಳನ್ನು ಕಾಣುವುದು ಅತಿಕಷ್ಟಕರ. ಪರರ ತಪ್ಪುಗಳನ್ನು ಕಾಣುವುದು ಹೊಟ್ಟನ್ನು ತೂರುವಂತೆ ಸುಲಭವಾದುದು. ಅಂದರೆ ಕಪಟಿ ಪಕ್ಷಿ ಬೇಟೆಗಾರನು ತನ್ನನ್ನು ಅಡಗಿಸಿಕೊಳ್ಳುವಂತೆ ತನ್ನ ತಪ್ಪನ್ನು ದೋಷಿಯು ಅಡಗಿಸಿಕೊಳ್ಳುತ್ತಾನೆ (ಬುದ್ಧ ಭಗವಾನರು).
ನಿಂದೆ ಮತ್ತು ಟೀಕೆಗಳಿಂದ ಯಾರೊಬ್ಬರು ಸಹಾ ಹೊರತಾಗಿಲ್ಲ. ಇದರ ಬಗ್ಗೆ ಬುದ್ಧ ಭಗವಾನರು ಹೀಗೆ ಹೇಳುತ್ತಾರೆ: ಜನರು ಮೌನಿಯನ್ನು ನಿಂದಿಸುವರು, ಅತಿ ವಾಚಾಳಿಯನ್ನು ನಿಂದಿಸುವರು ಹಾಗೆಯೇ ಮಿತಭಾಷಿಯನ್ನೂ ನಿಂದಿಸುವರು. ಅನಿಂದಿತರು ಈ ಜಗದಲ್ಲಿ ಯಾರೂ ಇಲ್ಲ.
ಹಾಗೆಯೇ ಅವರು ಹೀಗೂ ಹೇಳಿದ್ದಾರೆ: ಪೂರ್ಣ ನಿಂದಿತನು ಅಥವಾ ಪೂರ್ಣ ಪ್ರಶಂಸಿತನು ಈ ಹಿಂದೆಯು ಯಾರು ಇರಲಿಲ್ಲ. ಹಾಗೆಯೇ ಭವಿಷ್ಯದಲ್ಲಿಯೂ ಯಾರೂ ಇರುವುದಿಲ್ಲ. ಈಗಲೂ ಸಹಾ ಅಂತಹವರು ಯಾರೂ ಇಲ್ಲ.
ನಿಮ್ಮನ್ನು ಟೀಕಿಸುವವರೆಲ್ಲಾ ನಿಮ್ಮ ಶತ್ರುಗಳಲ್ಲ. ಅವರ ಟೀಕೆಯಿಂದ ನಿಮಗೆ ಗೋಚರಿಸದ ಎಷ್ಟು ತಪ್ಪುಗಳು ನಿಮಗೆ ಗೋಚರಿಸಿ ಅದನ್ನು ತಿದ್ದಿಕೊಳ್ಳುವ ಅಪೂರ್ವ ಅವಕಾಶವನ್ನು ಅವರು ನಿಮಗೆ ನೀಡಿದ್ದಾರೆ. ನಿಮಗೆ ಟೀಕೆ, ಕುಹಕವಾಗುತ್ತಿದೆ ಎಂದಮಾತ್ರಕ್ಕೆ ನಿಮ್ಮ ಉತ್ತಮ ಕಾರ್ಯಗಳನ್ನು ನಿಲ್ಲಿಸಬೇಡಿ. ನಿಮ್ಮ ದೌರ್ಬಲ್ಯಗಳನ್ನು ನೀವು ಒಪ್ಪಿರುವುದಾದರೆ ನಿಜಕ್ಕೂ ಯಶಸ್ವಿಯಾಗುವಂತಹ ಪ್ರಜ್ಞಾಶಕ್ತಿಯು ನಿಮ್ಮಲ್ಲಿ ಇದೆ ಎಂದೇ ಅರ್ಥ.





4.5 ನಾವೆಲ್ಲರೂ ಮಾನವರೇ
ಎಲ್ಲಾ ಮಾನವರಲ್ಲೂ ದೌರ್ಬಲ್ಯಗಳಿರುತ್ತವೆ ಮತ್ತು ಹೀಗಾಗಿ ಅವರು ತಪ್ಪು ಮಾಡುತ್ತ ಎಡವುತ್ತಾರೆ. ಪ್ರತಿ ಮಾನವನಲ್ಲೂ ಲೋಭ, ಕೋಪ ಮತ್ತು ಅಜ್ಞಾನವು ಇರುತ್ತದೆ. ಈ ದೌರ್ಬಲ್ಯಗಳು ಎಲ್ಲರಲ್ಲೂ ವಿವಿಧ ಮಟ್ಟದಲ್ಲಿ (ಅಂಶದಲ್ಲಿ) ಇರುತ್ತದೆ. ನೀವು ಅರಹಂತರಂತಹ ಪರಿಶುದ್ಧರು ಅಥವಾ ಪರಿಪೂರ್ಣರು ಆಗದಿದ್ದಲ್ಲಿ ನೀವು ಸಹಾ ಇದಕ್ಕೆ ಹೊರತಲ್ಲ. ಮಾನವನ ಮನಸ್ಸಿನ ಸ್ವಭಾವವೇ ಹೀಗೆ ಹೇಳುತ್ತದೆ. ಮಾನವನು ತನ್ನ ಜೀವನದಿಂದ ಸಂತೃಪ್ತಿನಾಗುವುದಿಲ್ಲ ಮತ್ತು ಆತನು ಇಡೀ ವಿಶ್ವವನ್ನು ಗಳಿಸಿದರೂ, ಜೀವನದ ಉದ್ದೇಶವನ್ನು ಎಂದಿಗೂ ಹುಡುಕಲಾರ.
ಈಗ ಅಜ್ಞಾನದಿಂದ ಆವರಿಸಿರುವ ಮಾನವನನ್ನು ಹತ್ತಿರದಿಂದ ನೋಡೋಣ. ಆತನ ಮನಸ್ಸು ಕ್ಷೊಭೆಗಳಿಂದ ಆವರಿಸಿರುತ್ತದೆ. ಗೊಂದಲ ಹಾಗು ಕತ್ತಲೆಯಿಂದ ತುಂಬಿರುತ್ತದೆ. ಈ ಅಜ್ಞಾನದಿಂದಾಗಿ ಆತನು ದೌಭರ್ಾಗ್ಯಗಳನ್ನು ಸೃಷ್ಟಿಸುತ್ತಾನೆ. ಅದನ್ನು ತನ್ನ ಸಹಚರರೊಂದಿಗೂ ಹಂಚಿಕೊಳ್ಳುತ್ತಾನೆ. ನಮಗೆ ಬರುವ ಬಹಳಷ್ಟು ಚಿಂತೆ ಮತ್ತು ದುಃಖಗಳಿಗೆ ಕಾರಣವೇನೆಂದರೆ ಬದಲಾಗುತ್ತಿರುವ ಪ್ರಾಪಂಚಿಕ ಸ್ಥಿತಿಗತಿಗಳು ಹಾಗು ಪ್ರಾಪಂಚಿಕ ಭೋಗಗಳ ಬಗ್ಗೆ ನಮಗಿರುವ ತೀವ್ರ ಲಾಲಸೆಯೇ ಆಗಿದೆ. ಅವನ್ನೆಲ್ಲಾ ನಮ್ಮ ಸ್ವಾರ್ಥಯುತ ಮನಸ್ಸು ಎಂದೆಂದಿಗೂ ಮುಂದುವರೆಸುತ್ತಿರುತ್ತದೆ. ನಿರಾಶೆ ಮತ್ತು ಫಲಿಸದ ಬಯಕೆಗಳು, ಅನಿರೀಕ್ಷಿತ ಬದಲಾವಣೆಯಿಂದ ಉಂಟಾಗಿದ್ದು ಚಿಂತೆಯನ್ನು ಸೃಷ್ಟಿಸುತ್ತದೆ. ಆದ್ದರಿಂದಾಗಿ ನಿಮ್ಮ ಚಿಂತೆಗಾಗಿ ನೀವೇ ಕಾರಣಕರ್ತರಾಗಿರುವಿರಿ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರು ತಾವು ಮಾಡಿದ ಕೆಲವು ತಪ್ಪುಗಳಿಗೆ ಮತ್ತು ಪಾಪಗಳಿಗೆ ಅವರೇ ಕಾರಣಕರ್ತರಾಗುತ್ತಾರೆ. ಹೀಗಿರುವಾಗ ಅದರಿಂದಾಗುವ ಫಲಿತಾಂಶಗಳಿಂದ ನೀವು ಹೇಗೆ ಪಾರಾಗುತ್ತೀರಿ. ಚಿಂತೆಯನ್ನು ಉತ್ಪಾದಿಸುವ ತೀವ್ರ ಲಾಲಸೆಗೆ ಮುಖ್ಯ ಕಾರಣವು ಮತ್ತು ಪೋಷಕವು ಅಜ್ಞಾನವೇ ಆಗಿದೆ.
ಯಾವಾಗ ಜ್ಞಾನದಿಂದ ಅಜ್ಞಾನವು ದೂರವಾಗುವುದೋ ಆಗ ಭಯ ಮತ್ತು ಚಿಂತೆಯು ಅದೃಶ್ಯವಾಗುವುದು.
ನೀವು ಈ ರೀತಿಯಾಗಿ ಮಾನವನ ಮನಸ್ಸಿನಲ್ಲಿರುವ ದೌರ್ಬಲ್ಯವನ್ನು ಅರ್ಥ ಮಾಡಿಕೊಂಡರೆ ಆಗ ನೀವು ನಿಮ್ಮ ಸಮಸ್ಯೆಗಳ ಬಗ್ಗೆ ಗೊಣಗುವುದಿಲ್ಲ. ಆಗ ನಿಮ್ಮಲ್ಲಿ ಅವರನ್ನು ಎದುರಿಸುವ ಧೈರ್ಯವಿರುತ್ತದೆ. ಮಾನವನ ಮನಸ್ಸೇ ಆತನ ಸುಖಕ್ಕೋ ಮತ್ತು ದುಃಖಗಳೆರಡಕ್ಕೂ ಕಾರಣಕರ್ತವಾಗಿದೆ.
ಮಾನವನಿಗೆ (ಕೆಟ್ಟದೇನೂ) ಏನೂ ಆಗುವುದಿಲ್ಲ, ಅಂತಹುದಾವುದೂ ಆತನಲ್ಲಿ ಅಂತರ್ಗತವಾಗಿಲ್ಲ (ಜಂಗ್, ಸೈಕೋಲಾಜಿಸ್ಟ್)





4.6 ಪ್ರತಿಯೊಬ್ಬರು ಸಮನಾಗಿಯೇ ಒಳ್ಳೆಯವರಲ್ಲ
ಕೆಲವು ಜನರು ಎಂದಿಗೂ ಕೆಟ್ಟದಕ್ಕೆ ಕಾರಣಕರ್ತರಾಗಿರುವುದಿಲ್ಲ ಅಥವಾ ಯಾವ ತೊಂದರೆಯನ್ನು ಮಾಡಿರುವುದಿಲ್ಲ. ಆದರೂ ಕೆಲ ವಂಚಕರ ಜಾಲಕ್ಕೆ ಸಿಲುಕುವ ಮುಗ್ಧ ಶೋಷಿತರಾಗುತ್ತಾರೆ. ಇಂತಹ ದೂರುಗಳನ್ನು ನಾವು ಸಾಂದಭರ್ಿಕವಾಗಿ ಆಗಾಗ್ಗೆ ಕೇಳುತ್ತಿರುತ್ತವೆ. ಹೀಗಾಗಿ ಅವರು ತಾವು ಜೀವಿಸಿದ ಉತ್ತಮ ಜೀವನಕ್ಕಾಗಿ ಹತಾಶರಾಗಿದ್ದಾರೆ. ತಾವು ಮಾಡಿರದ ತಪ್ಪಿಗೆ ಶಿಕ್ಷೆಯಾಯಿತು ಎಂದು ನೋವುಪಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಶೋಷಿತರು ಜಗತ್ತಿನಲ್ಲಿ ಎಲ್ಲಾ ಬಗೆಯ ಜನರು ಇದ್ದಾರೆ ಎಂದು ಅರಿತುಕೊಳ್ಳುತ್ತಾರೆ. ಅಂದರೆ ಒಳ್ಳೆಯವರು, ಅಷ್ಟು ಒಳ್ಳೆಯವರಲ್ಲದವರು, ಕೆಟ್ಟವರು, ಅಷ್ಟು ಕೆಟ್ಟವರಲ್ಲದವರು, ಅಂತಹ ಎಲ್ಲಾ ಅಸಾಧಾರಣ ವ್ಯಕ್ತಿತ್ವಗಳು ಸೇರಿಯೇ ನಮ್ಮದೆನ್ನುವ ಈ ಜಗತ್ತು ರಚಿತವಾಗುತ್ತದೆ. ಯಾವ ಮುಗ್ಧ ಶೋಷಿತರು ಇದ್ದಾರೋ ಅವರು ತಮ್ಮನ್ನು ಒಳ್ಳೆಯವರು ಎಂದು ತಮಗೆ ತಾವೇ ಸಮಾಧಾನಿಸಿಕೊಳ್ಳುತ್ತಾರೆ. ಹಾಗೆಯೇ ಶಾಂತಿಯನ್ನು ಹಾಳು ಮಾಡುವವರು ಕೆಟ್ಟವರೆಂದು ಪರಿಗಣಿಸಲ್ಪಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಅವರು ಸಹಾ ತಮ್ಮ ಪಾಪದ ಫಲವನ್ನು ಸಹನೆಯಿಂದ ಸಹಿಸಬೇಕಾಗುತ್ತದೆ.
ಇದಕ್ಕೆ ಉದಾಹರಣೆ ಎಂಬಂತೆ ಒಬ್ಬ ಒಳ್ಳೆಯವ ಹಾಗು ಜಾಗೃತ ಡ್ರೈವರ್ ಮತ್ತು ಕೆಟ್ಟ ಹಾಗು ಅಲಕ್ಷ ಅಜಾಗರೂಕ ಡ್ರೈವರ್. ಇಲ್ಲಿ ಒಳ್ಳೆಯ ಜಾಗರೂಕ ಡ್ರೈವರ್ ಆಕಸ್ಮಿಕ ಅಪಘಾತಗಳಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾನೆ. ಆದರೂ ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ, ಕೆಟ್ಟ ಅಜಾಗರೂಕ ಡ್ರೈವರನ ತಪ್ಪಿನಿಂದಾಗಿ ಆಕಸ್ಮಿಕ ಅಪಘಾತಕ್ಕೆ ಗುರಿಯಾಗುತ್ತಾನೆ.
ಹೀಗಾಗಿ ಒಳ್ಳೆಯತನವಿದ್ದರೂ ಸಹಾ ಒಳ್ಳೆಯವನು ದುಃಖಕ್ಕೆ ಗುರಿಯಾಗಬೇಕಾಗುತ್ತದೆ. ಏಕೆಂದರೆ ನಮ್ಮ ಸುತ್ತಲು ಕೆಟ್ಟ ವ್ಯಕ್ತಿಗಳು ಇರುವುದರಿಂದಾಗಿ. ಈ ಜಗತ್ತು ಒಳ್ಳೆಯದು ಅಲ್ಲ, ಹಾಗೆಯೇ ಕೆಟ್ಟದ್ದು ಅಲ್ಲ. ಅದು ಸಂತರನ್ನು ಹಾಗೆಯೇ ಪಾಪಿಗಳನ್ನು ಉತ್ಪಾದಿಸುತ್ತದೆ. ಇಲ್ಲಿ ಮೂರ್ಖರು ಇರುವಂತೆ ಜ್ಞಾನೋದಯ ಪಡೆದವರು ಇದ್ದಾರೆ. ಒಂದೇ ಜೇಡಿ ಮಣ್ಣಿನಲ್ಲಿ ಸುಂದರವಾದ ಹಾಗೇ ಕುರೂಪವಾದ, ಉಪಯುಕ್ತ ಹಾಗು ನಿರುಪಯುಕ್ತ ವಸ್ತುಗಳನ್ನು ನಿಮರ್ಿಸಬಹುದು. ಕುಂಬಾರಿಕೆಯ ಗುಣಮಟ್ಟವು ಅವಲಂಬಿತವಾಗಿರುವುದು ಕುಂಬಾರನಿಗೆ ಹೊರತು ಜೇಡಿಮಣ್ಣಿಗೆ ಮಾತ್ರವೇ ಅಲ್ಲ. ಇಲ್ಲಿ ಕುಂಬಾರನೆಂದರೆ ನೀವೇ ಆಗಿರುವಿರಿ. ನೀವು ಸುಖದ ಅಚ್ಚನ್ನು ಅಥವಾ ದುಃಖದ ಅಚ್ಚನ್ನು ರೂಪಿಸುವಿರೋ ಅದು ನಿಮ್ಮ ಕೈಯಲ್ಲಿದೆ ಹೊರತು, ನಿಮ್ಮ ಸುತ್ತಲಿನ ಸನ್ನಿವೇಶಕ್ಕಿಲ್ಲ.




4.7 ಮಾನವರ ವಗರ್ಿಕರಣ
ಬುದ್ಧ ಭಗವಾನರು ಮಾನವರ ವಗರ್ಿಕರಣವನ್ನು ಹಲವು ರೀತಿ ಮಾಡಿದ್ದಾರೆ. ಅದರಲ್ಲಿ ಇದು ಒಂದು ವಗರ್ಿಕರಣವಾಗಿದೆ. ಇಲ್ಲಿ ಮಾನವರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ.
1. ಇಲ್ಲಿ ಒಬ್ಬ ತನ್ನ ಒಳಿತಿಗಾಗಿ ಮಾತ್ರ ಕಾರ್ಯ ಮಾಡುವನು. ಆದರೆ ಪರರ ಒಳಿತಿಗಾಗಿ ಇಲ್ಲ.
2. ಇಲ್ಲಿ ಒಬ್ಬ ಪರರ ಒಳಿತಿಗಾಗಿ ಮಾತ್ರ ಕಾರ್ಯ ಮಾಡುವನು. ಆದರೆ ತನ್ನ ಒಳಿತನ್ನೇ ಮರೆಯುವನು.
3. ಇಲ್ಲಿ ಒಬ್ಬ ತನ್ನ ಒಳಿತಿಗಾಗಲಿ ಅಥವಾ ಪರರ ಒಳಿತಿಗಾಗಲಿ ಕಾರ್ಯ ಮಾಡುವುದಿಲ್ಲ.
4. ಇಲ್ಲಿ ಒಬ್ಬ ತನ್ನ ಒಳಿತಿಗಾಗಿಯು ಹಾಗು ಪರರ ಒಳಿತಿಗಾಗಿಯು ಕಾರ್ಯಮಾಡುತ್ತಾನೆ.
ಯಾರು ತನ್ನ ಒಳಿತಿಗಾಗಿ ಕಾರ್ಯಮಾಡಿ, ಪರರ ಒಳಿತಿಗಾಗಿ ಕಾರ್ಯ ಮಾಡುವುದಿಲ್ಲವೋ, ಆತನು ತನ್ನಲ್ಲಿ ಉಂಟಾಗುವ ಕೆಟ್ಟ ಯೋಚನೆಗಳನ್ನು ಕೆಟ್ಟ ಮಾತುಗಳನ್ನು ಮತ್ತು ಕೆಟ್ಟ ಕಾರ್ಯಗಳನ್ನು ತೊಡೆದುಹಾಕುತ್ತಾನೆ. ಆದರೆ ಪರರಿಗೆ ಹಾಗೆ ಮಾಡಲು, ಪ್ರೋತ್ಸಾಹಿಸುವುದಿಲ್ಲ. ಅವರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆಯಲು ಪ್ರೋತ್ಸಾಹಿಸುವುದಿಲ್ಲ.
ಯಾರು ಪರರ ಒಳಿತಿಗಾಗಿ ಕಾರ್ಯಮಾಡಿ, ತನ್ನ ಒಳಿತನ್ನೇ ಮರೆಯುವನೋ ಆತನು ಪರರ ಪಾಪಯುತ ಯೋಚನೆಗಳನ್ನು, ಪಾಪಯುತ ಮಾತುಗಳನ್ನು ಮತ್ತು ಪಾಪಕಾರ್ಯಗಳನ್ನು ತೊರೆಯಲು ಪ್ರೋತ್ಸಾಹಿಸುತ್ತಾನೆ. ಆದರೆ ತನ್ನಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆದುಹಾಕಲು ಶ್ರಮಿಸುವುದಿಲ್ಲ.
ಯಾರು ತನ್ನ ಮತ್ತು ಪರರ ಒಳಿತಿಗಾಗಿ ಶ್ರಮಿಸುವುದಿಲ್ಲವೋ ಆತನು ತನ್ನಲ್ಲಿನ ಪಾಪಯುತ ಯೋಚನೆಗಳನ್ನು, ಪಾಪಯುತ ಮಾತುಗಳನ್ನು ಹಾಗು ಪಾಪಯುತ ಕಾರ್ಯಗಳನ್ನು ತೊರೆಯುವುದಿಲ್ಲ. ಹಾಗೆಯೇ ಪರರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊಡೆದುಹಾಕಲು ಪ್ರೋತ್ಸಾಹಿಸುವುದಿಲ್ಲ.
ಮತ್ತು ಯಾರು ತನ್ನ ಒಳಿತಿಗಾಗಿ ಮತ್ತು ಪರರ ಒಳಿತಿಗಾಗಿ ಶ್ರಮಿಸುತ್ತಿರುವನೋ, ಆತನು ತನ್ನಲ್ಲಿನ ಪಾಪಯುತವಾದ ಯೋಚನೆಗಳನ್ನು ಮಾತುಗಳನ್ನು ಮತ್ತು ಕಾರ್ಯಗಳನ್ನು ತೊಡೆದುಹಾಕಲು ಶ್ರಮಿಸುತ್ತಾನೆ ಹಾಗೆಯೇ ಪರರಲ್ಲಿನ ಲೋಭ, ದ್ವೇಷ ಮತ್ತು ಮೋಹಗಳನ್ನು ತೊರೆಯಲು ಅವರಿಗೆ ಪ್ರೋತ್ಸಾಹಿಸುತ್ತಾನೆ (ಅಂಗುತ್ತರ ನಿಕಾಯ)





4.8 ಶಿಷ್ಟಾಚಾರಗಳು ಮತ್ತು ವಾಡಿಕೆಗಳು
ಉತ್ತಮ ಶಿಷ್ಟಾಚಾರದ ಅಳತೆ ಸಮಾಜಗಳಿಂದ ಸಮಾಜಕ್ಕೆ ವ್ಯತ್ಯಾಸ ಇರುತ್ತದೆ. ಕೆಲವು ದೇಶಗಳಲ್ಲಿ ಅತಿಥಿಗಳು ಊಟವನ್ನು ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ಶಬ್ದವನ್ನು ಮಾಡುವುದು ಶಿಷ್ಟಾಚಾರ ಎನ್ನಿಸಿ ಅದನ್ನೇ ನಿರೀಕ್ಷಿಸುತ್ತಾರೆ. ಹಾಗೆಯೇ ಭೋಜನದ ನಂತರ ತೇಗುವುದನ್ನು ಸಹಾ ಅವಿಧೇಯತೆ ಎಂದು ಭಾವಿಸುವುದಿಲ್ಲ. ಬದಲಾಗಿ ಅವರು ಭೋಜನವನ್ನು ನಿಜವಾಗಿ ಆನಂದಿಸಿ ಸೇವಿಸಿದ್ದಾರೆ ಎಂದು ಪರಿಗಣಿತವಾಗುತ್ತದೆ. ಆದರೆ ಅಂತಹ ಭೋಜನ ಶಿಷ್ಟಾಚಾರಗಳನ್ನು ಒರಟುತನ, ಕೆಟ್ಟ ಶಿಷ್ಟಾಚಾರ ಅಥವಾ ಅನಾಗರಿಕತೆ ಎಂದು ಬೇರೆ ದೇಶಗಳಲ್ಲಿ ಭಾವಿಸುತ್ತಾರೆ.
ಒಂದು ದೇಶದಲ್ಲಿ ಬೆರಳನ್ನು ಬಾಯಿಗೆ ಅಥವಾ ಮೂಗಿಗೆ ಹಾಕಿಕೊಳ್ಳುವುದು ಅತ್ಯಂತ ತಪ್ಪು ಕೃತ್ಯವಾಗಿದ್ದರೆ, ಇನ್ನೊಂದು ದೇಶದಲ್ಲಿ ಅದಕ್ಕೆ ಅಪಾರ್ಥವೇ ಇಲ್ಲ. ತಪ್ಪು ಅಲ್ಲ, ಕೆಲವು ಜನರು ಶೂನಿಂದ ಹೊಡೆಯುವುದು ಅಪಮಾನವೆಂದು ಭಾವಿಸಿದರೆ ಕೆಲವೆಡೆ ಮಕ್ಕಳನ್ನು ಹೊಡೆಯಲು ಚಪ್ಪಲಿಯನ್ನೇ ಬಳಸುತ್ತಾರೆ.
ನಾವು ಪ್ರಯಾಣ ಬೆಳೆಸುವಾಗ ಇಂಥಹುದೇ ಅನೇಕ ವಿಶಿಷ್ಟ ಶಿಷ್ಟಾಚಾರಗಳನ್ನು, ವಾಡಿಕೆಗಳನ್ನು ಗಮನಿಸುತ್ತೇವೆ. ನಾವು ಆತುರದಲ್ಲಿ ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ಪೂವರ್ಾಗ್ರಹ ಪೀಡಿತರಾಗಿ ನಿರ್ಧರಿಸಬಾರದು. ಒಂದುರೀತಿ ಚಿಂತಿಸಿದರೆ ಶಿಷ್ಟಾಚಾರಗಳು ಒಳ್ಳೆಯದು ಅಲ್ಲ. ಹಾಗೆಯೇ ಕೆಟ್ಟದ್ದು ಅಲ್ಲ. ಆದರೆ ಯಾವಾಗ ಅದು ಹಾನಿವುಂಟುಮಾಡುತ್ತದೆ ಅಥವಾ ಪರರಿಗೆ ನೋವುಂಟು ಮಾಡುವುದೋ ಆಗ ನಾವು ಅವುಗಳನ್ನು ಒಳಿತೋ ಅಥವಾ ಕೆಡಕೋ ಎಂದು ನಿರ್ಧರಿಸಬಹುದು.
ನಾವು ಸದಾ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ನಾವು ಅಂಧರಾಗಿ ಯಾವುದೇ ಸಂಪ್ರದಾಯಕ್ಕಾಗಲಿ, ವಿಧಿಗಾಗಲಿ, ಶಿಷ್ಟಾಚಾರಕ್ಕಾಗಲಿ ಮತ್ತು ಸಂಸ್ಕಾರ ಗಳಿಗಾಗಲಿ ಅಂಟಬಾರದು. ಇವನ್ನೆಲ್ಲಾ ನಮ್ಮ ಹಿರಿಯರು ತಮ್ಮ ಸನ್ನಿವೇಶಗಳಿಗೆ ಅನುಸಾರವಾಗಿ ಪಾಲಿಸುತ್ತ ಬಂದರು. ನಮ್ಮ ಪೂರ್ವಜರ ಕೆಲವು ಸಂಪ್ರದಾಯಗಳು ಒಳಿತೇ ಆಗಿವೆ. ಮತ್ತೆ ಕೆಲವು ಅಂತಹ ಉಪಯುಕ್ತವೇನಲ್ಲ. ಆದರೆ ಕೆಲವೊಂದಂತು ಆಧುನಿಕ ಜೀವನಕ್ಕೆ ಅಸಂಬದ್ಧವಾಗಿವೆ. ನಾವು ಚಿಂತನೆ ಮಾಡುತ್ತಾ ಇವು ಹಿತಕಾರಿಯೇ? ಸುಖಕಾರಿಯೇ? ಆಧುನಿಕ ಜಗತ್ತಿಗೆ ಸರಿಹೊಂದುವುದೇ? ಎಂದು ವಿಮಶರ್ಿಸಿ ನಂತರ ನಿರ್ಧರಿಸುವುದು ಉತ್ತಮವಾಗಿದೆ.
ಕಾಲಾಮ ಸುತ್ತದಲ್ಲಿ ಬುದ್ಧ ಭಗವಾನರು ವಾಡಿಕೆಗಳ, ಸಂಪ್ರದಾಯಗಳ, ನಂಬಿಕೆಗಳ, ಆಚರಣೆಗಳ ಬಗ್ಗೆ ಹೀಗೆ ಹೇಳಿದ್ದಾರೆ. ಯಾವಾಗ ನಿಮಗೆ ಕೆಲವು ವಿಷಯಗಳು ಅಕುಶಲವಾದವು, ತಪ್ಪಾದವು ಮತ್ತು ಪಾಪಯುತವಾದವು, ನಿಮಗೂ ಹಾಗು ಪರರಿಗೂ ದುಃಖವನ್ನು, ಕೆಟ್ಟದನ್ನು ಉಂಟುಮಾಡುತ್ತವೆ ಎಂದು ಅರಿತಾಗ ಅವನ್ನೆಲ್ಲಾ ತ್ಯಜಿಸಿರಿ. ಮತ್ತು ಯಾವಾಗ ನಿಮಗೆ ಕೆಲವು ವಿಷಯಗಳು ಕುಶಲವಾದವು, ನಿಮಗೂ ಹಾಗು ಪರರಿಗೂ ಒಳಿತನ್ನುಂಟು ಮಾಡುತ್ತವೆ ಎಂದು ಅರಿತಾಗ ಅವನ್ನೆಲ್ಲಾ ಪಾಲಿಸಿರಿ.
ಇಂದು ಕೆಲವು ಹಿರಿಯರು ಆಧುನಿಕ ಚಿಂತನೆಗಳನ್ನು ಮತ್ತು ಯುವ ಜನಾಂಗದ ಜೀವನ ಶೈಲಿಯನ್ನು ಸಹಿಸುವುದೇ ಇಲ್ಲ. ಅವರು ತಮ್ಮ ಮಕ್ಕಳು ಸಹಾ ಅದೇ ಹಳೆಯ ಸಂಪ್ರದಾಯಗಳನ್ನು ತಮ್ಮ ಅಜ್ಜಂದಿರ ಪುರಾತನ ಸಂಪ್ರದಾಯವನ್ನು ಪಾಲಿಸುವಂತೆ ನಿರೀಕ್ಷಿಸುತ್ತಾರೆ. ಆದರೆ ಅದಕ್ಕೆ ಬದಲಾಗಿ ಅಂತಹ ಚಟುವಟಿಕೆಗಳು ಹಾನಿಕಾರಕವಲ್ಲದಿದ್ದರೆ, ಮಕ್ಕಳನ್ನು ಕಾಲದ ಜೊತೆಗೆ ನಡೆಯಲು ಬಿಡಬೇಕು. ಹಾಗೆಯೇ ವೃದ್ಧರು ತಾವು ಯುವಕರಾಗಿದ್ದಾಗ ತಮ್ಮ ತಂದೆ-ತಾಯಿಗಳು ಕೆಲವು ಜನಪ್ರಿಯ ರೀತಿನೀತಿಗಳನ್ನು ವಿರೋಧಿಸಿದ್ದುದನ್ನು ನೆನೆಯಬೇಕು. ಇಲ್ಲಿ ವ್ಯತ್ಯಾಸವಿರುವುದು ಸಂಪ್ರದಾಯಶೀಲ ಪಾಲಕರ ಮತ್ತು ನವಪೀಳಿಗೆಯ ಯುವಕರ ದೃಷ್ಟಿಕೋನಗಳ ಮಧ್ಯೆ ಆಗಿದೆ. ಆದರೆ ಅದರ ಪರಿಣಾಮ ಕುಟುಂಬಗಳಲ್ಲಿ ಆಗುತ್ತಿದೆ. ಆದರೆ ಇದರ ಅರ್ಥ ಮಕ್ಕಳು ತಪ್ಪು ಮೌಲ್ಯಗಳತ್ತ ಹೋದಾಗ ಅವರನ್ನು ಮಾರ್ಗದರ್ಶನ, ಸಲಹೆ ನೀಡಲು ಹಿಂದು ಮುಂದು ನೋಡಿ ಎಂದಲ್ಲ. ಬದಲಾಗಿ ಅವರನ್ನು ತಿದ್ದುವಾಗ, ಕೆಲವಿಷಯಗಳಿಗೆ ತಡೆಯುವುದು ಶಿಕ್ಷೆಗಿಂತ ಉತ್ತಮ ಎನ್ನುವುದು ಪೋಷಕರು ತಮ್ಮ ಮಕ್ಕಳಿಗೆ ಏತಕ್ಕೆ ಕೆಲವು ಆಚರಣೆಗಳು ತಪ್ಪು ಎಂದು ವಿವರಿಸಬೇಕು. ಏಕೆಂದರೆ ಮಕ್ಕಳಿಗೆ ಆಗ ಮಾತ್ರ ಅವರಿಗೆ ಸರಿಯಾದ ಕಾರಣ, ಉದ್ದೇಶ ಅರ್ಥವಾಗಿ ಅವರು ಹಾದಿ ತಪ್ಪುವುದಿಲ್ಲ ಮತ್ತು ಮಕ್ಕಳಿಗೆ ತಿಳಿ ಹೇಳಲೇಬೇಕು. ಅವರು ತಮಗೆ ತಾವೇ ಕೆಲವು ವಿಷಯಗಳು ತಪ್ಪು ಹಾಗೆಯೇ ಕೆಲವು ಒಳ್ಳೆಯದೆಂದು ತಿಳಿಯಲಾರರು.






4.9 ಸ್ತ್ರೀ ವಿರುದ್ಧ ಪಕ್ಷಪಾತ
ಬುದ್ಧ ಭಗವಾನರು ಹೀಗೆ ಹೇಳುತ್ತಾರೆ ನಾವು ಏನನ್ನಾದರೂ ಅರಿಯುವ ಸಾಮಥ್ರ್ಯ ಬಳಸಿಕೊಳ್ಳಬೇಕಾದರೆ ಅದಕ್ಕಾಗಿ ನಾವು ವಿಷಯಗಳನ್ನು ಅವು ಇರುವಂತೆಯೇ ಅರಿಯುವಂತಹ (ನೋಡುವಂತಹ) ಕೌಶಲ್ಯ ಬೆಳೆಸಿಕೊಳ್ಳಬೇಕು. ಪುರುಷನ ಸಂಬಂಧದಂತೆಯೇ ಸ್ತ್ರೀಯ ವಿಶ್ಲೇಷಣೆಯ ನಂತರ ಭಗವಾನರು ಅಂತಿಮವಾಗಿ ತೀಮರ್ಾನಿಸಿದ್ದು ಏನೆಂದರೆ ಧಮ್ಮ ಆಚರಿಸಲು, ಅರಿಯಲು ಸ್ತ್ರೀಗೂ ಯಾವುದೇ ತಡೆಯಿಲ್ಲ ಎಂದೂ, ಅವರೂ ಸಹ ಅರಹಂತತ್ವದಂತಹ ಉನ್ನತ ಸ್ಥಿತಿಯನ್ನು ಪುರುಷರಂತೆಯೇ ಸಾಧಿಸಬಲ್ಲರು ಎಂದು ಹೇಳಿದ್ದಾರೆ. ಅರಹಂತ ಸ್ಥಿತಿಯು ಚಿತ್ತಪರಿಶುದ್ಧತೆಯ ಅತ್ಯುನ್ನತ ಸ್ಥಿತಿಯಾಗಿದೆ. ಧಮ್ಮವನ್ನು ಆಚರಿಸಲು ಸ್ತ್ರೀಗೆ ಪೂರ್ಣ ಸ್ವತಂತ್ರವನ್ನು ಭಗವಾನರು ನೀಡಿದ್ದರಿಂದಾಗಿ ಭಗವಾನರು ಬಲಯುತವಾದ ವಿರೋಧವನ್ನು ಎದುರಿಸಬೇಕಾಯಿತು.
ಬುದ್ಧ ಭಗವಾನರ ಕಾಲದಲ್ಲಿ, ಅವರು ಸ್ತ್ರೀಯರನ್ನು ವಿಮುಕ್ತಗೊಳಿಸುವ ಮುನ್ನ, ಆಗಿನ ಸಂಪ್ರದಾಯಗಳು ಮತ್ತು ಕಟ್ಟುಪಾಡುಗಳು ಹೇಗಿತ್ತೆಂದರೆ ಪುರುಷರಿಗೆ ಸ್ತ್ರೀಯರು ಚಲಿಸುವ ಭೋಗ ವಸ್ತುವಾಗಿ ಬಳಕೆಯಲ್ಲಿದ್ದರು. ಸನಾತನ ಸ್ಮೃತಿಕಾರರಾದಂತಹ, ಧರ್ಮಶಾಸ್ತ್ರಕಾರರಂತಹ ಮನುವು ಸ್ತ್ರೀಯರು ಪುರುಷರಿಗಿಂತ ಹೀನ ಎಂದು ತೀರ್ಪನ್ನು ನೀಡಿಬಿಟ್ಟಿದ್ದರು. ಅದರಿಂದಾಗಿ ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನ ಅತಿಹೀನವಾಯಿತು. ಮತ್ತು ಅಡುಗೆಮನೆಗೆ ಮಾತ್ರ ಸೀಮಿತವಾಯಿತು. ಅವರು ಸ್ತ್ರೀಯರನ್ನು ದೇವಸ್ಥಾನಗಳಿಗೂ ಧಾಮರ್ಿಕ ಚಟುವಟಿಕೆಗಳಿಗೂ ಸಹಾ ಯಾವ ರೀತಿಯಲ್ಲಿಯೂ ಭಾಗವಹಿಸಲು ಅವಕಾಶ ನೀಡಲಿಲ್ಲ.
ಜನನ ನಿಯಂತ್ರಣದ ಹೆಸರಿನಲ್ಲಿ, ಹೆಣ್ಣು ಮಕ್ಕಳಿಗೆ ಅವರು ಹುಟ್ಟುವ ಮುನ್ನವೇ ಅವರ ವಿರುದ್ಧ ಪಕ್ಷಪಾತವು ಸಿದ್ಧವಾಗಿರುತ್ತದೆ. ಇಂದು ಸಹಾ ಜಗತ್ತಿನಲ್ಲಿ ಸ್ತ್ರೀ ಭ್ರೂಣ ಹತ್ಯೆಯು ಜಗತ್ತಿನ ಹಲವೆಡೆಗಳಲ್ಲಿ ಆಚರಣೆಯಲ್ಲಿ ಇರುವುದು ನಿಜಕ್ಕೂ ಭಯಾನಕ ಸಂಗತಿಯಾಗಿದೆ. ಸ್ತ್ರೀಯ ವಿಮೋಚನಾ ಚಳವಳಿ ಮತ್ತು ಕುಟುಂಬದ ಮೇಲೆ ಅದರ ಪರಿಣಾಮ ಈ ರೀತಿಯ ತಲೆಬರಹದ ಅಡಿಯಲ್ಲಿ ಅದು ಸಂಪತ್ಭರಿತ ಸಮಾಜಗಳಲ್ಲಿ ಮುಖ್ಯವಾಗಿ ಉನ್ನತ ನಿರ್ವಹಣ ಸ್ಥಾನಗಳಲ್ಲಿ ಶೋಷಣೆಯಿದೆ. ಅವನ್ನೆಲ್ಲಾ ಮುಂದೆ ಗಮನಿಸೋಣ.
ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಸ್ತ್ರೀ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಹಿಂದೆ ಭಾರತದಲ್ಲೂ ಸಂಪ್ರದಾಯಸ್ಥ ಸಮಾಜವು ಪುರುಷ ಪ್ರಧಾನ ಸಮಾಜವಾಗಿತ್ತು. ಅಲ್ಲಿ ಸ್ತ್ರೀಯು ವಿಧವೆಯಾದರೆ ಆಕೆಗೆ ಭಯಾನಕವಾಗಿತ್ತು. ಈಗಲೂ ಈ ದುಃಸ್ಥಿತಿಯಿಂದ ಸ್ತ್ರೀಯರು ಪೂರ್ಣವಾಗಿ ಪಾರಾಗಿಲ್ಲ. ವಿಧವೆಯರು ಅತಿಕಡಿಮೆ ವಯಸ್ಸಿನವರಾಗಿದ್ದರೂ ಸಹಾ ಅವರಿಗೆ ಸಮಾಜ ಮತ್ತು ಕುಟುಂಬದಿಂದ ಬಹಿಷ್ಕಾರ ಹಾಕಲಾಗುತ್ತಿತ್ತು.
ಮೂಢನಂಬಿಕೆಯ ಕುಟುಂಬಗಳಲ್ಲಿ ಸ್ತ್ರೀ ಶೋಷಣೆ ಇನ್ನೂ ಹೆಚ್ಚು. ವಿಧವೆಯು ತನ್ನ ಮಾವನ ಮನೆಯಲ್ಲಿ ನಿಂದನೆಗೆ ಒಳಗಾಗುತ್ತಾಳೆ. ಆಕೆಯ ಕಾಲುಗುಣದಿಂದಲೇ ಈ ಎಲ್ಲಾ ಅನಿಷ್ಟ ಎಂದು ನಿಂದನೆಗೆ ಒಳಗಾಗುತ್ತಾಳೆ. ಪತಿಯ ಸಾವಿಗೂ ಆಕೆಯನ್ನೇ ಹೊಣೆಗಾರಿಕೆ ಮಾಡುತ್ತಾರೆ. ಅಷ್ಟೇ ಅಲ್ಲ, ಆಕೆಗೆ ಬಹಿಷ್ಕಾರವೂ ಹಾಕುತ್ತಾರೆ. ಸ್ತ್ರೀಗೆ ಅತಿಅಲ್ಪ ಆಯ್ಕೆಗಳಿರುತ್ತದೆ. ಸ್ತ್ರೀಯು ವಿಧವೆಯಾದರೆ ಆಕೆಯ ಮರು ಮದುವೆಗೂ ಹುಬ್ಬುಗಂಟಿಕ್ಕುತ್ತಾರೆ. ಆದರೆ ಪುರುಷನಿಗಾದರೆ ಅಂತಹ ಯಾವುದೇ ತಡೆಗಳಿರುವುದಿಲ್ಲ. ಆಧುನಿಕ ಯುಗ ಆರಂಭವಾಗುವವರೆಗೂ ಸ್ತ್ರೀಯು ಸತ್ತ ಪತಿಯ ಶವದೊಡನೆ ಸುಟ್ಟು ಸಾಯಬೇಕಿತ್ತು. ಅದಕ್ಕೆ ಸತಿ ಪದ್ಧತಿ ಎನ್ನುತ್ತಾರೆ. ಆದರೆ ರಾಜರಾಮ್ ಮೋಹನ್ರಾಯ್ ಮತ್ತು ಬ್ರಿಟಿಷರ ಅಧಿಕಾರ ಪ್ರಯೋಗದಿಂದಾಗಿ ಅದನ್ನು ನಿಲ್ಲಿಸಲಾಯಿತು. ಆದರೂ 1996ರಲ್ಲಿ ಅಂತಹ ಪ್ರಕರಣವೊಂದು ಮತ್ತೆ ಪುನರಾವತರ್ಿತವಾಯಿತು. ಭಾರತದಲ್ಲಿ ಸ್ತ್ರೀಯು ವಿಧವೆಯಾದರೆ ಮುಂದೆ ಸಾಗಲು ಕೆಲವು ಸ್ತ್ರೀಯರೇ ಮುಂದೆಬರುತ್ತಾರೆ.
ಇನ್ನು ಸ್ತ್ರೀಯರಿಗೆ ಬಾಲ್ಯ ವಿವಾಹವಾದರೆ ಅವರ ಸ್ಥಿತಿಯು ಇನ್ನೂ ಕರುಣಾಜನಕವಾಗಿತ್ತು. ಏಕೆಂದರೆ ಅವರಲ್ಲಿ ಹಲವರು ಬಾಲ್ಯದಲ್ಲಿಯೇ ವಿಧವೆಯರಾಗುತ್ತಿದ್ದರು. ಬಾಲ್ಯ ವಿವಾಹವು ಗ್ರಾಮೀಣ ಕಡೆಗಳಲ್ಲಿ ಇರುವ ಇನ್ನೊಂದು ಅನಿಷ್ಟ ಪದ್ಧತಿಯಾಗಿದೆ. ಒಬ್ಬಾಕೆ ಹೀಗೆ ಪ್ರಲಾಪಿಸುತ್ತಾಳೆ: ನನಗೆ ಐದನೆಯ ವರ್ಷಕ್ಕೆ ವಿವಾಹ ಮಾಡಲಾಯಿತು. ನನ್ನ ಗಂಡನನ್ನು ನಾನು ಇಂದಿಗೂ ನೋಡಲಿಲ್ಲ. ಆಗ ಆತನಿಗೆ 13 ವರ್ಷವಾಗಿತ್ತು. ಆತನು ವಿವಾಹವಾದ ತಿಂಗಳ ನಂತರ ಸತ್ತುಹೋದನು. ಈಗ ನಾನು ವಿಧವೆಯಾಗಿದ್ದೇನೆ. ವಿಶ್ವ ಬ್ಯಾಂಕ್ನ ಪ್ರಕಾರ ಭಾರತದ 65%ರಷ್ಟು ಸ್ತ್ರೀಯರು 60ನೇ ವಯಸ್ಸಿಗೆ ವಿಧವೆಯಾಗುತ್ತಾರೆ. ಸ್ತ್ರೀಯು 70 ವರ್ಷ ವಯಸ್ಸಿಗೆ ಹೋಗುವಷ್ಟರಲ್ಲಿ 50%ರಷ್ಟು ವಿಧವೆಯಾಗುತ್ತಿದ್ದಾರೆ. ಂಟಟ ಟಿಜಚಿ ಜಜಟಠಛಿಡಿಚಿಣಛಿ ತಿಠಟಜಟಿ ಚಿಠಛಿಚಿಣಠಟಿ ಸುದ್ದಿ ನೀಡಿದ್ದು ಏನೆಂದರೆ ಸ್ತ್ರೀಯ ಗುರುತು ಈಗಲೂ ಸಹಾ ಪುರುಷನ ಅನುಬಂಧದಿಂದಲೇ ನಿರ್ಧರಿಸಲಾಗುತ್ತದೆ. ವಿಧವೆತನವು ಗಂಡನಿಗೆ ಕಳೆದುಕೊಂಡವಳು ಎಂಬುದಕ್ಕಿಂತ ಹೆಚ್ಚಿನ ತೊಡಕುವುಳ್ಳದ್ದಾಗಿದೆ.
ಈ ರೀತಿಯ ಸನ್ನಿವೇಶಗಳು ನೆರೆಹೊರೆಯ ದೇಶಗಳಲ್ಲೂ ಇವೆ. ಅಲ್ಲೂ ಸಹಾ ಸ್ಥಿತಿಯು ಉತ್ತಮವೇನೂ ಆಗಿಲ್ಲ. ದೀರ್ಘಕಾಲದಿಂದಲೂ ಅಲ್ಲಿನ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿಯೇ ಕಾಣುತ್ತಿದ್ದಾರೆ. ಹುಡುಗಿಯನ್ನು ನಾವು ಕೇವಲ ಮನೆಗೆಲಸದಲ್ಲಿ ಮಾತ್ರ ಕಾಣುತ್ತಿದ್ದೇವೆ. ಸ್ತ್ರೀಯು ಸಮಾಜದ ನಾನಾ ಪದ್ಧತಿಗಳ ಮೂಲಕ ಜೀವಿಸುತ್ತಿದ್ದಾಳೆ. ಅವು ಆಕೆಯ ವಿರುದ್ಧವೇ ಪಕ್ಷಪಾತವನ್ನು ಉಂಟುಮಾಡಿ ಬಲಪಡಿಸುತ್ತದೆ. ಆಕೆಯು ಆಥರ್ಿಕ ಮತ್ತು ನೈತಿಕ ಹೊಣೆಗಾರಿಕೆ ಅರಿತು ಜೀವಿಸುತ್ತಿದ್ದಾಳೆ. ಆದರೂ ಆರೋಗ್ಯದಲ್ಲಿ, ಪರಿಶ್ರಮದಲ್ಲಿ, ಮಕ್ಕಳ ವಿದ್ಯಾಭ್ಯಾಸ ಮಾಡಿಸುವಲ್ಲಿ ಮತ್ತು ಉತ್ತಮ ತಾಯಿಯಾಗುವಲ್ಲಿ ಆಕೆಗೆ ಅಪಾರ ನಿರೀಕ್ಷೆಯಿದೆ. ಬಹಳಷ್ಟು ಚಿಕ್ಕ ಹುಡುಗರು ತಮ್ಮನ್ನು ತಮ್ಮ ಸೋದರಿಯರಿಗಿಂತ ಚೆನ್ನಾಗಿ ಸಾಕುವುದನ್ನು ಕಂಡು ತಮ್ಮ ಸೋದರಿಯರನ್ನು ತಮಗಿಂತ ಕೆಳಮಟ್ಟದವರು ಎಂದು ಭಾವಿಸುತ್ತಾರೆ. ಇದೇ ನಂಬಿಕೆಗಳು ಹಲವಾರು ಸಾಮಾಜಿಕ ಸದಸ್ಯರಲ್ಲಿ ಮಾತ್ರವಲ್ಲದೆ ಸ್ತ್ರೀಯರಲ್ಲೂ ಮನೆಮಾಡಿವೆ.
ಬಹುಶಃ ಸ್ತ್ರೀಯರು ಹೀಗಾಗಲು ಕಾರಣವೇನೆಂದರೆ ಬೆಂಬಲದ ಕೊರತೆ ಮತ್ತು ಹುಡುಗಿಯರಿಗೆ ಮೊದಲಿನಿಂದಲೂ ಇರುವ ನಿರ್ಬಂಧಗಳೇ ಆಗಿವೆ. ಅವರು ಏನಾದರೂ ಮಾಡಲು ಹೊರಟರೆ ಪ್ರೋತ್ಸಾಹ ದೊರೆಯದೆ ಸಂಪ್ರದಾಯದ ಮನೆಗೆಲಸದ, ಮಕ್ಕಳ, ಅಡುಗೆಯ, ಸ್ವಚ್ಛಗೊಳಿಸುವ ಈ ಕೆಲಸಗಳನ್ನೇ ಮಾಡುತ್ತ ಉತ್ತಮ ಗೃಹಿಣಿಯರಾಗುವ ಶಿಕ್ಷಣವನ್ನೇ ಮನೆಯಲ್ಲಿ ನೀಡಲಾಗುತ್ತಿದೆ. ರಾವಲ್ಪಿಂಡಿಯ 16ರ ಹುಡುಗಿಯು ಹೇಳಿದ್ದು ಹೀಗೆ: ನಮ್ಮ ಸಮಾಜವು ಹುಡುಗಿಯರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಇಲ್ಲಿ ಹುಡುಗಿಯರಿಗೆ ವಿದ್ಯಾಭ್ಯಾಸ ಮಾಡಿಸುವುದಿಲ್ಲ. ಏಕೆಂದರೆ ಹುಡುಗಿಯರು ಮಾವನ ಮನೆಗೆ ಸೇರುವವಳು, ನಮ್ಮವರಲ್ಲ ಎಂಬ ಭಾವನೆ. ಅವರಿಗೆ ಮಾಡುವ ಖಚರ್ು ವ್ಯರ್ಥ ಎನ್ನುತ್ತಾರೆ. ಹೆಣ್ಣು ಮಕ್ಕಳು ಕಿರಿಯ ವಯಸ್ಸಿನಲ್ಲಿಯೇ ಗಂಡನ ಮನೆಗೆ ಹೋಗಿ ಸೇರುತ್ತಾರೆ. ಅದು ಕೆಲವು ಮಕ್ಕಳು 13ರ ವಯಸ್ಸಿನಲ್ಲೇ ಗಂಡನ ಮನೆ ಸೇರುತ್ತಾರೆ. ಅವರು ಉಳಿದ ಜೀವನವೆಲ್ಲಾ ಮಾವನ ಮನೆಯಲ್ಲೇ ಕಳೆಯುತ್ತಾ ಮಕ್ಕಳನ್ನು ಹೆರುತ್ತಾ, ಬೆಳೆಸುತ್ತಾ ಗಂಡನ ಕುಟುಂಬ ರೇಖೆಯನ್ನು ಬಲಿಷ್ಠಗೊಳಿಸುತ್ತಾಳೆ.
ನಾವು ಈ ಬಗೆಯ ಚಿಂತನೆಯನ್ನು ಅಳಿಸಬೇಕಾಗಿದೆ ಮತ್ತು ಶಿಕ್ಷಣವನ್ನು ಕಡ್ಡಾಯಗೊಳಿಸಬೇಕಾಗಿದೆ ಹಾಗು ಮುಕ್ತಗೊಳಿಸಬೇಕಾಗಿದೆ. ಹೀಗಾಗಿ ಅದು ವಿವಾದವಾಗಬಾರದು. ಒಬ್ಬ ಹುಡುಗಿ ಹೀಗೆ ಹೇಳುತ್ತಾಳೆ ಹುಡುಗಿಯರು ಸಹ ಉದ್ಯೋಗ ಮಾಡಲು ಸಮರ್ಥರು. ಇದನ್ನು ಯಾರೂ ಅಲ್ಲಗಳೆಯಲಾರರು. ಬೇರೆ ಹುಡುಗಿಯರೊಂದಿಗೆ ಉದ್ಯೋಗದಲ್ಲಿದ್ದರೆ ಪೋಷಕರು ವಿರೋಧಪಡಿಸುವುದಿಲ್ಲ. ಕೆಲವೊಮ್ಮೆ ನಾನು ಹುಡುಗಿಯಾಗಿ ಹುಟ್ಟಿದ್ದಕ್ಕೆ ಪಶ್ಚಾತ್ತಾಪಪಟ್ಟಿದ್ದೇನೆ. ಕೆಲವೊಮ್ಮೆ ನನಗೆ ಏನು ಮಾಡಲು ಬಿಡದಿದ್ದಾಗ ನಾನು ರೂಮಿಗೆ ಹೋಗಿ ಅಳುತ್ತ ದೇವರಲ್ಲಿ ನನ್ನನ್ನು ಹುಡುಗನನ್ನಾಗಿಸು ಎಂದು ಪ್ರಾಥರ್ಿಸಿದೆ.
ನಾವು ಇಲ್ಲಿ ಕೇವಲ ಭಾರತದ ಉದಾಹರಣೆಗಳನ್ನು ನೀಡಿದ್ದರೂ ಇದೇಬಗೆಯ ಘಟನೆಗಳನ್ನು ನಾವು ಚೀನಾದಲ್ಲಿ, ಮಧ್ಯ ಪೂರ್ವದಲ್ಲಿ, ಆಫ್ರಿಕಾದಲ್ಲಿ ಹಾಗು ಯೂರೋಪ್, ಅಮೆರಿಕಾದಲ್ಲೂ ಕಂಡಿದ್ದೇವೆ. ಈಗೀಗ ಹೆಣ್ಣು ಮಗುವಿನ ಯೋಜನೆಯು ಹಲವು ದೇಶದಲ್ಲಿ ನಿಧಾನವಾಗಿ ಬದಲಾವಣೆ ಕಾಣುತ್ತಿದೆ. ಹುಡುಗಿಯ ಸಮಸ್ಯೆಗಳ ಜಾಗೃತಿಯನ್ನು ಅವರು ಎದುರಿಸುತ್ತಿರುವ ಪಕ್ಷಪಾತವನ್ನು ವಿವರಿಸುತ್ತಿದ್ದಾರೆ. ಈಗ ಸರ್ವರಿಗೂ ಶಿಕ್ಷಣ ಅಭಿಯಾನ ಆರಂಭವಾಗಿದೆ. ಹೀಗಾಗಿ ಇಂದು ಬಹುತೇಕ ಕಡೆ ಅವರು ವಿದ್ಯಾಭ್ಯಾಸ ಹೊಂದಿದ್ದಾರೆ. ಇದರಲ್ಲಿ ಅನಕ್ಷರಸ್ಥ ತಾಯಿಯ ಪೋಷಣೆಯ ಪಾಲು ಇದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರ ಬದುಕು ನಾಳೆ ನಮಗಿಂತ ಉತ್ತಮವಾದೀತು ಎಂಬ ನಂಬಿಕೆ ಅವರಲ್ಲಿದೆ.
ಹಲವಾರು ಸಮಾಜಗಳಲ್ಲಿ ಸ್ತ್ರೀಯ ಸ್ಥಾನವು ಮನೆಗೆ ಸೀಮಿತವಾಗಿದೆ. ವಿವಾಹಿತ ಸ್ತ್ರೀಯು ಉತ್ತಮ ಪತ್ನಿಯಾಗಿಯೂ ಮತ್ತು ಉತ್ತಮ ತಾಯಿಯಾಗುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾಳೆ. ಸ್ತ್ರೀಯ ಸ್ವೇಚ್ಛಾಚಾರ ಎಂಬಂತಹ ವಿಷಯವೇನಿಲ್ಲ. ಕೆಲವು ಮುಂದುವರೆದ ಸಮಾಜದಲ್ಲೂ ಸ್ತ್ರೀಯು ಅಪಮಾನಿತಳಾಗುತ್ತಿದ್ದಾಳೆ. ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲೇ ಅವರು ಪುರುಷರೊಂದಿಗೆ ಕೂರುವುದು ಇರಲಿ, ಅವರ ದೃಷ್ಟಿಯಿಂದಲೇ ದೂರವಿರಿಸುತ್ತಾರೆ. ಅಥವಾ ಹಿಂದೆ ಕುಳ್ಳರಿಸುತ್ತಾರೆ. ಯಾವಾಗ ಸ್ತ್ರೀಯರನ್ನು ಹಿಂದಿನ ಹಾಲಿನಲ್ಲಿ ಅಥವಾ ಕೋಣೆಯಲ್ಲಿ ಕುಳ್ಳರಿಸುತ್ತಿದ್ದಾರೋ ಅದು ಅವರು ಹಿಂಬದಿಯಲ್ಲೇ ತಮ್ಮ ಪಾತ್ರ ನಿರ್ವಹಿಸಲಿ ಜೊತೆಯಲ್ಲಲ್ಲ ಎಂದು ಸೂಕ್ಷ್ಮ ಸೂಚನೆಯಾಗಿದೆಯೇ? ಕೆಲವರು ನಂಬುವುದು ಏನೆಂದರೆ ಸ್ತ್ರೀಯರು ಪಾಪಕ್ಕೆ ಬಾಗುವವರು ಆದ್ದರಿಂದ ಅವರು ಮನೆಗೆಲಸದಲ್ಲಿ ಇರಿಸಿದಾಗ ಅವರು ತಮ್ಮ ಸ್ವಾಭಾವಿಕ ಪಾಪ ಭಾವನೆಯನ್ನು ಮರೆಯುತ್ತಾರೆ.




4.10 ಪರರಿಗೆ ದೂಷಿಸಬೇಡಿ
ನೀವು ನಿಮ್ಮ ಮನಸ್ಸನ್ನು ಯೋಗ್ಯವಾಗಿ ರಕ್ಷಿಸಿದರೆ, ಬಾಹ್ಯ ಆಗುಹೋಗುಗಳು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವಾಗ ವಿಷಯಗಳು ನಿಮಗೆ ವ್ಯತಿರಿಕ್ತವಾಗಿ ಕಾರ್ಯ ಮಾಡಿದಾಗ ನೀವು ಸನ್ನಿವೇಶಗಳನ್ನು ದೂರಬೇಡಿ. ನೀವು ದುರಾದೃಷ್ಟವಂತರೆಂದು ಯೋಚಿಸಲೇಬೇಡಿ. ಅಥವಾ ವಿಧಿಯ ಶೋಷಿತ ಎಂದು ಭಾವಿಸಬೇಡಿ. ಅಥವಾ ಯಾರೋ ನೀಡಿದ ಶಾಪದ ಫಲ ಎಂದು ಕೊರಗಬೇಡಿ. ಯಾವ ಕಾರಣಗಳನ್ನು ನೀವು ನೀಡುವಿರೋ ಆದರೆ ನಿಮ್ಮ ಕಾರ್ಯಗಳ ಹೊಣೆಗಾರಿಕೆಯಿಂದ ನೀವು ದೂರ ಸರಿಯದಿರಿ. ಸಿಡುಕುಗೊಳ್ಳದೆ, ಕುಗ್ಗದೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಕಡುಕಷ್ಟಕರ ಸನ್ನಿವೇಶಗಳಲ್ಲೂ ಉತ್ಸಾಹದಿಂದ ಕಾರ್ಯ ಮಾಡಲು ಪ್ರಯತ್ನಿಸಿರಿ.
ಎಂಥಹ ಬದಲಾವಣೆಯನ್ನೇ ಎದುರಿಸಲು ಧೈರ್ಯತಾಳಿರಿ. ಆ ಬದಲಾವಣೆಯು ಸ್ವಾಭಾವಿಕವೇ ಆಗಲಿ ಅಥವಾ ಅಗತ್ಯವೇ ಆಗಲಿ ಎದುರಿಸಿರಿ. ಯಾವುದನ್ನು ನೀವು ತಡೆಯಲಾರಿರೋ ಅದನ್ನು ಒಪ್ಪುವ ಧೈರ್ಯವಂತರಾಗಿ. ಪ್ರತಿಯೊಬ್ಬರನ್ನೂ ಅಪ್ಪಳಿಸುವ, ಅನಿಶ್ಚಿತ ಲೋಕ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನಿಗಳಾಗಿ. ಆದ್ದರಿಂದಾಗಿ ಹತಾಶೆ ನಿರಾಶೆಗಳನ್ನು ಮತ್ತು ಸಮಸ್ಯೆಗಳನ್ನು ಯಾವುದೇ ರೀತಿಯಲ್ಲಿ ಕುಗ್ಗದೆ ಎದುರಿಸುವಂತಹ ನಿಭರ್ೀತಿಯನ್ನು ವೃದ್ಧಿಸಿ, ಕಷ್ಟಗಳು ನಮ್ಮ ಜೀವನದಲ್ಲಿ ಸಾಮಾನ್ಯವಾಗಿವೆ. ನಾವು ಅವುಗಳನ್ನು ಧೈರ್ಯವಾಗಿ ಎದುರಿಸಬೇಕಾಗಿದೆ. ಯಾವಾಗ ನೀವು ಸಮಸ್ಯೆಗಳನ್ನು ಇನ್ನಷ್ಟು ಸಮಸ್ಯೆ ಸೃಷ್ಟಿಮಾಡದೆ ದಾಟುವುದನ್ನು ತಿಳಿಯುವಿರೋ ಆಗ ನೀವು ನಿಜಕ್ಕೂ ಪ್ರಜ್ಞಾವಂತರೇ ಸರಿ.
ಯಾರು ಪರರಿಗೆ ಸೇವೆ ಮಾಡಲು ಯತ್ನಿಸುವರೋ ಅವರು ಸಹಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಸೇವೆ ಮಾಡದವರಿಗಿಂತ ಹೆಚ್ಚು ನಿಂದೆಗೆ ಗುರಿಯಾಗುತ್ತಾರೆ. ಆದ್ದರಿಂದ ನೀವು ಧೈರ್ಯಗೆಡದಿರಿ. ಬದಲಾಗಿ ನಿಸ್ವಾರ್ಥ ಸೇವೆಯಿಂದಾಗಿ ನಿಶ್ಚಿತವಾಗಿಯು ಸುಖದ ಪರಿಣಾಮ ತಂದೇ ತರುತ್ತದೆ ಎಂದು ಅರ್ಥಮಾಡಿಕೊಳ್ಳಿ. ನೀವು ಪರರಿಗೆ ಸೇವೆ ಸಲ್ಲಿಸುವಾಗ ನಿಮ್ಮಲ್ಲಿ ಜ್ಞಾನ ಮತ್ತು ತಿಳುವಳಿಕೆಗೆ ಇರುವುದು ಅತ್ಯವಶ್ಯಕವಾಗಿದೆ.
ಬ್ರಿಟಿಷ್ನ ತತ್ವಜ್ಞಾನಿಯಾದ ಬಟ್ಯರ್ಾಂಡ್ ರಸೆಲ್ ಹೀಗೆ ಹೇಳುತ್ತಾರೆ: ಜ್ಞಾನವಿಲ್ಲದ ಪ್ರೀತಿ ಮತ್ತು ಪ್ರೀತಿಯಿಲ್ಲದ ಜ್ಞಾನ ಎಂದಿಗೂ ಉತ್ತಮ ಜೀವನವನ್ನು ನೀಡದು.




4.11 ಮಾನವನ ಶ್ರೇಷ್ಠತೆ
ಎಲ್ಲಾ ಜೀವಿಗಳ ನಡುವೆ ಮಾನವನು ಅದ್ವಿತೀಯ ಜೀವಿಯಾಗಿ ನಿಲ್ಲುತ್ತಾನೆ. ಅದೇವೇಳೆಯಲ್ಲಿ ಆತನ ಲಕ್ಷಣಗಳು, ಕ್ರಿಯೆಗಳು ಮತ್ತು ವರ್ತನೆಗಳು ಇವೆಲ್ಲವನ್ನೂ ಪ್ರಾಣಿಗಳ ಲೋಕದಲ್ಲಿರುವಂತೆ ವಗರ್ಿಕರಿಸಲಾಗಿದೆ. ಆದರೂ ಮಾನವನಾಗಿ ಮಿಕ್ಕ ಜೀವಿಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತಾನೆ. ನಿಜ, ವಿಕಾಸವಾದದ ವಗರ್ಿಕರಣದಲ್ಲಿ ಆತನು ಪ್ರಾಣಿಗಳ ಲೋಕದಲ್ಲಿ ಇರುವಂತೆಯೇ ಎಣಿಸಲಾಗುತ್ತದೆ. ಆಗಾಗ್ಗೆ ಮಾನವನು ಸಹಾ ಪ್ರಾಣಿಯಂತೆ ವತರ್ಿಸುತ್ತಾನೆಂಬುದೂ ಸಹ ನಿಜವೇ ಅಲ್ಲವೇ?
ಹಾಗಿದ್ದರೂ ಮಾನವನು ಪ್ರಾಣಿಗಿಂತ ಶ್ರೇಷ್ಠವೇ ಆಗಿದ್ದಾನೆ. ಆತನು ಮಾನವ ಆಗಿದ್ದಾನೆ, ಅಂದರೆ ದಯೆಯುಳ್ಳವ ಆಗಬಲ್ಲ, ಕೋಮಲವಾಗಬಲ್ಲ, ಪ್ರೀತಿಯಿಂದ ಕೂಡಿರಬಲ್ಲ ಮತ್ತು ಬುದ್ಧಿವಂತನಾಗಿರಬಲ್ಲನು. ಮಾನವನಲ್ಲಿ ಮಾತ್ರ ಸ್ವ-ಅರಿವುಳ್ಳಂತಹ ಮನಸ್ಸು ಉನ್ನತಮಟ್ಟದಲ್ಲಿ ಕಾರ್ಯವಹಿಸುತ್ತದೆ. ಪ್ರಾಣಿಗಳಿಗೆ ಹೋಲಿಸಿದರೆ ಯಾವುದು ಒಳ್ಳೆಯದು ಹಾಗು ಯಾವುದು ಕೆಟ್ಟದ್ದು, ಸರಿ ಮತ್ತು ತಪ್ಪು ಯಾವುದು? ನಿರ್ಣಯಿಸುವ ಸಾಮಥ್ರ್ಯ, ಯೋಗ್ಯ ಮತ್ತು ಒಳ್ಳೆಯತನದ ಆಯ್ಕೆ, ತಪ್ಪನ್ನು ಹಾಗು ಪಾಪವನ್ನು ತಿರಸ್ಕರಿಸುವಿಕೆ. ಇವೆಲ್ಲ ಮಾನವನಲ್ಲಿ ಮಾತ್ರ ಇರುತ್ತದೆ. ಈ ಬಗೆಯ ಒಳಿತನ್ನು ಮತ್ತು ಸರಿಯನ್ನು ಆಯ್ಕೆ ಮಾಡುವಿಕೆ, ಅದರಂತೆ ನಡೆಯುವಿಕೆ ಕೇವಲ ಮಾನವನಲ್ಲಿ ಮಾತ್ರ ಕಾಣಬಹುದು. ಇದನ್ನು ಧಮ್ಮದ ಪ್ರಜ್ಞೆ ಎನ್ನುವೆವು, ಶೀಲದ ಪ್ರಜ್ಞೆ ಎನ್ನುವೆವು. ಅದನ್ನು ಜಗತ್ತಿನ ಎಲ್ಲಾ ಶ್ರೇಷ್ಠ ಧರ್ಮಗಳು ಉನ್ನತವಾಗಿ ಹೇಳಿವೆ.
ಈ ಧಮ್ಮದ ಆಧಾರದ ಮೇಲೆಯೇ ಧರ್ಮವು ಹಾಗೆಯೇ ಶೀಲದ ಜೀವನವು ರಚಿತವಾಗಿದೆ. ಯಾವಾಗ ಅದರ ಮೌಲ್ಯವನ್ನು ಗುರುತಿಸಿ ವೈಯುಕ್ತಿಕವಾಗಿ ಹಾಗು ಸಾಮಾಜಿಕವಾಗಿ ಅನ್ವಯಿಸುತ್ತೇವೆಯೋ ಆಗ ಸಾಮಾಜಿಕ ಜೀವನವೂ ಸಹಾ ಉದಾತ್ತವಾಗುತ್ತದೆ. ಧರ್ಮವೇ ಸಮಾಜವನ್ನು ಜೊತೆಗೆ ಹಿಡಿದಿರುತ್ತದೆ. ಅದರ ಹೊರತಾಗಿ ಯಾವ ಸಮಾಜವೂ ಜೀವಿಸಲಾರದು ಮತ್ತು ಒಂದು ದಿನವೂ ಕಾರ್ಯ ನಿರ್ವಹಿಸದು. ಧರ್ಮ, ಪ್ರಜ್ಞೆ ಇರುವುದರಿಂದಲೇ ಆತನಿಗೆ ಸಾಮಾಜಿಕ ಮತ್ತು ಪರಮಾರ್ಥದ ಎಲ್ಲಾ ಉನ್ನತಿಯು ಆತನಿಗೆ ಸಾಧ್ಯವಾಗಿದೆ. ಈ ವಿಶಿಷ್ಟ ಸದ್ಗುಣವೇ ಆತನನ್ನು ಮಿಕ್ಕೆಲ್ಲಾ ಪ್ರಾಣಿಗಳಿಗಿಂತ ವಿಭಿನ್ನವಾಗಿಸಿದೆ.
ಆಹಾರದ, ನಿದ್ದೆಯ, ಮತ್ತಿತರ ಭೌತಿಕ ಅವಶ್ಯಕತೆಗಳಲ್ಲಿ ಮಾನವ ಪ್ರಾಣಿಗಳ ಸರಿಸಮಾನವಾಗಿದ್ದಾನೆ. ಆದರೆ ಧಮ್ಮ ಪ್ರಜ್ಞೆಗೆ ಹೋಲಿಸಿದಾಗ ಹಾಗೆಯೇ ಉದಾತ್ತ ಜೀವನಕ್ಕೆ ಹೋಲಿಸಿದಾಗ ಆತನು ಪ್ರಾಣಿಗಳಿಗಿಂತ ಶ್ರೇಷ್ಠನೇ ಆಗಿದ್ದಾನೆ. ಆದ್ದರಿಂದಾಗಿ ಧಮ್ಮವೇ ಆತನನ್ನು ಮಾನವನನ್ನಾಗಿಸಿವೆ. ಧಮ್ಮದ ಹೊರತು ಕೇವಲ ಪ್ರಾಣಿ ಅಥವಾ ಪ್ರಾಣಿಗಿಂತ ನೀಚನಾಗಿರುತ್ತಾನೆ.
ಆದ್ದರಿಂದ ಅಂತಹ ವಿಶೇಷ ಸೌಲಭ್ಯಕರ ಮಾನವ ಜನ್ಮವು ಖಂಡಿತವಾಗಿಯೂ ವ್ಯರ್ಥವಾಗಬಾರದು. ಈ ಜೀವನವನ್ನು ಶ್ರೇಷ್ಠತೆಗೂ ಅತ್ಯುತ್ತಮ ಸೇವೆಗೆ ಮೀಸಲಾಗಿಡಬೇಕು. ಅಂತಹದೆಲ್ಲವನ್ನು ಮಾಡಲೇಬೇಕೆನ್ನುವ ತುಡಿತದಿಂದಲೇ ಸಾಧ್ಯವಾಗುವುದು. ಇಂತಹ ಶ್ರೇಷ್ಠ ಹಾಗು ನಿಜ ಉದ್ದೇಶವನ್ನು ಮರೆತು ಮಾನವ ಪ್ರಾಪಂಚಿಕ ಸುಖಗಳತ್ತ ಓಡುವುದು ನಿಜಕ್ಕೂ ವಿಷಾದನೀಯವಾಗಿದೆ. ಒಬ್ಬ ಹಿಂದು ತತ್ವಜ್ಞಾನಿ ಗಮನಾರ್ಹವಾಗಿ ಹೀಗೆ ಟೀಕಿಸಿದ್ದಾನೆ: ಮಾನವನಿಗಿಂತ ದೊಡ್ಡ ಮುರ್ಖನು ಬೇರೆ ಯಾರಿದ್ದಾರೆ, ಆತನು ಮಾನವ ಶರೀರ ಹೊಂದಿದ್ದರೂ ಸಹಾ ಈ ಜನ್ಮದಲ್ಲೇ ನಿಜ ವಿಮುಕ್ತಿಯನ್ನು ಸಾಧಿಸಲು ಅಲಕ್ಷಿಸುತ್ತಿದ್ದಾನೆ? ಮಾನವನು ಪರಿಪೂರ್ಣನಾಗಬೇಕು ಮತ್ತು ಆತನು ಉದಾತ್ತತೆಯನ್ನು ತನ್ನಲ್ಲಿ ಸ್ಥಾಪಿಸಬೇಕು. ಇದೇ ಎಲ್ಲಾ ಧರ್ಮಗಳ ಉದ್ದೇಶವಾಗಿದೆ, ಎಲ್ಲಾ ಪರಮಾರ್ಥ ಸಾಧನೆಯ ಗುರಿಯೂ ಆಗಿದೆ.





4.12 ಮಾನವನ ಸ್ವರೂಪ
ಶಾರೀರಿಕ ಆನಂದಗಳಾಗಲಿ ಮತ್ತು ಭೌತಿಕ ಸುಖಗಳಾಗಲಿ ಅವು ಇರುವಂತಹುದಲ್ಲ, ಓಡಿಹೋಗುವಂತಹುದು. ಅವು ಬರುತ್ತವೆ ಮತ್ತು ಹೋಗುತ್ತವೆ. ಪಯರ್ಾಯವಾಗಿ ಆನಂದ ಮತ್ತು ದುಃಖವನ್ನು ತರುತ್ತವೆ. ಯಾವಾಗ ಆನಂದವು ಬರುವುದೋ, ಮಾನವ ಹಿಗ್ಗುತ್ತಾನೆ ಮತ್ತು ಯಾವಾಗ ದುಃಖವು ಬರುವುದೋ ಆತನು ಕುಗ್ಗುತ್ತಾನೆ. ಜಗತ್ತಿನ ಎಲ್ಲಾ ಭರವಸೆಗಳು ಮತ್ತು ಆನಂದಗಳು ಕ್ಷಣಿಕವಾಗಿವೆ. ಅದ್ಯಾವುದೂ ನಿರಂತರವಾಗಿ ಶಾಂತಿಯನ್ನಾಗಲಿ ಅಥವಾ ಸುಖವನ್ನಾಗಲಿ ಮಾನವನಿಗೆ ನೀಡಲಾರವು. ಅನಿಶ್ಚತತೆಯು ಈ ಜಗತ್ತಿನ ಲಕ್ಷಣವಾಗಿದೆ. ಇಡೀ ಸಂಪೂರ್ಣ ಸೃಷ್ಟಿಯೇ ನಿರಂತರವಾಗಿ ಬದಲಾವಣೆ ಹೊಂದುತ್ತಿದೆ. ಪರಿವರ್ತನೆಯಲ್ಲೇ ಸ್ಥಿರವಾಗಿದೆ, ಪ್ರತಿಯೊಂದು ಜನ್ಮಕ್ಕೆ, ಬೆಳವಣಿಗೆಗೆ, ಕೊಳಯುವಿಕೆಗೆ, ಕರಗುವಿಕೆಗೆ ಮತ್ತು ಮರಣಕ್ಕೆ ಗುರಿಯಾಗಿದೆ. ಈ ನಿಷ್ಠೂರ ಪರಿವರ್ತನೆಗಳಿಂದ ಜಗತ್ತಿನಲ್ಲಿ ಯಾವುದು ಪಾರಾಗಲಾರದು.
ಸತ್ಯವನ್ನು ಅನ್ವೇಷಿಸಲು ಯಾವುದು ಸ್ವ-ಸಾಕ್ಷಾತ್ಕರವೋ ಮತ್ತು ಅಮರವೋ ಅದನ್ನು ಅರಿಯುವುದಕ್ಕಾಗಿ ಮಾನವನು ವಾಸ್ತವವಲ್ಲದ ವಿಷಯಗಳಿಂದ ದೂರ ಹೋಗಬೇಕಾಗುತ್ತದೆ. ಬೆನ್ನನ್ನು ತಿರುಗಿಸಬೇಕಾಗುತ್ತದೆ. ಯಾವಾಗ ಆತನು ಪ್ರಪಂಚದ ಮತ್ತು ಅದರ ವಿಷಯಗಳತ್ತ ಓಡುವುದು ವ್ಯರ್ಥವೆಂದು ತಿಳಿಯುತ್ತಾನೋ ಆಗ ಆತನು ಅವುಗಳಿಂದ ವಿಮುಖನಾಗುತ್ತಾನೆ. ಆಗ ಆತನು ತ್ಯಾಗಕ್ಕೆ ಶರಣಾಗತನಾಗುತ್ತಾನೆ. ತ್ಯಾಗಕ್ಕೆ ಆಶ್ರಯ ಹೊಂದುತ್ತಾನೆ. ಹೀಗೆ ಆತನು ಪ್ರಪಂಚದಿಂದ ವಿಮುಖನಾಗಿ ಆಂತರ್ಯದಲ್ಲಿ ಅನ್ವೇಷಣೆ ಸಾಗಿಸುತ್ತಾನೆ. ಆತನು ಸತ್ಯದ ಸತ್ಯತೆ ಮತ್ತು ಬೆಳಕಿನ ಬೆಳಕಿನೆಡೆಗೆ ತಲುಪಿದಾಗ ಆತನ ಯಾನವು ಅಂತ್ಯವಾಗುತ್ತದೆ.
ಈ ಪ್ರಮುಖ ತಿರುವು ಅಪ್ಪಟ ಪರಮಾರ್ಥ ಪರಿಶ್ರಮದ ಆರಂಭವೆಂದು ಗುರುತು ಹಾಕುತ್ತದೆ. ಇದರ ಹೊರತಾಗಿ ಪ್ರತಿಯೊಂದು ಸಹಾ ಧರ್ಮದ ಹೆಸರಿನಲ್ಲಿ ಮಗುವಿನ ಆಟವಾಗಿದೆ. ಆಟದ ಸಾಮಗ್ರಿಗಳು ಮಗುವಿಗಂತೂ ಬೇಕೇ ಬೇಕು. ಆದರೆ ಅದು ನಿದರ್ಿಷ್ಟ ಅವಧಿಯವರೆಗೆ ಮಾತ್ರ. ನಂತರದ ಹಂತ ತಲುಪಿದ ಬಳಿಕ ಅವೆಲ್ಲ ಬೇಕಾಗಿರುವುದಿಲ್ಲ.
ಧಮ್ಮ ಜೀವನವು ಒಂದು ಅದ್ಭುತ ಸಾಹಸದಂತೆ, ಸಂಶಯ ಇದ್ದ ಸಂದರ್ಭದಲ್ಲಿ ಅದು ಉತ್ಸಾಹಯುತ ಪರಿಶ್ರಮವನ್ನು ಒತ್ತಾಯಿಸುತ್ತದೆ. ಮಾನವನಿಗೆ ಸಂಶಯಪಡಲು ಹಕ್ಕಿದೆ ಮತ್ತು ಸಮಂಜಸವು ಸಹಾ. ದುರ್ಬಲರು ಮತ್ತು ಬಲಹೀನ ಮನಸ್ಕರು ಎಂದಿಗೂ ಧಮ್ಮಪಥದಲ್ಲಿ ಹೆಜ್ಜೆ ಹಾಕಲಾರರು. ದುರ್ಬಲರಿಂದ ಎಂದಿಗೂ ಸ್ವಯಂವನ್ನು ಅರಿಯಲಾಗುವುದಿಲ್ಲ. ಧಮ್ಮವು ಮಾನವನಿಗೆ ಉನ್ನತವಾದ ಸವಾಲನ್ನು ಪ್ರಸ್ತಾಪ ಮಾಡುತ್ತಿದೆ. ಅದು ಆತನಿಗೆ ಅತಿಯಾದ ಅಂಟುವಿಕೆಯನ್ನು ತ್ಯಜಿಸಲು ಸವಾಲು ಹಾಕುತ್ತಿದೆ.
ಬೇರೆ ಯಾವ ವಿಚಾರವು ಮಾನವನನ್ನು ಹಿಂದಕ್ಕೆ ಎಳೆದುಹಿಡಿಯಲಾರದು. ಎಲ್ಲಾ ಧಮ್ಮಗಳು ಮಾನವನಿಗೆ ಧಮ್ಮದ ಹಾದಿಯಲ್ಲಿ ಹೋಗುವಾಗ ಎದುರಿಸಬೇಕಾದ ಅಪಾಯಗಳು ಮತ್ತು ಸೋಗಿನ ಮುಚ್ಚಿದ ಗುಂಡಿಗಳನ್ನು ಎಚ್ಚರಿಸಿವೆ. ಅದರಿಂದಾಗಿ ಆತನು ಗುಂಡಿಗಳಲ್ಲಿ ಬೀಳದಂತೆ ಮತ್ತು ಅಪಾಯಗಳನ್ನು ಸಂಕಷ್ಟಗಳನ್ನು ದಾಟುವ ವಿಧಾನಗಳನ್ನು ನೀಡಿರುತ್ತವೆ. ಧಮ್ಮದ ಸಮರ್ಥತೆವುಳ್ಳ ವಿವಿಧಬಗೆಯ ಆಕಾಂಕ್ಷಿಗಳಿಗೆ ಅವರ ಮನೋಧರ್ಮಕ್ಕೆ ತಕ್ಕಂತೆ ಹಲವು ವಿಧದ ವಿಧಾನಗಳಿವೆ.
ಇಂದು ನೀವು ಕೋಟ್ಯಾಧೀಶರು ಆಗಿರಬಹುದು, ನಾಳೆಗೆ ನೀವು ದಿವಾಳಿ ಆಗಬಹುದು. ಇಂದು ನೀವು ಆರೋಗ್ಯಕರವಾಗಿ ಸುಂದರವಾಗಿರಬಹುದು, ನಾಳೆಗೆ ನಿಮ್ಮ ಸೌಂದರ್ಯ ಮತ್ತು ಯೌವ್ವನ ಅದೃಶ್ಯವಾಗಬಹುದು. ಅದೇರೀತಿ ತದ್ವಿರುದ್ಧವಾಗಿ ನೀವು ಬಡತನವನ್ನು ಅಂತ್ಯಗೊಳಿಸಬಹುದು ಮತ್ತು ಅನಾರೋಗ್ಯವನ್ನು ಸಹಾ ಈಗಿನ ಕರ್ಮದಿಂದ ದೂರೀಕರಿಸಬಹುದು. ಈ ಬುದ್ಧಿವಾದವು ನಿಜವಾದ ಮ್ಯಾಜಿಕ್ನಂತೆ ನಮ್ಮ ಎಲ್ಲಾ ಖಿನ್ನತೆಯ ಮನೋವೃತ್ತಿಗಳೆಲ್ಲವನ್ನು ವಾಸಿಮಾಡುತ್ತದೆ. ಇದು ದುರ್ಬಲರ ಮನಸ್ಸಿಗೆ ಶ್ರೇಷ್ಠವಾದ ಶಕ್ತಿವರ್ಧಕದಂತೆ.
ಶಕ್ತಿಯು ಶಾರೀರಿಕ ಸಾಮಥ್ರ್ಯದಿಂದ ಬರುವುದಿಲ್ಲ. ಅದು ಅದಮ್ಯ ಇಚ್ಛೆಯಿಂದ, ದೃಢತೆಯಿಂದ ಬರುತ್ತದೆ (ಮಹಾತ್ಮಗಾಂಧಿ).
ಮಾನವ ತನ್ನ ಸುಖಗಳನ್ನು ತೃಪ್ತಿಪಡಿಸುವುದಕ್ಕೋಸ್ಕರ ಐಶ್ವರ್ಯವನ್ನು ಗಳಿಸುತ್ತಾನೆ. ಅದನ್ನೇ ಹುಡುಕುತ್ತಾನೆ. ಆಸೆಯು ತೃಪ್ತಿಯನ್ನು ಹುಡುಕುತ್ತದೆ, ಐಶ್ವರ್ಯವು ಈ ತೃಪ್ತಿ ಪಡೆಯುವಂತಾಗಲು ಸಹಾಯ ಮಾಡುತ್ತದೆ. ಆ ಮನುಷ್ಯ ಈ ಸುಖಗಳಿಗಾಗಿ ನೈತಿಕತೆ, ಧಮ್ಮ ಮೌಲ್ಯಗಳು ಮತ್ತು ಶಿಸ್ತನ್ನು ಬಲಿಕೊಟ್ಟರೆ ಆತ ಪಾಪಿಯಾಗುತ್ತಾನೆ. ಜೊತೆಗೆ ಆತನ ಬಯಕೆಗಳು ಅಂತ್ಯವಿಲ್ಲದ ಬಯಕೆಗಳಾಗುತ್ತವೆ. ಪ್ರತಿ ತೃಪ್ತಿಯು 10 ಬಯಕೆಗಳನ್ನು ಸೃಷ್ಟಿಮಾಡುತ್ತದೆ.
ಯಾವುದೇ ವ್ಯಕ್ತಿ ನಿಮ್ಮ ಮಾತುಗಳನ್ನು ದೀರ್ಘಕಾಲ ಕೇಳಬೇಕಾದರೆ ಆತನ ಬಗ್ಗೆಯೇ ಮಾತನಾಡಿ, ಆತನು ಆಸಕ್ತಿಯಿಂದ ಕೇಳುತ್ತಾನೆ.
ಆಸೆಗಳು ತೃಪ್ತಿಯನ್ನು ಹಿಂಬಾಲಿಸುತ್ತವೆ ಮತ್ತು ತೃಪ್ತಿಯು ಆಸೆಗಳನ್ನು ಹಿಂಬಾಲಿಸುತ್ತದೆ. ಅವು ಮಾನವನನ್ನು ಅನೈತಿಕತೆಯೆಡೆಗೆ ಬಾಗುವಂತೆ ಮಾಡುತ್ತವೆ. ಇದರಿಂದಾಗಿ ಪೂರ್ಣ ಮನುಷ್ಯನ ಆದರ್ಶ, ಅಖಂಡತೆ, ಪೂರೈಕೆ ಮತ್ತು ಜ್ಞಾನದಿಂದ ದೂರ ಹಿಮ್ಮೆಟ್ಟುವಂತಾಗುತ್ತದೆ. ಆತನ ಮನಸ್ಸು ಬಯಕೆಗಳಿಗಾಗಿ ಇನ್ನೂ ಹಂಬಲಿಸುವುದನ್ನು ಕಂಡು ಒತ್ತಡಕ್ಕೀಡಾಗುತ್ತಾನೆ. ದೇಹವು ಮುಪ್ಪಿಗೆ ಈಡಾಗುತ್ತದೆ. ಸುಖಕ್ಕೆ ಅನರ್ಹವಾಗುತ್ತದೆ. ಆದರೂ ಹೃದಯ ಮಾತ್ರ ಸುಖಕ್ಕಾಗಿ ಚಿರ ಯೌವ್ವನದಿಂದಲೇ ಕೂಡಿರುತ್ತದೆ. ಈ ಪ್ರಕಾಶಮಯವಾದ ಸತ್ಯ ಆತನಿಗೆ ಚಿಂತನೆ ಮಾಡುವಂತೆ ಮಾಡುತ್ತದೆ. ಆತನು ತನ್ನ ಗತಜೀವಿತವನ್ನು ಅವಲೋಕಿಸಿದಾಗ ತಾನು ತಪ್ಪು ಉದ್ದೇಶಕ್ಕಾಗಿ ಮೂರ್ಖನಾಗಿ ಅಲೆದಾಡಿದೆ, ಕ್ಷಣಿಕ, ನಿಸ್ಸಾರ, ಅನರ್ಥ ವಿಷಯಗಳಿಗೆ ಹಂಬಲಿಸಿದೆ ಎಂದು ಅರಿಯುತ್ತಾನೆ.
ನೀವು ಒಳ್ಳೆಯವರಾಗಲು ಬಯಸಿದರೆ, ತಾನು ಕೆಟ್ಟವನಾಗಲು ಶಕ್ತ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಏಕೆಂದರೆ ಆಗ ಮಾತ್ರ ಜಾಗ್ರತೆಯಿಂದ ಆತನು ಅದಕ್ಕೆ ಬೀಳಲಾರ. ಚಿಂತನೆಗಳಿಗೆ ಸ್ವತಂತ್ರ್ಯವಿದ್ದಾಗಲೇ ಪರಮಾರ್ಥದ ಪ್ರಗತಿ ಸಾಧ್ಯ. ಎಲ್ಲಿ ಮೂಢನಂಬಿಕೆ, ಅಂಧಾನುಕರಣೆ ಆಳುತ್ತಿದೆಯೋ ಅಲ್ಲಿ ಮಾನಸಿಕ ವಿಕಾಸ ಸಾಧ್ಯವಿಲ್ಲ. ಚಿಂತನೆಯ ಸ್ವತಂತ್ರ್ಯದಿಂದಲೇ ಮಾನಸಿಕ ಶಕ್ತಿ ಮತ್ತು ಉನ್ನತಿ ಸಾಧ್ಯವಾಗುತ್ತದೆ. ಸ್ವ-ಮತಾಂಧತೆಯು ಜಡತ್ವಕ್ಕೆ ಕರೆದೊಯ್ಯುತ್ತದೆ. ಮತಾಂಧತೆಯು, ಅಸಹನೆಯ ಜೊತೆಗೆ ಎಲ್ಲೆಡೆ ಹೋಗುವುದು ಎಂದು ಅನುಭವವು ಹೇಳುವುದು, ಒಂದು ಇದ್ದಲ್ಲಿ, ಮತ್ತೊಂದು ದೂರವಿರುವುದಿಲ್ಲ.
ಭೌತಿಕ ಸುಖಗಳಿಗಿಂತ ಮಾನವನಿಗೆ ಪರಮಾರ್ಥ ವಿಕಾಸ ಅತಿ ಪ್ರಧಾನ್ಯಕರ ವಿಷಯವಾಗಿದೆ. ಮಾನವನಿಗೆ ಶಾಂತಿ ಸಮಾಧಾನ ಹಾಗೂ ಸುಖಗಳನ್ನು ಏಕಕಾಲದಲ್ಲಿ ನಾವು ನಿರೀಕ್ಷಿಸಲಾರೆವು ಎಂದು ಇತಿಹಾಸ ಹೇಳುವುದು. ಜನರ ಜೀವನಕ್ಕೆ ಬೇಕಾದ ಪರಮಾರ್ಥದ ಮೌಲ್ಯಗಳು ಮತ್ತು ನೈತಿಕ ತತ್ವಗಳು ಪರಿಣಾತ್ಮಕವಾಗಿ ಧಮ್ಮವು ಮಾತ್ರ ನೀಡಬಲ್ಲದು.
ಮಾನವನು ಎಲ್ಲ ಜೀವಿಗಳಿಗಿಂತ ಪರಮ ಮಹತ್ವಮಯವಾಗಿದ್ದಾನೆ. ಬೌದ್ಧ ಧಮ್ಮದ ಪ್ರಕಾರ ಮಾನವ ದೇವತೆಗಳಿಗಿಂತ ಮಹತ್ವಮಯ, ಏಕೆ ಹೀಗೆ? ಏಕೆಂದರೆ ದೇವತೆಗಳು ತಮ್ಮ ಹಿಂದಿನ ಜನ್ಮಗಳ ಪುಣ್ಯಫಲದಿಂದಾಗಿ ಸುಖದಲ್ಲೇ ಆನಂದಿತವಾಗಿವೆ. ಆದರೆ ಮಾನವ ತನ್ನಲ್ಲಿ ತಾನು ಹೆಚ್ಚುವರಿ ಪ್ರಚನ್ನತೆಗಳಿಂದ ಕೂಡಿದ್ದಾನೆ. ಮಾನವ ತನ್ನ ಅದೃಷ್ಟಕ್ಕೆ ತಾನೇ ಪ್ರಭುವಾಗಿದ್ದಾನೆ. ತನ್ನ ಭವಿಷ್ಯಕ್ಕೆ ತಾನೇ ಹೊಣೆಗಾರನಾಗಿದ್ದಾನೆ. ತನ್ನ ಮನಸ್ಸಿನ ರಣಗಂಗದಲ್ಲಿ ಆತನು ಇಡೀ ವಿಶ್ವವನ್ನು ಗೆಲ್ಲಬಲ್ಲವನಾಗಿದ್ದಾನೆ. ಆದರೆ ಹೀಗಾಗಲು ಆತನು ಕಮ್ಮದ ಸ್ವರೂಪವನ್ನು ಅರಿಯಲೇಬೇಕಾಗಿದೆ. ಏಕೆಂದರೆ ಕರ್ಮ ತತ್ವವೇ ಆತನ ಆಂತರ್ಯ ಮತ್ತು ಬಾಹ್ಯ ಜಗತ್ತನ್ನು ಆಳ್ವಿಕೆ ನಡೆಸುತ್ತದೆ.




4.13 ಪೋಷಕರ ಹೊಣೆಗಾರಿಕೆ
ನಿಮ್ಮ ಮಕ್ಕಳ ಪಾಲನೆ ಮತ್ತು ಕ್ಷೇಮಕ್ಕೆ ನೀವೆ ಹೊಣೆಗಾರರಾಗಿದ್ದೀರಿ. ಮಗುವು ಆರೋಗ್ಯವಾಗಿ, ಬಲಿಷ್ಠವಾಗಿ ಮತ್ತು ಉಪಯುಕ್ತ ನಾಗರಿಕನಾದರೆ ಅದು ನಿಮ್ಮ ಪ್ರಯತ್ನಗಳ ಫಲವಾಗಿದೆ. ಹಾಗೆಯೇ ಮಗುವು ಅಪರಾಧಿಯಾಗಿ ಬೆಳೆದರೂ ಅದಕ್ಕೂ ನೀವೇ ಹೊಣೆಗಾರರಾಗಿದ್ದೀರಿ. ಬೇರೆಯವರನ್ನು ದೂಷಿಸಬೇಡಿ. ಪೋಷಕರಾಗಿ ಮಗುವಿಗೆ ಯೋಗ್ಯ ದಾರಿಯ ಮಾರ್ಗದರ್ಶನ ಮಾಡಬೇಕಾಗಿದ್ದು ನಿಮ್ಮ ಕರ್ತವ್ಯವಾಗಿತ್ತು. ಆದರೂ ಕೆಲವು ತಿದ್ದಲಾಗದ ತಾರುಣ್ಯ ಅಪರಾಧದ ಘಟನೆ ನಡೆದಿವೆ. ಹಾಗಿರುವಾಗಲೂ ಪೋಷಕರಾಗಿ ನೀವೇ ನಿಮ್ಮ ಮಕ್ಕಳ ವರ್ತನೆಗೆ ಹೊಣೆಗಾರರಾಗಿರುವಿರಿ.
ಮಗುವು ತನ್ನ ವಯಸ್ಸಿನಲ್ಲಿ ಅತ್ಯಂತ ಪ್ರಭಾವಕ್ಕೆ ಒಳಗಾಗುವ ಮನಸ್ಸನ್ನು ಹೊಂದಿರುತ್ತದೆ. ಅದಕ್ಕೆ ಅಪಾರ ಪ್ರೀತಿ, ಜಾಗರೂಕತೆ, ವಾತ್ಸಲ್ಯ ಮತ್ತು ಗಮನವನ್ನು ಪೋಷಕರು ನೀಡಲೇಬೇಕಾಗುತ್ತದೆ. ಪೋಷಕರ ಪ್ರೀತಿ, ವಾತ್ಸಲ್ಯ ಮತ್ತು ಮಾರ್ಗದರ್ಶನ ಇಲ್ಲದಿದ್ದರೆ ಮಗುವು ಭಾವನಾತ್ಮಕವಾಗಿ ಅಂಕವೈಕಲ್ಯತೆ ಪಡೆಯುತ್ತದೆ. ಹಾಗು ವಾಸಿಸಲು ಜಗತ್ತು ದಿಗ್ಭ್ರಮೆಕಾರಕ ಸ್ಥಳವೆಂದು ಭಾವಿಸಿಬಿಡುತ್ತದೆ. ಪೋಷಕರ ವಾತ್ಸಲ್ಯ ತೋರುವಿಕೆ ಅಂದರೆ ಮಗುವಿನ ಎಲ್ಲಾ ಬೇಡಿಕೆಗಳನ್ನು ಪರಿಹರಿಸುವುದು ಎಂದು ಅರ್ಥವಲ್ಲ. ಅತಿಯಾದ ಮುದ್ದಿನಿಂದ ಸಹ ಮಗುವು ಹಾಳಾಗುವುದು. ತಾಯಿಯ ವಾತ್ಸಲ್ಯ ಮತ್ತು ಪಾಲನೆಯ ಶಿಸ್ತಿನಿಂದ ದೃಢತೆಯಿಂದ ಕೂಡಿರಬೇಕೆ ಹೊರತು ಒರಟುತನದಿಂದಾಗಲಿ, ಕೋಪ-ದ್ವೇಷದಿಂದ ಅಲ್ಲ. ಮಗುವಿಗೆ ನಿಮ್ಮ ವಾತ್ಸಲ್ಯದ ಅವಶ್ಯಕತೆ ಇದ್ದಂತೆ ಶಿಸ್ತು ಅಷ್ಟೇ ಅವಶ್ಯಕವಾಗಿದೆ. ಅದನ್ನು ಮಗುವು ಅರ್ಥಮಾಡಿಕೊಳ್ಳುವ ಹಾಗೆ ವತರ್ಿಸಿ. ದುರಾದುಷ್ಟಕರ ವಿಷಯವೇನೆಂದರೆ ಇಂದಿನ ಸಮಾಜವು ಮಗುವಿಗೆ ವಾತ್ಸಲ್ಯವನ್ನು ನೀಡುವಲ್ಲಿ ವಿಫಲವಾಗಿದೆ. ಇಂದು ಭೌತಿಕತೆಯ ಉನ್ನತಿಯಲ್ಲಿ, ಲಿಂಗಗಳ ಸಮಾನತೆಯ ಆಕಾಂಕ್ಷೆಯ ಏರುಗತಿಯ ಪ್ರಮಾಣದಿಂದಾಗಿ, ಪತಿಯಂತೆ ದುಡಿಯಬೇಕು ಎಂಬ ಸತಿಯರ ಛಲದಿಂದಾಗಿ ಸ್ಪಧರ್ೆಯಿಂದಾಗಿ ಮಗುವು ಬಡವಾಗಿದೆ.
ಇಂದು ತಾಯಂದಿರು ತಮ್ಮ ಮಗುವಿನ ಲಾಲನೆ, ವಾತ್ಸಲ್ಯಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬ, ಗೌರವ, ಘನತೆಗಾಗಿ ಉದ್ಯಮಗಳಲ್ಲಿ, ಕಛೇರಿಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ವಾತ್ಸಲ್ಯಕ್ಕಿಂತ ಸ್ವಾರ್ಥವೇ ಹೆಚ್ಚು ಒಳಿತು ಎಂಬ ಭಾವನೆಯಲ್ಲಿದ್ದಾರೆ. ಮಕ್ಕಳನ್ನು ಸಂಬಂಧಿಕರ ಬಳಿ ಅಥವಾ ದಾದಿಯರ ಬಳಿ ಬಿಟ್ಟು ಹೋಗುತ್ತಾರೆ. ಒಮ್ಮೆ ಸರ್ವಸ್ವದಂತೆ ಕಾಣುತ್ತಿದ್ದ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೊರಡುವುದರಿಂದಾಗಿ, ಮಗುವಿಗೆ ವಾತ್ಸಲ್ಯ, ಮಾರ್ಗದರ್ಶನ, ಯೋಗ್ಯ ಪ್ರಭಾವಿ ವ್ಯಕ್ತಿತ್ವದಿಂದ ಮಗುವು ವಂಚಿತವಾಗುತ್ತಿದೆ. ತಾಯಿಗೂ ಸಹಾ ಈ ಅಪರಾಧಿ ಪ್ರಜ್ಞೆ ಖಂಡಿತವಾಗಿ ಕಾಡುವುದು, ಪರಿಣಾಮವಾಗಿ ಮಗುವಿನ ಬೇಡಿಕೆಗಳನ್ನೆಲ್ಲ ಈಡೇರಿಸಲು ಸಿದ್ಧಳಾಗುತ್ತಾಳೆ. ಅದರ ಫಲಿತಾಂಶದಿಂದಾಗಿ ಮಗುವು (ಕೆಟ್ಟ ಹಠ, ಸ್ವಾರ್ಥ, ಲೋಭ, ಕೋಪ, ಕರ್ತವ್ಯಹೀನತೆಯ ಗುಣಗಳನ್ನು ಕಲಿತು) ಹಾಳಾಗುತ್ತದೆ.
ಮಗುವಿಗೆ ಅಪಾಯಕಾರಿ ಚಾರಿತ್ರ್ಯವುಂಟು ಮಾಡುವ ಅತ್ಯಾಧುನಿಕ ಆಟಿಕೆಗಳನ್ನು, ಅಂದರೆ ಟ್ಯಾಂಕರ್, ಮಿಷನ್ಗನ್, ಪಿಸ್ತೋಲ್, ಖಡ್ಗಗಳನ್ನು ನೀಡುತ್ತಿದ್ದಾರೆ. ಇದರ ಮನಶಾಸ್ತ್ರೀಯ ಪರಿಣಾಮವು ಒಳ್ಳೆಯದಲ್ಲ. ಮಗುವಿಗೆ ದಯೆ, ಮುದಿತಾ, ಮೈತ್ರಿ, ಸೇವೆ ಸಹಾಯಗಳನ್ನು ಕಲಿಸುವ ಬದಲು ಧ್ವಂಸಕಾರಿ ಪ್ರವೃತ್ತಿಗಳನ್ನು ಕಲಿಸಲಾಗುತ್ತಿದೆ. ಅಂತಹ ಮಗುವು ಹಿಂಸಾ ಪ್ರವೃತ್ತಿಯಿಂದಲೇ ಬೆಳೆಯುತ್ತದೆ. ಅಂತಹ ಆಟಿಕೆಗಳನ್ನು ನೀಡುವುದು ಪ್ರಜ್ಞಾವಂತ ವಾತ್ಸಲ್ಯಮಯಿ ಪೋಷಕರ ಕಾರ್ಯವಲ್ಲ.
ಇಂದು ಪೋಷಕರು ಧ್ವಂದ್ವದಲ್ಲಿದ್ದಾರೆ. ದಿನನಿತ್ಯದ ಕೆಲಸಗಳನ್ನು ಮುಗಿಸಿ ಮನೆಗೆ ಬರುತ್ತಾರೆ, ದಣಿದಿರುತ್ತಾರೆ. ಮನೆಗೆ ಬಂದು ಊಟ, ಟಿ.ವಿ. ಹೀಗೆ ಕಾಲ ಕಳೆದುಬಿಡುತ್ತಾರೆ. ಹೀಗಾಗಿ ಮಗುವಿಗಾಗಿ ಯೋಗ್ಯಕಾಲ ಮೀಸಲಿರಿಸುವದು ತೀರಾ ಅತ್ಯಲ್ಪವಾಗಿಬಿಡುತ್ತದೆ.
ಸ್ತೀ ವಿಮೋಚನೆಯ ಹೆಸರಿನಲ್ಲಿ ಇಂದು ಸ್ತ್ರೀಯರು ಗೃಹದ ಹೊರಗೆ ಪುರುಷರೊಂದಿಗೆ ಸ್ಪಧರ್ಿಸುವುದೇ ಸಮಸ್ಯೆಗೆ ಪರಿಹಾರ ಎಂದು ಭಾವಿಸಿದ್ದಾರೆ. ಅಂತಹ ಸ್ತ್ರೀಯರು ಮಗುವನ್ನು ಹೆರಬೇಕೆ ಅಥವಾ ಬೇಡವೇ ಎಂದು ಸ್ಪಷ್ಟವಾಗಿ ನಿರ್ಣಯಿಸಬೇಕು. ಏಕೆಂದರೆ ಮಗುವನ್ನು ಹೆತ್ತು ನಂತರ ಅದನ್ನು ಸರಿಯಾಗಿ ಲಾಲಿಸದೆ ತ್ಯಜಿಸುವುದು ಬೇಜವಾಬ್ದಾರಿತನವಾಗುತ್ತದೆ. ನೀವು ಸೃಷ್ಟಿಸಿದುದಕ್ಕೆ ನೀವೇ ಹೊಣೆಗಾರರು. ಒಂದು ಮಗುವಿಗೆ ಭೌತಿಕವಾಗಿ ಸಲಹಲ್ಪಡುವುದು ಅತ್ಯಂತ ಅಗತ್ಯವಾಗುತ್ತದೆ. ವಾತ್ಸಲ್ಯಭರಿತ ಮತ್ತು ಜಾಗರೂತನದ ಸಲಹುವಿಕೆಗೆ ಹೋಲಿಸಿದರೆ ಭೌತಿಕ ಹಿತದ ಹಂಚಿಕೆ ಎರಡನೆಯ ಸ್ಥಾನಕ್ಕೆ ಬರುತ್ತದೆ.
ಬಡತನದ ಮನೆಗಳಿದ್ದರೂ, ಅತಿ ಅಲ್ಪ ಆದಾಯವಿದ್ದರೂ ಸಹಾ ಹಲವಾರು ಜನರು ಮಕ್ಕಳಿಗೆ ಅಪಾರ ವಾತ್ಸಲ್ಯ ನೀಡುತ್ತಾರೆ. ಇನ್ನೊಂದೆಡೆ ಹಲವಾರು ಶ್ರೀಮಂತರು ತಮ್ಮ ಮಕ್ಕಳಿಗೆ ಪ್ರತಿ ಭೌತಿಕ ವಸ್ತುಗಳನ್ನು ಅಪಾರವಾಗಿ ನೀಡುತ್ತಾರೆ. ಆದರೆ ವಾತ್ಸಲ್ಯವನ್ನು ಆ ಮಕ್ಕಳು ಅತಿ ಅಲ್ಪವಾಗಿ ಅನುಭವಿಸಿ ಬೆಳೆದ ಮೇಲೆ ಮಾನಸಿಕವಾಗಿ ಮತ್ತು ನೈತಿಕವಾಗಿ ಅಂಗವಿಕಲರಾಗುತ್ತಾರೆ.
ಕುಟುಂಬದ ಪಾಲನೆಯ ಬಗ್ಗೆ ಗಮನಹರಿಸಲು ಹೇಳಿದಾಗ ಕೆಲವು ಸ್ತ್ರೀಯರು ಅದು ಅಪಮಾನದಂತೆ ಮತ್ತು ಸಂಪ್ರದಾಯದಂತೆ, ಹಳೆಯದಂತೆ ಯೋಚಿಸುತ್ತಾರೆ. ಹಿಂದೆ ಸ್ತ್ರೀಯರೊಂದಿಗೆ ಕೆಟ್ಟದಾಗಿ ವತರ್ಿಸುತ್ತಿದ್ದರು. ಆದರೆ ಆಕೆ ಹಾಗೆ ಆಗಲು ಸ್ತ್ರೀಯ ದೌರ್ಬಲ್ಯಕ್ಕಿಂತ, ಪುರುಷನ ಅಜ್ಞಾನವೇ ಕಾರಣವಾಗಿತ್ತು. ಸಂಸ್ಕೃತದಲ್ಲಿ ಗೃಹಿಣಿ ಎನ್ನುತ್ತಾರೆ. ಅಂದರೆ ಗೃಹದ ನಾಯಕಿ ಖಂಡಿತವಾಗಿ ಈ ಪದವು ಸ್ತ್ರೀಯು ಕಡಿಮೆ ಎಂದು ಸೂಚಿಸುವುದಿಲ್ಲ. ಬದಲಾಗಿ ಸ್ತ್ರೀ ಮತ್ತು ಪುರುಷರ ಕರ್ತವ್ಯಗಳನ್ನು ವಿಭಾಗಿಸಿದೆ ಅಷ್ಟೇ.
ಕೆಲವು ದೇಶಗಳಲ್ಲಿ ಗಂಡಂದಿರು ತಮ್ಮ ದುಡಿಮೆಯ ಹಣವನ್ನು ತಮ್ಮ ಪತ್ನಿಯರಿಗೆ ನೀಡುತ್ತಾರೆ. ಅದನ್ನು ಅವರು ಮನೆಗೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಇದರ ಫಲವಾಗಿ ಮಾನವ ತನ್ನ ರಂಗದಲ್ಲಿ ಹೆಚ್ಚು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಪ್ರತಿ ಸಂಗಾತಿಗೆ ಸ್ಪಷ್ಟವಾಗಿ ತನ್ನ ಬಾಧ್ಯತೆಗಳು ತಿಳಿದಿದ್ದಾಗ ಆಗ ಯಾವುದೇ ತಿಕ್ಕಾಟಗಳು ಉಂಟಾಗುವುದಿಲ್ಲ. ಆಗ ಮನೆಯ ವಾತಾವರಣವು ಸುಖ ಶಾಂತಿಗಳಿಂದ ಕೂಡಿದ್ದು, ಮಕ್ಕಳು ಸಹಾ ಚೆನ್ನಾಗಿ ಬೆಳೆಯುವರು.
ಸಂಗಾತಿಯು ಕ್ಷೇಮವಾಗಿ ಇರುವಳೆ ಮತ್ತು ಆಕೆಯು ಕಾರ್ಯಗಳನ್ನೆಲ್ಲಾ ಸರಿಯಾಗಿ ನಿರ್ವಹಿಸುತ್ತಿರುವಳೇ ಎಂದು ಗಂಡನು ಖಂಡಿತವಾಗಿ ನೋಡಬಹುದು. ಕುಟುಂಬದ ಪ್ರತಿ ನಿರ್ಣಯಕ್ಕೂ ಆಕೆಯ ಸಲಹೆಯನ್ನು ತೆಗೆದುಕೊಳ್ಳಬೇಕು. ಹಾಗೂ ಆಕೆಯ ವ್ಯಕ್ತಿತ್ವ ಅಭಿವೃದ್ಧಿಗಾಗಿ ಆಕೆಗೆ ಸ್ವತಂತ್ರ್ಯ ನೀಡಬೇಕು. ಆಕೆಯ ವ್ಯಕ್ತಿಗತ ಅಭಿರುಚಿಗಳಿಗೆ ಸಮಯ ನೀಡಬೇಕು. ಕುಟುಂಬದ ಕ್ಷೇಮಕ್ಕೆ ಈ ರೀತಿಯಾಗಿ ಪತಿ ಮತ್ತು ಪತಿಯರು ಸಮವಾಗಿ ಹೊಣೆಗಾರರು. ಆದರೆ ಅವರು ಪರಸ್ಪರ ಸ್ಪಧರ್ೆಯಲ್ಲಿ ತೊಡಗಬಾರದು.
ತಾಯಿಯು ತಾನು ಮನೆ ಹೊರಗೆ ಕೆಲಸ ಮಾಡುವವಳಾಗಿ ತನ್ನ ಮಗುವಿನ ಸೇವೆಯನ್ನು ತೊರೆಯಬೇಕೋ ಅಥವಾ ಗೃಹಿಣಿಯಾಗಿ, ತನ್ನೆಲ್ಲ ವಾತ್ಸಲ್ಯವನ್ನು ನೀಡುತ್ತಾ ತನ್ನ ಮಗುವನ್ನು ಸಲಹಬೇಕೋ ಇದು ಆಕೆಯು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಬೇಕಾದ ನಿರ್ಣಯವಾಗಿದೆ. ವಿಚಿತ್ರವೆಂದರೆ ಕೆಲವು ಆಧುನಿಕ ತಾಯಿಯರು ಕೆಲವು ಮಿಲಿಟರಿ ಆಡಳಿತದ ದೇಶಗಳಲ್ಲಿ ಅವರು ಸಹಾ ಗನ್ಗಳನ್ನು ಮತ್ತಿತರ ಆಯುಧಗಳನ್ನು ಹಿಡಿದು ಮಾರಣಾಂತಿಕ ಆಯುಧಗಳ ಶಿಕ್ಷಣ ಪಡೆದಿದ್ದಾರೆ. ಅವರು ಯಾವಾಗ ತಮ್ಮ ಮಗುವನ್ನು ಮುದ್ದಾಡುವರೋ ಹಾಗೂ ಯಾವಾಗ ಉತ್ತಮ ನಾಗರಿಕತೆಯ ಶಿಕ್ಷಣ ನೀಡುವರೋ ತಿಳಿಯದು.
ಮಕ್ಕಳ ಬಗ್ಗೆ ಇಂದಿನ ಉದ್ಯಮಶೀಲ ತಾಯಂದಿರ ಮನೋವೃತ್ತಿಯು ಕ್ಷಯಿಸುತ್ತಾ ಹೋಗಿದೆ. ಯಾವುದನ್ನು ಮಕ್ಕಳು ಧಮರ್ೊಚಿತವಾಗಿ ನಿರೀಕ್ಷಿಸುತ್ತಿದ್ದರೋ ಈಗ ಅವೆಲ್ಲ ಸವೆದುಹೋಗಿವೆ. ತಾಯಿಯ ಹಾಲಿನ ಬದಲು ಬಾಟಲಿ ಹಾಲು ಬಂದಿರುವುದು ಸಹಾ ಚಿಂತಾಜನಕ ವಿಷಯವಾಗಿದೆ. ಈವರೆಗೆ ತಾಯಂದಿರು ಮಗುವನ್ನು ತಮ್ಮ ತೋಳಿನಲ್ಲಿ ಮುದ್ದಾಡುತ್ತ ವಾತ್ಸಲ್ಯ ತೋರುತ್ತಾ ಹಾಲುಣಿಸುತ್ತಿದ್ದರು. ಇದರ ಪರಿಣಾಮವಾಗಿ ತಾಯಿ ಮಗುವಿನ ಬಾಂಧವ್ಯ ಮಹತ್ವದ್ದಾಗಿತ್ತು.
ಎದೆಹಾಲು ಉಣಿಸುವ ತಾಯಿಯು ತನ್ನ ಮಾತೃ ಪ್ರವೃತ್ತಿಯಿಂದಾಗಿ ಆಗಾಗ್ಗೆ ಅದ್ಭುತ ಸಂತೃಪ್ತಿಯನ್ನು ತಾಳುತ್ತಾರೆ. ಏಕೆಂದರೆ ಪ್ರಕೃತಿ ಬಯಸುವಂತಹುದು ಮಗುವಿಗಾಗಿ ತನ್ನ ಅಂಗವನ್ನು ನೀಡಿದಂತಹ ಧನ್ಯತಾಭಾವ ಸಿಗುತ್ತದೆ. ಅಂತಹ ಸಂತೃಪ್ತಭಾವ ಬೇರೆಲ್ಲೂ ಸಿಗದು. ಇದರಿಂದಾಗಿ ತಾಯಿಯ ಪ್ರಭಾವ ಮಗುವಿನ ಮೇಲೆ ಹೇಳಲಾಗದಷ್ಟು ಉಂಟಾಗುತ್ತದೆ. ಅಂತಹ ಸನ್ನಿವೇಶಗಳಲ್ಲಿ ಮಗುವಿನ ಮೇಲೆ ಧಮರ್ೊಚಿತವಾದ ವಾತ್ಸಲ್ಯ, ಕೌಟುಂಬಿಕ ಸ್ನೇಹ ಮತ್ತು ವಿಧೇಯತೆಗಳು ಸಹಾ ಸ್ಥಿರವಾಗಿ ಇರುತ್ತವೆ.
ಈ ಸಂಪ್ರದಾಯಸ್ಥ ಆಚರಣೆಗಳು ಮಕ್ಕಳಿಗಾಗಿ ಒಳ್ಳೆಯದು ಮತ್ತು ಹಿತವನ್ನುಂಟು ಮಾಡುವವೇ ಆಗಿವೆ. ಪೋಷಕರಿಗಾಗಿ ಹೇಳುವುದಾದರೆ ವಿಶೇಷವಾಗಿ ತಾಯಿಗಂತೂ ಮಕ್ಕಳ ಮೇಲೆ ವಾತ್ಸಲ್ಯ, ಆರೈಕೆ, ಅಕ್ಕರೆ ಸಲ್ಲಿಸಬೇಕಾದ ಹಕ್ಕುಗಳೇ ಆಗಿವೆ. ಮಗುವೂ ಉತ್ತಮವಾಗಲು ಅಥವಾ ಮೊಂಡ ಮೂರ್ಖನಾಗಲು ತಾಯಿಯು ಸಹಾ ಹೊಣೆಗಾರ ಳಾಗಿರುತ್ತಾಳೆ. ತಾಯಿಯು ತಾರುಣ್ಯ ಲೋಪಗಳನ್ನು ಹೀಗೆ ಕಡಿಮೆಯೂ ಮಾಡಬಲ್ಲಳು. ಉನ್ನತಮಟ್ಟದ ಯೋಚನೆಗಳ ಪ್ರಕಾರ ವಸ್ತು ವಿಷಯಗಳನ್ನು ಅವು ಇರುವಂತೆಯೇ ಕಾಣಿರಿ, ಹೊರತು ನಿಮ್ಮಂತೆ ಕಾಣಬೇಡಿರಿ. ಆಗ ನಿಮಗೆ ತಿಳಿಯುವುದು ಏನೆಂದರೆ ನೀವೇ ಎಲ್ಲದಕ್ಕೂ ಹೊಣೆಗಾರರು ಎಂದು.
ತಮ್ಮ ತಂದೆ-ತಾಯಿಗಳ ದಯೆಯನ್ನು ಅದೆಷ್ಟು ಯುವಕರು ಗುರುತಿಸಿದ್ದಾರೆ? ತಾವು ತಂದೆ-ತಾಯಿಯಾಗುವವರೆಗೂ ಅಥವಾ ತಮ್ಮ ತಂದೆ-ತಾಯಿಗಳನ್ನು ಕಳೆದುಕೊಳ್ಳುವವರೆಗೂ ಇದು ಅವರಿಗೆ ಗೊತ್ತಾಗುವುದಿಲ್ಲ. ನಾವು ಕರ್ತವ್ಯಪರರಾಗಿ, ಕೃತಜ್ಞರಾಗಿ, ವಿಧೇಯರಾಗಿ, ವಿವೇಚನೆಯುಳ್ಳವರಾಗಿ, ಈ ರೀತಿ ತಮ್ಮ ಕೃತಜ್ಞತೆಯನ್ನು ತೋರಿಸಬೇಕಾಗಿದೆ.




4.14 ಮಾನವ ಮತ್ತು ಅವನ ಮಧು (ಜೇನು)
ಈ ಸಣ್ಣ ಉಪಮೆಯಿಂದಾಗಿ ನಾವು ಜೀವನದ ಸಾರ ಸ್ವರೂಪ ಮತ್ತು ಪ್ರಾಪಂಚಿಕ ಸುಖಗಳನ್ನು ಅಥರ್ೈಸಿಕೊಳ್ಳಬಹುದಾಗಿದೆ. ಒಬ್ಬನು ಬಂಡೆಗಳಿಂದ, ಮುಳ್ಳುಗಳಿಂದ ಆವೃತವಾದ ದಟ್ಟವಾದ ಅರಣ್ಯದಲ್ಲಿ ಹೋಗುತ್ತಿರಬೇಕಾದರೆ ದಾರಿಯನ್ನು ಕಳೆದುಕೊಂಡನು. ಅದೇವೇಳೆ ಬೃಹತ್ತಾದ ಆನೆಯೊಂದು ಆತನನ್ನು ಅಟ್ಟಿಸಿಕೊಂಡು ಬಂದಿತು, ಆತನು ಜೀವ ಉಳಿಸಿಕೊಳ್ಳಲು ಓಡಿದನು. ಆತನು ಓಡುತ್ತಿರಬೇಕಾದರೆ ಹಳೆಯ ಬಾವಿಯನ್ನು ಕಾಣುತ್ತಾನೆ. ಅದು ಆನೆಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳವೆಂದು ಭಾವಿಸುತ್ತಾನೆ. ಆದರೆ ದುರಾದೃಷ್ಟಕರವಾದ ಸಂಗತಿ ಏನೆಂದರೆ ಬಾವಿಯ ತಳದಲ್ಲಿ ಭೀಕರ ವಿಷಸರ್ಪವನ್ನು ಕಾಣುತ್ತಾನೆ. ಆದರೆ ಆನೆಯಿಂದ ತಪ್ಪಿಸಿಕೊಳ್ಳಲು ಬೇರೆ ಮಾರ್ಗವೂ ಕಾಣದೆ ಆತನು ಬಾವಿಯಲ್ಲಿ ಧುಮುಕುತ್ತಾನೆ. ಆಗ ಅಲ್ಲಿ ಬಾವಿಯ ಗೋಡೆಯ ಪಕ್ಕದಲ್ಲಿ ಮುಳ್ಳಿನ ಬಳ್ಳಿಯೊಂದನ್ನು ಹಿಡಿಯಲು ಸಫಲನಾಗುತ್ತಾನೆ. ಆ ಬಳ್ಳಿಯನ್ನು ಹಿಡಿದು ನೇತಾಡುವಾಗ ಆತನು 2 ಇಲಿಗಳನ್ನು ಕಾಣುತ್ತಾನೆ. ಒಂದು ಬಿಳಿ ಬಣ್ಣದ್ದು ಮತ್ತು ಒಂದು ಕಪ್ಪು ಬಣ್ಣದ್ದು ಆಗಿದ್ದು, ಅವು ಆತನು ಹಿಡಿದಿರುವ ಬಳ್ಳಿಯನ್ನು ಕತ್ತರಿಸಲು ತೊಡಗುತ್ತವೆ. ಅಲ್ಲೇ ಪಕ್ಕದಲ್ಲೇ ಜೇನುಗೂಡೊಂದು ಕಂಡುಬರುತ್ತದೆ. ಅದರಿಂದ ಜೇನು ತೊಟ್ಟಿಕ್ಕುತ್ತಿರುತ್ತದೆ. ಇಂತಹ ಅಪಾಯಕಾರಿ ದುಃಸ್ಥಿತಿಯಲ್ಲಿ, ಮರಣವನ್ನು ಮೂರು ವಿಭಿನ್ನ ರೀತಿಯಲ್ಲಿ ಎದುರಿಸುತ್ತಿದ್ದರೂ ಆತನು ಲೋಭಕ್ಕೆ ವಶನಾಗಿ ಮಧುವನ್ನು ಆಸ್ವಾದಿಸಲು ತೊಡಗುತ್ತಾನೆ. ಆಗ ಅದೇವೇಳೆಯಲ್ಲಿ ಸತ್ಪುರುಷನೊಬ್ಬನು ಈತನ ದುಃಸ್ಥಿತಿ ಕಂಡು ಕೈಯನ್ನು ನೀಡಿ ಆತನ ಜೀವವನ್ನು ಕಾಪಾಡಲು ಮುಂದಾಗುತ್ತಾನೆ. ಆದರೆ ಈ ಲೋಭಿ ಮತ್ತು ಮೂರ್ಖನು ಆತನ ಮಾತುಗಳನ್ನು ನಿರಾಕರಿಸುತ್ತಾನೆ. ಏಕೆಂದರೆ ಆತನು ಜೇನಿನ ರುಚಿಯ ಆಸ್ವಾದನೆಯಲ್ಲಿ ತೊಡಗಿರುತ್ತಾನೆ. ಆ ಮಧುವಿನ ಸ್ವಾದದಿಂದಾಗಿ ಆತನು ಎದುರಿಸುತ್ತಿರುವ ಅಪಾಯಕರ ಸ್ಥಿತಿಗಳನ್ನೇ ಅಲಕ್ಷಿಸುತ್ತಾನೆ.
ಈ ಉಪಮೆಯು ಅತ್ಯಂತ ಶ್ರೇಷ್ಠವಾದುದ್ದಾಗಿದೆ, ಇಲ್ಲಿ ದಟ್ಟ ಕಾಡು ಎಂದರೆ ಸಂಸಾರವಾಗಿದೆ. ಮುಳ್ಳುಗಳು ಸಂಸಾರದ ಮಾರ್ಗವು ಅನಿಶ್ಚಿತ ಮತ್ತು ತೊಂದರೆದಾಯಕ ವಾಗಿದೆ. ಕಲ್ಲು-ಮುಳ್ಳುಗಳಂತಹ ಕಠಿಣವಾದ ಸಂಸಾರದ ಅರಣ್ಯದಲ್ಲಿ ಸಾಗುವುದು ಸುಲಭವೇನೂ ಅಲ್ಲ. ಇಲ್ಲಿ ಆನೆಯೆಂದರೆ ಮರಣ ಎಂದರ್ಥ. ಮರಣವು ಸದಾ ಹಿಂಬಾಲಿಸುವುದರಿಂದಾಗಿ ನಾವು ಸದಾ ಅಸುಖಿಯಾಗಿರುವೆವು. ಮುಪ್ಪು ಸಹಾ ದುಃಖ ಮತ್ತು ಅಸುರಕ್ಷತೆಯನ್ನು ಸೃಷ್ಟಿಸುತ್ತದೆ. ಬಳ್ಳಿಯು ಈಗಿನ ಜನ್ಮವಾಗಿದೆ, ಹೇಗೆ ಬಳ್ಳಿಯು ಬೆಳೆಯುತ್ತ ಸುತ್ತುತ್ತ ಬೇರೆ ಮರಗಳನ್ನೆಲ್ಲಾ ಸುತ್ತಿಕೊಳ್ಳುವುದೋ ಹಾಗೆಯೇ ಜನ್ಮವು ಸಹಾ ಈ ಲೋಕದಲ್ಲಿ ಸಂಗ್ರಹಿಸುತ್ತ, ಹಿಡಿಯುತ್ತ, ಅಂಟಿಕೊಳ್ಳುತ್ತಾ ಇರುತ್ತದೆ.
ಬಿಳಿ ಮತ್ತು ಕಪ್ಪು ಬಣ್ಣದ ಇಲಿಗಳು ಹಗಲು ಮತ್ತು ರಾತ್ರಿಯನ್ನು ಸೂಚಿಸುತ್ತದೆ. ನಾವು ಹುಟ್ಟಿದ ದಿನದಿಂದಲೇ ನಮ್ಮ ಆಯಸ್ಸು ಕಡಿತಕ್ಕೆ ಒಳಗಾಗಿ ಮೃತ್ಯುವಿನತ್ತ ಸಾಗುತ್ತಿರುತ್ತದೆ. ಜೇನಿನ ಹನಿಗಳು ಪ್ರಾಪಂಚಿಕ ಸುಖಗಳಾಗಿದ್ದು, ಅವು ಮಾನವನನ್ನು ಪ್ರಲೋಭಗೊಳಿಸಿ ಮಾನವನನ್ನು ಈ ಅನಿತ್ಯದ ಮತ್ತು ಅನಿಶ್ಚಿತತೆಯ ಲೋಕದಲ್ಲಿಯೇ ಇರುವಂತೆ ಮಾಡುತ್ತದೆ. ಸಹಾಯ ಮಾಡಲು ಮುಂದಾದ ಸತ್ಪುರುಷರು ಬುದ್ಧ ಭಗವಾನರೇ ಆಗಿದ್ದಾರೆ. ಅವರಿಂದ ಮಾರ್ಗದಶರ್ಿತರಾಗಿ ನಾವು ಸಂಸಾರದಿಂದ ಪಾರಾಗಬಹುದು.
ಯಾವ ಮನುಷ್ಯನು ಈ ಜಗತ್ತೇ ಇರಲು ಚೆನ್ನಾಗಿದೆ ಎಂದು ಭಾವಿಸುತ್ತಾನೋ, ಆತನು ವಿಮುಕ್ತಿಗಾಗಿ ಪ್ರಯತ್ನಿಸದೆ ಪ್ರಾಪಂಚಿಕ ಸುಖ ಭೋಗದಲ್ಲಿ ತಲ್ಲೀನನಾಗುತ್ತಾನೆ. ಹೇಗೆಂದರೆ ಪ್ರಾಣಾಂತಿಕ ಅಪಾಯದಲ್ಲಿದ್ದರೂ ಜೇನಿನ ಸವಿಗಾಗಿ ರಕ್ಷಣೆಗೆ, ಆಶ್ರಯಕ್ಕೆ ಮುಂದಾಗದ ಮೂರ್ಖನಂತೆ. ಪ್ರಕೃತಿಯು ಸಮತೋಲನದಲ್ಲಿದೆ, ಆದರ ಸಮತೋಲನ ಸ್ಥಿತಿಗೆ ಭಂಗ ತರಬಾರದು.
ನಿಸರ್ಗದ ನಿಯಮಗಳು ತಪ್ಪಿಲ್ಲದೇ ಕಾರ್ಯಮಾಡುತ್ತವೆ. ಆ ನಿಯಮಗಳು ಕನಿಕರವಿಲ್ಲದೆ ಹಾಗೂ ಪ್ರಶಂಸೆ, ಪ್ರಾರ್ಥನೆ ಅಥವಾ ಯಾಗ ಯಜ್ಞಗಳಿಗೆ ತೂಗಾಡದೆ ನ್ಯಾಯಯುತವಾಗಿ ಕ್ರಿಯೆ ವಹಿಸುತ್ತವೆ. ಆ ನಿಯಮಗಳು ಯಾವುದೇ ನ್ಯಾಯ ನೀಡುವ ಸೃಷ್ಟಿಕರ್ತ-ನ್ಯಾಯಕರ್ತ-ಶಿಕ್ಷಾಕರ್ತನಿಂದ ಪರಿಪಾಲನೆಯಾಗುತ್ತಿಲ್ಲ. ಅಂತಹ ನಂಬಿಕೆಯೇ ಬಾಲಿಷವಾದುದು. ಅಂತಹ ಮಧ್ಯವತರ್ಿಯ ಸಹಾಯವಿಲ್ಲದೆಯೇ ಶಾರೀರಿಕ ಮತ್ತು ಮಾನಸಿಕ ಕ್ಷೇತ್ರಗಳಲ್ಲಿ ಅವು ಕಾರ್ಯವಹಿಸುತ್ತವೆ. ಅಂತಹ ಒಂದು ನಿಯಮವು ಮಾನವನ ಜೀವಿತದ ಗುಣಮಟ್ಟವನ್ನು ವಧರ್ಿಸುತ್ತದೆ. ಅದೇ ಕಮ್ಮನಿಯಮವಾಗಿದೆ. ಈ ನಿಯಮವು ನೈತಿಕ ವಲಯದಲ್ಲಿ ಕಾರ್ಯವಹಿಸುತ್ತದೆ. ಅದೆಂದರೆ ಯೋಚನೆಗಳಿಂದ, ಮಾತುಗಳಿಂದ ಮತ್ತು ಕ್ರಿಯೆಗಳಿಂದ ಕುಶಲ ಮತ್ತು ಅಕುಶಲ (ಪುಣ್ಯ ಮತ್ತು ಪಾಪ ಕರ್ಮ) ಕಮ್ಮಗಳು ಮಾಡಿದಾಗ ಆ ಕರ್ಮಾನುಸಾರವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳು (ಕಮ್ಮವಿಪಾಕ) ದೊರೆಯುತ್ತವೆ.
ಮಾನವನೋರ್ವನು ಕ್ರೂರಿಯಾಗಿದ್ದರೆ, ನೀಚ ಕೃತ್ಯಗಳಲ್ಲಿ ತೊಡಗಿದರೆ, ನಿಸರ್ಗದ ನಿಯಮಗಳಂತೆ (ಕಮ್ಮ ನಿಯಮ) ನಡೆಯದಿದ್ದರೆ ಆತನು ತನ್ನ ಅಕುಶಲ (ಪಾಪ) ಕೃತ್ಯಗಳಿಂದ ಇಡೀ ಪರಿಸರವನ್ನೇ ಕಲುಶಿತಗೊಳಿಸುತ್ತಿದ್ದಾನೆ. ಅದರ ಪರಿಣಾಮವಾಗಿ, ಅಹಿತಕರ ಫಲಿತಾಂಶವು ಲಭಿಸಿ ಸುಖವಾಗಿ ಜೀವಿಸಲು ಅತಿಕಷ್ಟವಾಗುತ್ತದೆ. ಅಷ್ಟೇ ಅಲ್ಲ, ಸಂತೃಪ್ತವಾಗಿ, ಶಾಂತಯುತವಾಗಿ ಜೀವಿಸಲು ಸಾಧ್ಯವಾಗುವುದಿಲ್ಲ. ಆತನು ತನ್ನ ಕಶ್ಮಲಯುತ ಚಿತ್ತದಿಂದಾಗಿ ತನಗೆ ಮತ್ತು ಪರರಿಗೆ ದುಃಖವನ್ನು ಸೃಷ್ಟಿಸುತ್ತಾನೆ. ಮತ್ತೊಂದೆಡೆ ಆತನು ಬ್ರಹ್ಮಾಂಡದ ನಿಸರ್ಗದ ನಿಯಮಗಳಂತೆ ನಡೆದಾಗ, ಯೋಗ್ಯವಾಗಿ ಮತ್ತು ನಿಂದಾತೀತವಾಗಿ ಜೀವನ ನಡೆಸಿದಾಗ, ಆತನು ವಾತಾವರಣವನ್ನು ಶುದ್ಧಿಗೊಳಿಸುತ್ತಾನೆ. ಅಷ್ಟೇ ಅಲ್ಲದೆ, ತನ್ನ ಸದ್ಗುಣಗಳಿಂದಾಗಿ ಹೇರಳ ಪುಣ್ಯ ಸಂಗ್ರಹಗೊಳಿಸುತ್ತಾನೆ. ಹೀಗೆ ಆತನು ತನ್ನಲ್ಲಿ ಮಾತ್ರವಲ್ಲದೆ ತನ್ನ ಸುತ್ತಲಿನ ಸರ್ವರಲ್ಲಿಯೂ ಸಕಾರಾತ್ಮಕ ಮಾನಸಿಕ ಅಲೆಗಳನ್ನು, ಪ್ರಭಾವವನ್ನು ಬೀರುತ್ತಾನೆ. ಯಾರು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಜೀವಿಸುತ್ತಾರೋ, ಅವರು ಅದರ ಪರಿಣಾಮವನ್ನು ಭೌತಿಕವಾಗಲಿ ಅಥವಾ ಮಾನಸಿಕವಾಗಲಿ ತಪ್ಪದೆ ಎದುರಿಸುತ್ತಾರೆ.

                                                                           - 0 - 0 - 0  

No comments:

Post a Comment

ಪರಧರ್ಮಗಳ ಬಗ್ಗೆ ಬೌದ್ಧರ ಸೌಹಾರ್ದ ಮನೋಭಾವ

 ಪರಧರ್ಮಗಳ ಬಗ್ಗೆ  ಬೌದ್ಧರ ಸೌಹಾರ್ದ ಮನೋಭಾವ ಈ ಲೇಖನದ ಉದ್ದೇಶವೇನೆಂದರೆ ಧರ್ಮದ ಉತ್ತಮ ತಿಳುವಳಿಕೆಗೆ, ಧಾಮರ್ಿಕ ಸಹಿಷ್ಣುತೆಗೆ ಮತ್ತು ಬೌದ್ಧರ ದೃಷ್ಟಿಕೋನದಿಂದ ವಿಶಾ...